ಆ್ಯಪ್ನಗರ

ಕಳಪೆ ಕಾಮಗಾರಿ ವಿರುದ್ಧ ದೂರು: ಬಿಜೆಪಿ

ಅರಸೀಕೆರೆ ಕ್ಷೇತ್ರದಲ್ಲಿಕಾಂಕ್ರೀಟ್‌ ರಸ್ತೆಗಳ ಕಾಮಗಾಗಿ ಕಳಪೆ ಮಟ್ಟದಲ್ಲಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸುವಂತೆ ಸರಕಾರಕ್ಕೆ ದೂರು ನೀಡಲಾಗುವುದು ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಜಿವಿಟಿ ಬಸವರಾಜು ತಿಳಿಸಿದರು.

Vijaya Karnataka 14 Sep 2019, 5:00 am
ಅರಸೀಕೆರೆ: ಅರಸೀಕೆರೆ ಕ್ಷೇತ್ರದಲ್ಲಿಕಾಂಕ್ರೀಟ್‌ ರಸ್ತೆಗಳ ಕಾಮಗಾಗಿ ಕಳಪೆ ಮಟ್ಟದಲ್ಲಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸುವಂತೆ ಸರಕಾರಕ್ಕೆ ದೂರು ನೀಡಲಾಗುವುದು ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಜಿವಿಟಿ ಬಸವರಾಜು ತಿಳಿಸಿದರು.
Vijaya Karnataka Web complaint against poor work bjp
ಕಳಪೆ ಕಾಮಗಾರಿ ವಿರುದ್ಧ ದೂರು: ಬಿಜೆಪಿ


ನಗರದಲ್ಲಿಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ''ಕ್ಷೇತ್ರದಲ್ಲಿಕುಡಿಯುವ ನೀರಿನ ಸಮಸ್ಯೆ, ನಿರುದ್ಯೋಗ, ಆಸ್ಪತ್ರೆಗಳ ಸಮಸ್ಯೆ, ಮೂಲಭೂತ ಸೌಲಭ್ಯಗಳ ಕೊರತೆ ಹೆಚ್ಚಿದೆ. ಅಲ್ಲದೇ ಶೈಕ್ಷಣಿಕವಾಗಿ ಡಿಪ್ಲೊಮಾ ಮತ್ತು ಎಂಜಿನಿಯರಿಂಗ್‌ ಕಾಲೇಜು ಅನುಮತಿಯಾಗಿದೆ ಎಂದು ಶಾಸಕರು ಕಳೆದ ಲೋಕಸಭೆ ಚುನಾವಣೆಯಲ್ಲಿಬಿಟ್ಟಿ ಪ್ರಚಾರ ಮಾಡುವ ಮೂಲಕ ಕ್ಷೇತ್ರದ ಜನರನ್ನು ದಾರಿತಪ್ಪಿಸುತ್ತಿದ್ದಾರೆ. ಇನ್ನೊಂದೆಡೆ ತೆಂಗಿನ ಮರಗಳನ್ನು ಕಳೆದುಕೊಂಡ ರೈತರಿಗೆ ಸೂಕ್ತವಾದ ಪರಿಹಾರವನ್ನು ತಮ್ಮ ಸರಕಾರದ ಅವಧಿಯಲ್ಲೂ ನೀಡಿಸಲು ವಿಫಲರಾಗಿದ್ದಾರೆ,''ಎಂದು ದೂರಿದರು.

''ಕ್ಷೇತ್ರದ ಶಾಸಕರು ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಪ್ರಧಾನಿ ಮೋದಿ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ. ಉದ್ದಟತನದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೇಳಿಕೆಗಳು ಇದೇ ರೀತಿ ಮುಂದುವರಿದರೇ ಉಗ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ,''ಎಂದರು.

ಗೋಷ್ಠಿಯಲ್ಲಿ ನಗರಾಧ್ಯಕ್ಷ ಜಿ.ವಿ. ಮನೋಜ್‌ಕುಮಾರ್‌, ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‌, ಹಿರೇಸಾದರಹಳ್ಳಿ ಯೋಗೀಶ್‌, ನಗರ ಕಾರ್ಯದರ್ಶಿ ಮುರಳಿ, ರವಿಕುಮಾರ್‌, ಕೆಂಪುಸಾಗರ ಶಿವರಾಜ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ