ಆ್ಯಪ್ನಗರ

ಲೋಕಸಭೆಗಷ್ಟೇ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ

ಹಾಸನ: ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳ ಮೈತ್ರಿ ಲೋಕಸಭೆ ಚುನಾವಣೆಗೆ ಸೀಮಿತ. ಮೈತ್ರಿ ಸರಕಾರ ಪತನವಾಗಿ ಚುನಾವಣೆ ಎದುರಾದರೆ ಪ್ರತ್ಯೇಕ ಹೋರಾಟ ಅನಿವಾರ‍್ಯ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಬಿ.ಶಿವರಾಂ ಹೇಳಿದರು.

Vijaya Karnataka 31 Mar 2019, 5:00 am
ಹಾಸನ: ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳ ಮೈತ್ರಿ ಲೋಕಸಭೆ ಚುನಾವಣೆಗೆ ಸೀಮಿತ. ಮೈತ್ರಿ ಸರಕಾರ ಪತನವಾಗಿ ಚುನಾವಣೆ ಎದುರಾದರೆ ಪ್ರತ್ಯೇಕ ಹೋರಾಟ ಅನಿವಾರ‍್ಯ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಬಿ.ಶಿವರಾಂ ಹೇಳಿದರು.
Vijaya Karnataka Web co allence only lokasabha election b shivaram
ಲೋಕಸಭೆಗಷ್ಟೇ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ


ಜಿಲ್ಲೆಯಲ್ಲಿ ಜೆಡಿಎಸ್‌ ವಿರುದ್ಧ ದಶಕಗಳ ಕಾಲದಿಂದ ಕಾಂಗ್ರೆಸ್‌ ಹೋರಾಟ ನಡೆಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಹೈಕಮಾಂಡ್‌ ತೀರ್ಮಾನದಂತೆ ಸೈದ್ಧಾಂತಿಕವಾಗಿ ಹೊಂದಾಣಿಕೆಯಾಗಿದೆ. ಕೋಮುವಾದಿ ಪಕ್ಷ ವನ್ನು ದೂರವಿಡಲು ನಮಗೆ ಈ ಹೊಂದಾಣಿಕೆ ಅಗತ್ಯವಿದೆ. ಕೇವಲ ಕರ್ನಾಟಕದಲ್ಲಿ ಮಾತ್ರ ಈ ಹೊಂದಾಣಿಕೆ ಮಾಡಿಕೊಂಡಿಲ್ಲ. ದೇಶದ 11ರಾಜ್ಯಗಳಲ್ಲಿ ಈ ಮೈತ್ರಿ ಇದೆ. ಸೈದ್ಧಾಂತಿಕವಾಗಿ ಕಾಂಗ್ರೆಸ್‌ ಜೆಡಿಎಸ್‌ ಹೊಂದಾಣಿಕೆಯಾಗಿವೆ ಎಂಬುದನ್ನು ಕಾರ್ಯಕರ್ತರಿಗೆ ಮನವರಿಕೆ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅರಸೀಕೆರೆ ಸಭೆಯಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿ ಬಿಜೆಪಿಗೆ ಹೋಗುವುದಾಗಿ ಹೇಳಿದರು. ಹೋಗುವವರು ಹೋಗಲಿ, ನಿಷ್ಠಾವಂತರು ಇರುತ್ತಾರೆ ಎಂದರು.

ಮಾಜಿ ಸಚಿವ ಎ.ಮಂಜು ಕಾಂಗ್ರೆಸ್‌ ತೊರೆದ ಕೂಡಲೇ ಕಾಂಗ್ರೆಸ್‌ ಕೊನೆಯಾಗುವುದಿಲ್ಲ. ಮಂಜುಗೆ ಅಧಿಕಾರ ನೀಡಿದರೂ ಅವರಿಗೆ ಪಕ್ಷ ಕಟ್ಟುವ ಬದ್ಧತೆ ಏಕೆ ಬರಲಿಲ್ಲ. ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ನೆಲ ಕಚ್ಚುವಂತೆ ಮಾಡಿದ್ದು ಎ.ಮಂಜು ಸಾಧನೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಎ.ಮಂಜು ಬಿಜೆಪಿಗೆ ಹೋಗಿದ್ದೇನೆ ಎನ್ನುತ್ತಿದ್ದಾರೆ. ಮಂಜು ಅವರಿಂದ ಮೋದಿ ಪ್ರಧಾನಿಯಾಗಬೇಕಾ? ಮೋದಿಯವರು ಮಂಜು ಇಲ್ಲದಿರುವಾಗಲೇ ಪ್ರಧಾನಿಯಾಗಿರಲಿಲ್ಲವೇ ಎಂದು ಟಾಂಗ್‌ ನೀಡಿದರು.

ಮಂಜು ಅವಕಾಶವಾದಿ ರಾಜಕಾರಣಿ. ಅವರ ಶಕ್ತಿ ನಮಗೆ ತಿಳಿದಿದೆ. ನಮಗೆ ಪಕ್ಷ ಕ್ಕಿಂತ ಯಾರೂ ಮುಖ್ಯವಲ್ಲ. ನಮ್ಮ ಪಕ್ಷ ಹೇಳಿದಂತೆ ನಾವು ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ. ನಮಗೆ ಒಂದೊಂದು ಕ್ಷೇತ್ರವೂ ಮುಖ್ಯವಾಗಿದೆ. ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಎ.ಮಂಜು ಕಾಂಗ್ರೆಸ್‌ನಲ್ಲಿದ್ದು ಶಾಸಕರಾಗಿ, ಮಂತ್ರಿಯಾಗಿದ್ದರು. ಅಂಥವರು ಬಿಜೆಪಿಗೆ ಬಂದಿದ್ದರಿಂದ ನನಗೆ ನೋವಾಗಿದ್ದು ಇದನ್ನು ವಿರೋಧಿಸಿ ನಾನು ಕಾಂಗ್ರೆಸ್‌ ಸೇರಿದ್ದೇನೆ ಎಂದು ಎಚ್‌.ಯೋಗಾ ರಮೇಶ್‌ ಹೇಳಿದರು.

ಬಿಜೆಪಿಯಲ್ಲಿ ನನ್ನಂಥ ಸಾವಿರಾರು ಮಂದಿಗೆ ನೋವಾಗಿದೆ. ಎ.ಮಂಜು ಕಾರ್ಯಕರ್ತರ ವಿರೋಧದ ನಡುವೆಯೂ ಅಭ್ಯರ್ಥಿ ಮಾಡಿದ್ದಾರೆ. ಉಸ್ತುವಾರಿ ಸಚಿವರಾಗಿದ್ದವರನ್ನು ಅರಕಲಗೂಡು ಕ್ಷೇತ್ರದ ಜನತೆ ಸೋಲಿಸಿದ್ದಾರೆ. ಅಂಥವರು ಬಿಜೆಪಿ ಅಭ್ಯರ್ಥಿ ಆಗಿರುವುದರಿಂದ ಮೋದಿ ಅಲೆ ಜಿಲ್ಲೆಯಲ್ಲಿ ಕೊಚ್ಚಿ ಹೋಗುವುದು ನಿಶ್ಚಿತ ಎಂದರು.

ಕಾಂಗ್ರೆಸ್‌ ಮುಖಂಡರಾದ ಎಚ್‌.ಕೆ.ಮಹೇಶ್‌, ಡಿಸಿಸಿ ಅಧ್ಯಕ್ಷ ಮಂಜುನಾಥ್‌ ಹಾಜರಿದ್ದರು.
------------
ಪ್ರಧಾನಿ ನರೇಂದ್ರಮೋದಿ ಮಾತುನಂಬಿ ಜನತೆ ಖಾತೆ ತೆರೆದಿದ್ದೇ ಭಾಗ್ಯ. ಖಾತೆಗೆ 15 ಲಕ್ಷ ರೂ.ಇರಲಿ 15 ರೂ.ಕೂಡ ಬಂದಿಲ್ಲ ಹೀಗಾಗಿ ವನಚಭ್ರಷ್ಟ ಬಿಜೆಪಿ ಎಂಬುದು ಸಾಬೀತಾಗಿದ್ದು, ಈ ಬಾರಿ ಜನತೆ ತಕ್ಕಪಾಠ ಕಲಿಸಲಿದ್ದಾರೆ.
- ಗೋಪಾಲಸ್ವಾಮಿ, ಸಂಸದೀಯ ಕಾರ್ಯದರ್ಶಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ