ಆ್ಯಪ್ನಗರ

ಮುಂದುವರೆದ ಭೂಕುಸಿತ: ಬಿಸಿಲೆ ರಸ್ತೆ ಈಗ ತೊರೆ

ಸಕಲೇಶಪುರ ಭಾಗದಲ್ಲಿ ಭೂಕುಸಿತ ಮುಂದುವರಿದಿದ್ದು, ಇತ್ತೀಚೆಗಷ್ಟೇ ಸೇವೆಗೆ ಸಿಕ್ಕಿದ್ದ ಬಿಸಿಲೆ ರಸ್ತೆ ಸಂಪೂರ್ಣ ಮಾಯವಾಗಿ, ಆ ಜಾಗ ಈಗ ನದಿ ತೊರೆಯಾಗಿ ಬದಲಾಗಿದೆ.

Vijaya Karnataka 20 Aug 2018, 5:00 am
ವಣಗೂರು(ಸಕಲೇಶಪುರ): ಸಕಲೇಶಪುರ ಭಾಗದಲ್ಲಿ ಭೂಕುಸಿತ ಮುಂದುವರಿದಿದ್ದು, ಇತ್ತೀಚೆಗಷ್ಟೇ ಸೇವೆಗೆ ಸಿಕ್ಕಿದ್ದ ಬಿಸಿಲೆ ರಸ್ತೆ ಸಂಪೂರ್ಣ ಮಾಯವಾಗಿ, ಆ ಜಾಗ ಈಗ ನದಿ ತೊರೆಯಾಗಿ ಬದಲಾಗಿದೆ.
Vijaya Karnataka Web continued landslide the bisile road is now brooklet
ಮುಂದುವರೆದ ಭೂಕುಸಿತ: ಬಿಸಿಲೆ ರಸ್ತೆ ಈಗ ತೊರೆ


ಪ್ರಸಿದ್ಧ ಯಾತ್ರಾ ಸ್ಥಳ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಕೋಟ್ಯಂತರ ರೂ. ವೆಚ್ಚದಲ್ಲಿ ಕಾಂಕ್ರಿಟ್‌ ರಸ್ತೆಯಾಗಿ ದುರಸ್ತಿ ಪಡಿಸಿ, ಕೇವಲ 15 ದಿನಗಳ ಹಿಂದೆ ಉದ್ಘಾಟಿಸಲಾಗಿತ್ತು. ಈಗ ಅಡ್ಡ ಹೊಳೆ ಭಾಗದ ಈ ರಸ್ತೆಯ ನೀರು ಹರಿಯುತ್ತಿದೆ.

ಬೆಟ್ಟಗುಡ್ಡಗಳು ನೋಡು ನೋಡುತ್ತಿದ್ದಂತೆಯೇ ಪ್ರಪಾತಕ್ಕೆ ಕುಸಿಯುತ್ತಿವೆ. ಕಾಫಿ, ಏಲಕ್ಕೆ ತೋಟಗಳು ಕೊಚ್ಚಿಹೋಗುತ್ತಿವೆ. ವಿದ್ಯುತ್‌, ನೀರು, ರಸ್ತೆ ಸಂಪರ್ಕವಿಲ್ಲದೇ ಜನತೆ ತತ್ತರಿಸಿದ್ದಾರೆ. ಜೀವ ಭಯದಲ್ಲಿ ರಾತ್ರಿ ಕಳೆಯುವ ಪರಿಸ್ಥಿತಿ ಉಂಟಾಗಿದೆ.

ಕೊಡಗಿಗೆ ಹೊಂದಿಕೊಂಡಿರುವ ಕೊಡಗಿನ ಮಾಗೇರಿ, ಹಿಜ್ಜನಹಳ್ಳಿ, ಪಟ್ಲ, ತಂಬಲಿಗೇರಿ, ಅಜ್ಜಿಗದ್ದೆ, ಓಡಹಳ್ಳಿ, ಕಾಗಿನೆರೆ, ಉಚ್ಚಂಗಿ, ಬಾಳೆಹಳ್ಳ, ಚಂಗಡಹಳ್ಳಿ, ಕಣಿವೆಬಾಗಿಲು ಸಮೀಪ ಭೂಕುಸಿತ ಉಂಟಾಗಿದೆ.

ತಂಬಲಿಗೇರಿ, ಗುರನಹಳ್ಳಿ, ನದಿ ತುಂಬಿ ಹರಿಯುತ್ತಿದ್ದು, ನದಿ ಪಕ್ಕದ ನಿವಾಸಿಗಳು ಆತಂಕದ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಕಾಗಿನೆರೆ ಸಮೀಪ ಬಾಳೆಹಳ್ಳದಲ್ಲಿ ಭೂಕುಸಿತ ಉಂಟಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಸಾರಿಗೆ ಸಂಪರ್ಕ ಕಳೆದುಕೊಂಡಿದ್ದಾರೆ. ''ಬಿಸಿಲೆ, ಹಡ್ಲಗದ್ದೆ, ಗ್ರಾಮದಲ್ಲಿ ಭೂಕುಸಿತ ಆಗಾಗ ಸಂಭವಿಸುತ್ತಿದ್ದು, ಘಟನೆ ನಡೆದು ಮೂರು ದಿನ ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ'' ಎಂದು ಗ್ರಾಮಸ್ಥರು ದೂರುತ್ತಾರೆ.

ಓಡಹಳ್ಳಿ ಗ್ರಾಮದ ದೇವಪ್ಪ ಅವರ 8 ಹೆಕ್ಟೇರ್‌, ತಿಮ್ಮಪ್ಪ -2 ಹೆಕ್ಟೇರ್‌, ರಮೇಶ್‌ - 2 ಹೆಕ್ಟೇರ್‌, ಶಂಭುಗೌಡ - 1 ಹೆಕ್ಟೇರ್‌, ಪುಟ್ಟಸ್ವಾಮಿ - 4 ಹೆಕ್ಟೇರ್‌, ಡಿ.ಎಸ್‌.ಮಂಜುನಾಥ್‌ ಅವರ 2 ಹೆಕ್ಟೇರ್‌ ಕಾಫಿ ತೋಟಕ್ಕೆ ಗವಿ ಬೆಟ್ಟದ ಗುಡ್ಡಕುಸಿದಿದ್ದು, ಕಾಫಿ, ಏಲಕ್ಕಿ ತೋಟ ಸಂಪೂರ್ಣ ನಾಶವಾಗಿದೆ.

ಶಾಸಕ, ಎಸಿ ಭೇಟಿ

ಹಿಜ್ಜನಹಳ್ಳಿ ಗ್ರಾಮಸ್ಥರು ಜೀವ ಭಯದಿಂದ ಗ್ರಾಮ ತೊರೆಯುತ್ತಿದ್ದಾರೆ ಎಂಬ ವಿಜಯ ಕರ್ನಾಟಕ ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ, ಶನಿವಾರ ಮಾಗೇರಿ ಗ್ರಾಮದ ಸರಕಾರಿ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆದಿದೆ. ಇಲ್ಲಿಗೆ ಭೇಟಿ ನೀಡಿರುವ ಕಂದಾಯ ಅಧಿಕಾರಿಗಳಿಗೆ ಭಾರಿ ಮಳೆ ಸ್ವಾಗತ ನೀಡಿದೆ. ಶಾಸಕ ಎಚ್‌.ಕೆ.ಕುಮಾರಸ್ವಾಮಿ ,ಉಪವಿಭಾಗಾಧಿಕಾರಿ ಲಕ್ಷ್ಮೇಕಾಂತ್‌ ರೆಡ್ಡಿ,ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಪರಿಶೀಲಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ