ಆ್ಯಪ್ನಗರ

ಪಾಳು ಬಿದ್ದ ಜಮೀನಲ್ಲಿ ಕಾಳು ಬಿತ್ತನೆ

ಹೊಳೆನರಸೀಪುರ: ತಾಲೂಕಿನ ಬಹುತೇಕ ಭಾಗಗಳಲ್ಲಿ ಖಾಲಿಯಿದ್ದ ಹೊಲಗದ್ದೆಗಳಲ್ಲಿ ಕೃಷಿ ಚಟುವಟಿಕೆ ಶುರುವಾಗಿದೆ. ಭಿತ್ತನೆಗೆ ಪೂರಕವಾದ ಮಳೆ ಕೆಲವೆಡೆ ಬೀಳದಿದ್ದರೂ, ಒಂದೊಂದುಕಡೆ ಒಂದು ಹದವಾದ ವರ್ಷಾಧಾರೆಯಾಗಿದೆ.

Vijaya Karnataka 20 May 2018, 5:00 am
ಹೊಳೆನರಸೀಪುರ: ತಾಲೂಕಿನ ಬಹುತೇಕ ಭಾಗಗಳಲ್ಲಿ ಖಾಲಿಯಿದ್ದ ಹೊಲಗದ್ದೆಗಳಲ್ಲಿ ಕೃಷಿ ಚಟುವಟಿಕೆ ಶುರುವಾಗಿದೆ. ಭಿತ್ತನೆಗೆ ಪೂರಕವಾದ ಮಳೆ ಕೆಲವೆಡೆ ಬೀಳದಿದ್ದರೂ, ಒಂದೊಂದುಕಡೆ ಒಂದು ಹದವಾದ ವರ್ಷಾಧಾರೆಯಾಗಿದೆ.
Vijaya Karnataka Web corn forming in hassan
ಪಾಳು ಬಿದ್ದ ಜಮೀನಲ್ಲಿ ಕಾಳು ಬಿತ್ತನೆ


ತಾಲೂಕಿನಲ್ಲಿ ಮುಂಗಾರು ಶುಭ ಆರಂಭವಾಗಿಲ್ಲ. ಮುಂದೆ ಸಮರ್ಪಕವಾಗಿ ಮಳೆ ಬೀಳಲಿದೆ ಎಂಬ ಆಶಾ ಭಾವನೆಯ ಮೇಲೆ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.

ಬರದ ಹಿನ್ನಲೆಯಲ್ಲಿ ಮಳೆ ಇಲ್ಲದೆ ಖಾಲಿ ಉಳಿದಿದ್ದ ಹೊಲ, ಗದ್ದೆಗಳಲ್ಲಿ ಕೃಷಿ ಕಾರ್ಯ ನಡೆದಿದೆ. ಮಳೆ ಉತ್ತಮವಾಗಿ ಆಗುವವರೆಗೂ ಕಾಳು, ಕಡ್ಡಿ ಬೆಳೆದುಕೊಳ್ಳಲು ರೈತರು ಮನಸ್ಸು ಮಾಡಿದ್ದಾರೆ. ಜೂನ್‌ ನಂತರ ಜುಲೈ ನಲ್ಲಿ ಉತ್ತಮ ಮಳೆ ಬೀಳಬಹುದೆಂಬ ನಿರೀಕ್ಷೆ ಇದೆ. ಅದಾಗದಿದ್ದರೂ ನಾಲೆಯ ನೀರಿನಲ್ಲಿ ಕೃಷಿ ಮಾಡೇ ತೀರುತ್ತೇವೆಂಬ ಛಲ ಅನ್ನದಾತರಲ್ಲಿದೆ.

ಕಸಬಾ ಮತ್ತು ಹಳೆಕೋಟೆ ಹೋಬಳಿಗೆ ಹೋಲಿಸಿದರೆ ಹಳ್ಳಿಮೈಸೂರಿನಲ್ಲಿ ಉತ್ತಮ ಮಳೆಯಾಗಿದೆ. ಹಳ್ಳಿ ಮೈಸೂರು ವ್ಯಾಪ್ತಿಯಲ್ಲಿ ಕಳೆದ 15 ದಿನಗಳಲ್ಲಿ 3 ಬಾರಿ ಸಾದಾರಣ ಮಳೆಯಾಗಿದೆ. ಹಳೇಕೋಟೆ ಹೋಬಳಿಯಲ್ಲಿ ಶುಕ್ರವಾರ ಭಾಗಶಃ ಮಳೆಯಾಗಿದೆ. ಹಳೆ ಕೋಟೆ, ಕಾಮ ಸಮುದ್ರ, ಅಗ್ರಹಾರ ಗೇಟ್‌, ಕೆಕೆ ಹೊಸೂರು, ಉಣ್ಣೇನ ಹಳ್ಳಿ ಸುತ್ತಮುತ್ತಲು ಮಳೆಯಾಗಿದೆ. ಗುಂಜೇವು, ದೇವರಮುದ್ದನಹಳ್ಳಿ ಭಾಗಕ್ಕೆ ಮಳೆ ಸಮರ್ಪಕವಾಗಿಲ್ಲ. ಮಳೆಯಾಗಿರುವ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪ್ರಾರಂಭವಾಗಿದೆ. ನಾಲೆ ನೀರು ಲಭ್ಯ ಇರುವ ಕಡೆಗಳು ಸೇರಿದಂತೆ ಉತ್ತಮ ಮಳೆಯಾಗಿರುವ ಭಾಗಗಳಲ್ಲಿ ಸುಮಾರು 900 ಹೆಕ್ಟೇರ್‌ ಪ್ರದೇಶದಲ್ಲಿ ಹಲಸಂದೆ ಬಿತ್ತನೆ ಕಾರ್ಯ ನಡೆದಿದೆ. 330 ಹೆಕ್ಟರ್‌ ಕೃಷಿ ಭೂಮಿಯಲ್ಲಿ ಹೆಸರು, ಉದ್ದು ಮತ್ತು ಮುಸುಕಿನ ಜೋಳ ಬಿತ್ತನೆ ಮಾಡುತ್ತಿದ್ದಾರೆ.

ಕೃಷಿ ಇಲಾಖೆಗಳಲ್ಲಿ ಹೆಸರು, ಉದ್ದು ಮತ್ತು ಮುಸುಕಿನಜೋಳ ಬಿತ್ತನೆ ಕಾಳುಗಳ ವಿತರಣೆ ಮಾಡಲಾಗುತ್ತಿದೆ. ಹಳ್ಳಿಮೈಸೂರಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಈಗಾಗಲೇ 150 ಹೆಕ್ಟೇರ್‌ನಷ್ಟು ಹೊಗೆಸೊಪ್ಪು ನಾಟಿ ಮಾಡಲಾಗಿದೆ. ಇನ್ನುಳಿದಂತೆ ಹೊಳೆ ಸಮೀಪದ ಕೃಷಿ ಭೂಮಿಯಲ್ಲಿ ನೀರಿನ ಅನುಕೂಲತೆ ಮಾಡಿಕೊಂಡಿರುವ ರೈತರು ಜ್ಯೂಸ್‌ ಕಬ್ಬು ಬೆಳೆಯಲು ಆಸಕ್ತರಾಗಿದ್ದಾರೆ. ಈವರೆಗೆ 335 ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಜ್ಯೂಸ್‌ಕಬ್ಬು ಬಿತ್ತನೆಯಾಗಿದೆ.

ಪರ್ಯಾಯ ನೀರಿನ ವ್ಯವಸ್ಥೆ ಇಲ್ಲದೇ ಮಳೆಯಾಶ್ರಿತ ತರಿ ಭೂಮಿ ಹೊಂದಿರುವ ರೈತರು ರಾಗಿ, ಮುಸುಕಿನ ಜೋಳ ಬೆಳೆಯುವತ್ತ ಚಿತ್ತ ಹರಿಸಿದ್ದಾರೆ. ಇಲಾಖೆಯಲ್ಲಿ ಬಿತ್ತನೆ ಬೀಜಕ್ಕೆ ರೈತರಿಂದ ಬೇಡಿಕೆ ಬಂದಿದ್ದರ ಹಿನ್ನಲೆಯಲ್ಲಿ ಬೀಜದ ಕಾಳುಗಳ ವಿತರಣೆ ಮಾಡಲಾಗಿದೆ. ಅಗತ್ಯ ದಾಸ್ತಾನು ಇರಿಸಲಾಗಿದೆ. ಬಿತ್ತನೆ ಕಾಳುಗಳನ್ನು ಶೇ50ರಷ್ಟು ರಿಯಾಯಿತಿ ದರದಲ್ಲಿ, ಪಜಾತಿ, ಪಪಂಗಡದವರಿಗೆ ಶೇ 75ರ ರಿಯಾಯಿತಿ ದರಲ್ಲಿ ವಿತರಿಸಲಾಗುತ್ತಿದೆ . ರೈತರು ಹಸಿರೆಲೆ ಗೊಬ್ಬರಕ್ಕಾಗಿ ಸೆಣಬು, ಡಯೆಂಚ ಪೂರಕ ಬೆಳೆ ಬೆಳೆಯಲು ಆಸಕ್ತರಿದ್ದಲ್ಲಿ ಇಲಾಖೆಯಿಂದ ಬಿತ್ತನೆ ಪಡೆದುಕೊಳ್ಳಬಹುದು ಎಂದು ಕೃಷಿ ಸಹಾಯಕ ಅಧಿಕಾರಿ ಬಸವರಾಜ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ