ಆ್ಯಪ್ನಗರ

ಹಸುವಿನ ಒದೆತ: ಕಳ್ಳನ ಸಾವು

ಹಸುವನ್ನು ಕಳ್ಳತನ ಮಾಡಲು ಹೋದ ಆರೋಪಿ ಹಸುವಿನ ಒದೆತಕ್ಕೆ ಸಿಕ್ಕಿ ಮೃತಪಟ್ಟ ಘಟನೆ ತಾಲೂಕಿನಲ್ಲಿ ನಡೆದಿದೆ.

Vijaya Karnataka 23 Jun 2019, 5:00 am
ಚನ್ನರಾಯಪಟ್ಟಣ: ಹಸುವನ್ನು ಕಳ್ಳತನ ಮಾಡಲು ಹೋದ ಆರೋಪಿ ಹಸುವಿನ ಒದೆತಕ್ಕೆ ಸಿಕ್ಕಿ ಮೃತಪಟ್ಟ ಘಟನೆ ತಾಲೂಕಿನಲ್ಲಿ ನಡೆದಿದೆ.
Vijaya Karnataka Web cow kick the thiefs death
ಹಸುವಿನ ಒದೆತ: ಕಳ್ಳನ ಸಾವು


ತುಮಕೂರು ಜಿಲ್ಲೆ ತಿಪಟೂರು ತಾಲೂಕು ಗೊರಗೊಂಡನಹಳ್ಳಿಯ ಗೋವಿಂದಪ್ಪ (50) ಮೃತ ವ್ಯಕ್ತಿ. ನುಗ್ಗೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಲೂಕಿನ ನವಿಲೆ ಸಮೀಪ ಅಪ್ಪೇನಹಳ್ಳಿಯ ತೋಟದ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವನ್ನು ಕಳವು ಮಾಡಿಕೊಂಡು ಕತ್ತಲಲ್ಲಿ ಎಳೆದುಕೊಂಡು ಹೋಗುತ್ತಿದ್ದ ವೇಳೆ ಆತನ ಅರಿವಿಗೆ ಬಾರದಂತೆ ಅದೇ ಹಸು ಬಲವಾಗಿ ಒದ್ದಿದೆ. ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೆಳಗ್ಗೆ ಜಮೀನಿನ ಕಡೆ ಹೋದವರಿಗೆ ಆತ ಮೃತಪಟ್ಟಿರುವುದು ತಿಳಿದು ಠಾಣೆಗೆ ಮಾಹಿತಿ ನೀಡಿದ್ದಾರೆಂದು ನುಗ್ಗೇಹಳ್ಳಿ ಪೊಲೀಸರು ತಿಳಿಸಿದ್ದಾರೆ.

ಗೋವಿಂದಪ್ಪ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಸರಕಾರಿ ಆಸ್ಪತ್ರೆ ವೈದ್ಯ ಹೊಯ್ಸಳ ಅವರು, ಮರ್ಮಾಂಗಕ್ಕೆ ಬಲವಾಗಿ ಬಿದ್ದ ಏಟಿನಿಂದ ಮೃತಪಟ್ಟಿದ್ದಾರೆ. ಬೇರೆ ಇನ್ಯಾವುದೇ ಭಾಗಕ್ಕೆಪೆಟ್ಟು ಬಿದ್ದಿಲ್ಲ ಎಂದು ತಿಳಿಸಿದ್ದಾರೆ. ದೇಹದ ಯಾವುದೇ ಭಾಗಕ್ಕೆ ಪೆಟ್ಟು ಬೀಳದ ಪರಿಣಾಮ ಗೋವಿಂದಪ್ಪ ಹಸುವಿನ ಒದೆತಕ್ಕೆ ಮೃತಪಟ್ಟಿರುವುದು ದೃಢಪಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ