ಆ್ಯಪ್ನಗರ

ಕಾಂಗ್ರೆಸ್‌ ಪಕ್ಷಕ್ಕೆ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳೋ ಯೋಗ್ಯತೆ ಇಲ್ಲ: ಈಶ್ವರಪ್ಪ

ಒಬ್ಬರು ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳೋ ಯೋಗ್ಯತೆ ಇಲ್ಲಾ. ಬಿಜೆಪಿ ಬಗ್ಗೆ ಅವರು ಮಾತನಾಡೋದು ಏನಿದೆ? ಮೊದಲು ಅವರ ಪಕ್ಷದ ಸ್ಥಿತಿಯನ್ನು ನೋಡಿಕೊಳ್ಳಲಿ ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಕೆಎಸ್‌ ಈಶ್ವರಪ್ಪ ಹರಿಹಾಯ್ದರು.

Vijaya Karnataka Web 22 Jan 2020, 1:00 pm
ಹಾಸನ: ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ವಿದೇಶ ಪ್ರವಾಸದಿಂದ ವಾಪಾಸು ಬಂದ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮುಗಿಯಲಿದೆ. ಈಗಾಗಲೆ ಈ ವಿಚಾರವಾಗಿ ಬಿಎಸ್‌ವೈ ಅಮಿತ್ ಶಾ ಜೊತೆಗೂ ಮಾತನಾಡಿದ್ದಾರೆ ಎಂದು ಸಚಿವ ಕೆಎಸ್‌ ಈಶ್ವರಪ್ಪ ತಿಳಿಸಿದ್ದಾರೆ.
Vijaya Karnataka Web KS Eshwarappa


ಹಾಸನದಲ್ಲಿ ಗ್ರಾಮೀಣಾಭಿವೃದ್ಧಿ ವ್ಯಾಪ್ತಿಯ ಪ್ರಗತಿ ಪರಿಶೀಲನೆ ಸಭೆಗೆ ಆಗಮಿಸಿದ್ದ ಈಶ್ವರಪ್ಪ ಅವರು ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳುತ್ತಾರೆ, ಯಾರನ್ನು ಬಿಡುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಕೇಂದ್ರದ ನಾಯಕರು ಹಾಗು ಸಿಎಂ ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ಅವರ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಂದ ಶಾಸಕರಿಂದ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದೆ. ಅವರ ಋಣವನ್ನು ನಾವು ತೀರಿಸಲೇ ಬೇಕಿದೆ. ಅವರನ್ನು ತೃಪ್ತಿ ಯಲ್ಲಿ ಇಡಬೇಕಿದೆ. ಅವರಿಗೆ ಸಮದಾನ ಮಾಡುವ ವ್ಯವಸ್ಥೆ ಆಗಬೇಕಿದೆ. ಸಿದ್ದರಾಮಯ್ಯ ಅವರಿಗೆ ಈಗ ಉದ್ಯೋಗ ಇಲ್ಲ. ವಿಪಕ್ಷದಲ್ಲಿ ನಾನೂ ಇದ್ದೀನಿ ಎಂದು ತೋರಿಸೋಕೆ ಆಟ ಆಡಿಸುತ್ತಿದ್ದಾರೆ ಎಂದು ಈಶ್ವರಪ್ಪ ಹರಿಹಾಯ್ದರು.

ಎಲ್ಲರೂ ಒಂದಾಗಿ ದುಷ್ಟರನ್ನು ಮಟ್ಟ ಹಾಕಲು ಯತ್ನಿಸಬೇಕು: ಹಾಸನದಲ್ಲಿ ಈಶ್ವರಪ್ಪ ಕರೆ

ಅಮಿತ್ ಶಾ ಭೇಟಿ ನಿಷ್ಪ್ರಯೋಜಕ ಎಂದಿದ್ದ ಸಿದ್ದರಾಮಯ್ಯ ಅವರಿಗೆ ಟಾಂಗ್‌ ನೀಡಿದ ಈಶ್ವರಪ್ಪ, "ರಾಜ್ಯದಲ್ಲಿ ಎಲ್ಲಿದೆ ರೀ ಕಾಂಗ್ರೆಸ್? ಚೂರು ಚೂರಾಗಿದೆ. ಸಿದ್ದರಾಮಯ್ಯ ಅವರು ಅಧ್ಯಕ್ಷ ನಾನೇ, ವಿಪಕ್ಷ ನಾಯಕ ನಾನೇ, ಶಾಸಕಾಂಗ ಪಕ್ಷದ ನಾಯಕ ನಾನೇ ಆಗಬೇಕು ಅನ್ನುತ್ತಾರೆ. ಮುಂದಿನ ಸಿಎಂ ಕೂಡ ನಾನೇ ಅಂತಾರೆ'' ಎಂದು ಲೇವಡಿ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರು ಎಂದು ಘೋಷಣೆಯಾದ ನಂತರ ಕಾಂಗ್ರೆಸ್‌ ಎರಡು ಹೋಳು: ಈಶ್ವರಪ್ಪ

ಸಿದ್ದರಾಮಯ್ಯ ಅವರು ಹೀಗೆ ಹಗಲು ಕನಸು ಕಾಣುತ್ತಿದ್ದಾರೆ. ಅವರ ಪಕ್ಷದ ಎಲ್ಲರೂ ಅವರ ವಿರುದ್ಧ ಇದ್ದಾರೆ. ಸಿದ್ದರಾಮಯ್ಯರ ಸರ್ವಾಧಿಕಾರಿ ಆಟಕ್ಕೆ ಬೆಂಬಲ ಕೊಡಲ್ಲ ಎನ್ನುತ್ತಿದ್ದಾರೆ. ಪರಮೇಶ್ವರ ಒಂದುಕಡೆ, ಶಿವಕುಮಾರ್ ಒಂದುಕಡೆ. ಹೀಗೆ ಕಾಂಗ್ರೆಸ್‌ ಛಿದ್ರವಾಗಿದೆ. ಸಿದ್ದರಾಮಯ್ಯ ತಮ್ಮ ಇರುವಿಕೆಯನ್ನು ತೋರಿಸಲು ಅಮಿತ್ ಶಾ, ಮೋದಿಗೆ ಬೈಯ್ಯುತ್ತಾರೆ. ಆದರೆ ಅವರ ಪಕ್ಷದ ಸ್ಥಿತಿ ನೋಡಿಕೊಳ್ಳಲಿ. ಒಬ್ಬರು ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳೋ ಯೋಗ್ಯತೆ ಇಲ್ಲಾ. ಬಿಜೆಪಿ ಬಗ್ಗೆ ಅವರು ಮಾತನಾಡೋದು ಏನಿದೆ? ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ