ಆ್ಯಪ್ನಗರ

ಚುನಾವಣೆ ನಡೆಸುವುದರಲ್ಲಿ ಸಿಎಂ ಪುತ್ರ ವಿಜಯೇಂದ್ರ ಎಕ್ಸ್‌ಪರ್ಟ್ - ರೇವಣ್ಣ ವ್ಯಂಗ್ಯ‌

ಬಿಜೆಪಿ, ಕಾಂಗ್ರೆಸ್‌ ಎರಡು ರಾಷ್ಟ್ರೀಯ ಪಕ್ಷಗಳು ಸೇರಿ ಜೆಡಿಎಸ್‌ ಮುಗಿಸಲು ಹೊರಟಿವೆ. ಅದು ಅವರ ಕನಸಷ್ಟೇ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹಾಗೂ ಎಚ್‌ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷ ಸಂಘಟಿಸುತ್ತೇವೆ ರೇವಣ್ಣ ಹೇಳಿದ್ದಾರೆ.

Vijaya Karnataka 11 Nov 2020, 7:46 pm
ಹಾಸನ: ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಚುನಾವಣೆ ನಡೆಸುವುದರಲ್ಲಿ ಎಕ್ಸ್‌ಪರ್ಟ್‌. 2023ರ ಚುನಾವಣೆಯನ್ನು ಆ ಚಾಣಕ್ಯನ ನೇತೃತ್ವದಲ್ಲೇ ನಡೆಸುವುದು ಒಳ್ಳೆಯದು ಎಂದು ಮಾಜಿ ಸಚಿವ ಎಚ್‌ಡಿ ರೇವಣ್ಣ ಪರೋಕ್ಷವಾಗಿ ವ್ಯಂಗ್ಯವಾಡಿದರು.
Vijaya Karnataka Web HD Revanna


"ಬಿಜೆಪಿ ಕಾರ್ಯಕರ್ತರು ಕ್ಷೇತ್ರದಲ್ಲೇ ಬೀಡುಬಿಟ್ಟು ಹಣ ಹಂಚಿದರೂ, ಚುನಾವಣಾ ಆಯೋಗ ಕಣ್ಣು ಮುಚ್ಚಿ ಕುಳಿತಿತ್ತು. ಪೊಲೀಸರು, ಅಧಿಕಾರಿಗಳು ಕೈ ಕಟ್ಟಿ ಕುಳಿತರು. ಶಿರಾ ಕ್ಷೇತ್ರಕ್ಕೆ ಈಗಲಾದರೂ ನೀರು ಕೊಟ್ಟು ಮಾತು ಉಳಿಸಿಕೊಳ್ಳಲಿ," ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ಹೊರಹಾಕಿದರು.

"2023ರವರೆಗೂ ಯಡಿಯೂರಪ್ಪ ಅವರೇ ಸಿಎಂ ಆಗಿರಲಿ. ಬಿಜೆಪಿ ಶಾಸಕರು ಇರುವ ಕ್ಷೇತ್ರಕ್ಕೆ ಮಾತ್ರವೇ ಹೆಚ್ಚಿನ ಅನುದಾನ ನೀಡಲಿ. ಇದಕ್ಕೆ ನಮ್ಮದೇನು ಅಭ್ಯಂತರವಿಲ್ಲ," ಎಂದ ರೇವಣ್ಣ, "ಬಿಜೆಪಿ ಮತ್ತು ಕಾಂಗ್ರೆಸ್‌ ಎರಡು ರಾಷ್ಟ್ರೀಯ ಪಕ್ಷಗಳು ಸೇರಿ ಜೆಡಿಎಸ್‌ ಮುಗಿಸಲು ಹೊರಟಿವೆ. ಅದು ಅವರ ಕನಸು ಅಷ್ಟೇ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹಾಗೂ ಎಚ್‌ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷ ಸಂಘಟಿಸುತ್ತೇವೆ. ಎಷ್ಟು ದಿನ ಬಿಜೆಪಿ ಈ ರೀತಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ," ಎಂದು ಪ್ರಶ್ನಿಸಿದರು.

"ಆರ್‌ಆರ್‌ ನಗರದಲ್ಲಿ ಗೆಲ್ಲುವ ಕುದುರೆ ಎಂದು ನಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ಕಾಂಗ್ರೆಸ್‌ನವರು‌ ಸೆಳೆದುಕೊಂಡು ಅಭ್ಯರ್ಥಿಯನ್ನಾಗಿಸಿದರೂ ಆ ಕುದುರೆ ಕೂಡ ಮುಗ್ಗರಿಸಿತು. ಆ ಕ್ಷೇತ್ರ ಒಂದಕ್ಕೆ 900 ಕೋಟಿ ಅಭಿವೃದ್ಧಿ ಕೆಲಸ ಕೊಟ್ಟಿದ್ದಾರೆ. ಬಿಜೆಪಿಯ 104 ಶಾಸಕರಿಗೆ ಅನುದಾನ ನೀಡಲಿ. ಆ ಬಗ್ಗೆ ಪ್ರಶ್ನೆ ಮಾಡಲು ಹೋಗಲ್ಲ. ಅಧಿಕಾರ ಸಿಕ್ಕಾಗ ಏನು ಅಭಿವೃದ್ಧಿ ಮಾಡ್ಬೇಕೋ ಮಾಡ್ತೀವಿ," ಎಂದರು.

"ಶಿರಾ ಚುನಾವಣೆಯಲ್ಲಿಅನುಕಂಪದ ಕಾರಣ ಟಿಕೆಟ್‌ ನೀಡಿದೆವು. ಸೋತರು ಎದೆಗುಂದಬೇಕಿಲ್ಲ ಎಂದು ಕಾರ್ಯಕರ್ತರಿಗೆ ಹೇಳಿಬಂದಿದ್ದೇನೆ. ಪಕ್ಷ ಸಂಘಟಿಸುವುದು ಗೊತ್ತಿದೆ. ತಳಮಟ್ಟದಿಂದ ಪಕ್ಷ ಸಂಘಟಿಸುತ್ತೇವೆ," ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ