ಆ್ಯಪ್ನಗರ

ವಿದ್ಯಾರ್ಥಿಗಳಲ್ಲಿ ಕಾಯಕ ಪ್ರಜ್ಞೆ, ದೈಹಿಕ ಪರಿಶ್ರಮದ ಅರಿವು ಮೂಡಿಸಿ

ಕ್ರೀಡಾಪಟುಗಳಲ್ಲಿ ಸತತ ಅಭ್ಯಾಸ, ಪರಿಶ್ರಮ ಹಾಗೂ ಸಮಯ ಪರಿಪಾಲನೆ ಅತಿಮುಖ್ಯವಾಗಿರಬೇಕು ಎಂದು ಕೋಳಗುಂದ ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ ಹೇಳಿದರು.

Vijaya Karnataka 8 Aug 2018, 5:00 am
ಜಾವಗಲ್‌: ಕ್ರೀಡಾಪಟುಗಳಲ್ಲಿ ಸತತ ಅಭ್ಯಾಸ, ಪರಿಶ್ರಮ ಹಾಗೂ ಸಮಯ ಪರಿಪಾಲನೆ ಅತಿಮುಖ್ಯವಾಗಿರಬೇಕು ಎಂದು ಕೋಳಗುಂದ ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ ಹೇಳಿದರು.
Vijaya Karnataka Web HSN-HSN07JVL1P


ಕೋಳಗುಂದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಮಾದನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಜಾವಗಲ್‌ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ 2018-19 ನೇ ಸಾಲಿನ 2 ದಿನಗಳ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಸಭೆ ಸಮಾರಂಭಗಳಲ್ಲಿ ಭಾಗವವಿಸುವವರಲ್ಲಿ ಸಮಯ ಪರಿಪಾಲನೆ ಮುಖ್ಯವಾಗಿರಬೇಕು. ಕ್ರೀಡಾಪಟುಗಳು ಕ್ರೀಡಾಮನೋಭಾವ ಬೆಳಸಿಕೊಳ್ಳಬೇಕು. ಸೋಲು-ಗೆಲುವನ್ನು ಸಮಾನ ದೃಷ್ಟಿಯಲ್ಲಿ ಕಾಣಬೇಕು. ಶಿಕ್ಷ ಕರಲ್ಲಿ ಸಚ್ಚಾರಿತ್ರ್ಯ ಇರಬೇಕು. ವಿದ್ಯಾರ್ಥಿಗಳಲ್ಲಿ ಕಾಯಕ ಪ್ರಜ್ಞೆ, ದೈಹಿಕ ಪರಿಶ್ರಮದ ಅರಿವನ್ನು ಮೂಡಿಸಬೇಕು. ಗ್ರಾಮದ ಸರಕಾರಿ ಆಸ್ಪತ್ರೆಗೆ ಕಾಂಪೌಂಡ್‌, ಎ.ಎನ್‌.ಎಂ. ವಸತಿಗೃಹದ ದುರಸ್ತಿ ಹಾಗೂ ಶಾಲಾ ಮೈದಾನದ ದುರಸ್ತಿ ಮಾಡಿಸಿಕೊಡುವಂತೆ ಜಿ.ಪಂ. ಅಧ್ಯಕ್ಷ ರಲ್ಲಿ ಮನವಿ ಮಾಡಿದರು.

ಥ್ರೋಬಾಲ್‌ ಎಸೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಜಿ.ಪಂ.ಅಧ್ಯಕ್ಷೆ ಶ್ವೇತಾ ದೇವರಾಜು, ಶಾಲಾ ಪರಿಸರದಲ್ಲಿ ವಿದ್ಯೆಯೊಂದಿಗೆ ಕ್ರೀಡೆಯು ಅತ್ಯವಶ್ಯ. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಸದಾ ಉತ್ಸಾಹ ಮತ್ತು ಆಸಕ್ತಿಯೊಂದ ಭಾಗವಹಿಸಬೇಕು. ಕ್ರೀಡೆಗಳಲ್ಲಿ ಭಾಗವವಿಸುತ್ತಿದ್ದೇನೆಂಬ ಹೆಮ್ಮೆ ಕ್ರೀಡಾಪಟುವಿನಲ್ಲಿರಬೇಕು. ಹೋಬಳಿ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಕ್ರೀಡಾಪಟುಗಳಿಗೆ ಜಿಲ್ಲಾ ಪಂಚಾುತಿ ವತಿಯಿಂದ ಧನ ಸಹಾಯ ನೀಡಲಾಗುವುದೆಂದರು.

ಕೋಳಗುಂದ ಹಾಗೂ ಜಾವಗಲ್‌ ಸ.ಪ.ಪೂ ಕಾಲೇಜಿನ ಆಟದ ಮೈದಾನ ಅಭಿವೃದ್ಧಿಪಡಿಸಿಕೊಡುವುದಾಗಿ ಭರವಸೆ ನೀಡಿದರು.

ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿದ ಜಿ.ಪಂ.ಸದಸ್ಯೆ ಲೋಲಾಕ್ಷ ಮ್ಮ ಮಹಾದೇವಪ್ಪ, ವಿದ್ಯಾರ್ಥಿಗಳು ಓದಿನೊಂದಿಗೆ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ವೈಯಕ್ತಿಕ ವರ್ಚಸ್ಸನ್ನು ವೃದ್ಧಿಗೊಳಿಸಿಕೊಳ್ಳಬಹುದು ಎಂದರು.

ತಾಲೂಕು ದೈಹಿಕ ಶಿಕ್ಷ ಕ ಪರಿವೀಕ್ಷ ಕ ತಿಮ್ಮೇಶ್‌ ಮಾತನಾಡಿದರು. ಗ್ರಾ.ಪಂ.ಅಧ್ಯಕ್ಷೆ ಲಕ್ಷ ್ಮಮ್ಮ ಚಂದ್ರಪ್ಪ ಅಧ್ಯಕ್ಷ ತೆ ವಹಿಸಿದ್ದರು. ತಾ.ಪಂ. ಸದಸ್ಯರಾದ ವಿಜಯಕುಮಾರ್‌ ಶಿವಪ್ರಕಾಶ್‌, ಎ.ಪಿ.ಎಂ.ಸಿ ಸದಸ್ಯರಾದ ದೇವರಾಜು, ಧರ್ಮಪ್ಪ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಅಧ್ಯಕ್ಷ ಜಯರಾಮ್‌, ಕಾರ್ಯದರ್ಶಿ ಸದಾನಂದಮೂರ್ತಿ, ಎನ್‌.ಜಿ.ಒ ಕಾರ್ಯದರ್ಶಿ ಕುಮಾರ್‌, ಸಿ.ಆರ್‌.ಪಿ.ಗಳಾದ ಸೋಮಶೇಖರ್‌, ಹರೀಶ್‌, ಸಂತೋಷ್‌ಕುಮಾರ್‌, ಮಹಾದೇವಪ್ಪ ಮಾತನಾಡಿದರು. ಎಸ್‌.ಡಿ.ಎಂ.ಸಿ ಅಧ್ಯಕ್ಷ ರುಗಳಾದ ಆರತಿ, ಕಿರಣ್‌, ಗ್ರಾ.ಪಂ. ಸದಸ್ಯರಾದ ಮಾದನಹಳ್ಳಿ ನಾಗರಾಜು, ಮಹಾಲಿಂಗಪ್ಪ, ಸತೀಶ, ತಾಲೂಕು ದೈಹಿಕ ಶಿಕ್ಷ ಕರ ಸಂಘ, ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘ, ಎನ್‌.ಜಿ.ಒ ಸಂಘಗಳ ಪದಾಧಿಕಾರಿಗಳಾದ ಸತೀಶ್‌, ವಿರೂಪಾಕ್ಷ , ಲಿಂಗರಾಜು, ಕುಬೇರ, ಲತೇಶ್‌, ಓಂಕಾರ್‌, ಕೆ.ಎನ್‌.ನಿಂಗೇಗೌಡ, ಬಿ.ಆರ್‌.ಪಿ ಲೋಕೇಶ್‌, ಹೋಬಳಿ ಸಿ.ಆರ್‌.ಪಿಗಳು, ವಿವಿಧ ಶಾಲೆಗಳ ಶಿಕ್ಷ ಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರುಗಳು ಭಾಗವವಿಸಿದ್ದರು. ಕ್ರೀಡಾಪಟು ಮಲ್ಲಿಕಾರ್ಜುನ್‌ ಪ್ರತಿಜ್ಞಾವಿಧಿ ಬೋಧಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ