ಆ್ಯಪ್ನಗರ

ಬೇಲೂರು ಅಶುಚಿತ್ವದ ತವರೂರು: ಅನಾರೋಗ್ಯ ತಾಣವಾದ ದಮಯಂತಿ ಹೊಂಡ

1980ರ ಪೂರ್ವದಲ್ಲಿ ಸಂತೆಗೆ ಬರುವ ವ್ಯಾಪಾರಿಗಳು, ಕುಡಿಯುವ ನೀರಿನ ಮೂಲವಾಗಿತ್ತು. ಬೋರ್‌ವೆಲ್‌ಗಳು ಬಂದ ಬಳಿಕ ಹೊಂಡವನ್ನು ಶುಚಿತ್ವಗೊಳಿಸದೆ ನಿರ್ಲಕ್ಷಿಸಿದ ಪರಿಣಾಮ ನೀರಿನ ಮೂಲ ನಾಶವಾಗಿ ಯಾರು ಆಕ್ರಮಿಸಿಕೊಳ್ಳುವರೋ ಎಂಬ ಆತಂಕ ಜನತೆಯನ್ನು ಕಾಡುತ್ತಿದೆ.

Vijaya Karnataka 20 Oct 2021, 10:01 pm
ಹಾಸನ: ಶಿಲೆಗಳ ತವರೂರಾದ ಬೇಲೂರಿಗೆ ನೂರಾರು ದೇಶದ ಪ್ರವಾಸಿಗರು ಆಗಮಿಸಿ ಶಿಲ್ಪಿಗಳ ಕಲಾಚಾತುರ್ಯ ನೋಡಿ ಸಂಭ್ರಮಿಸಿದರೆ, ದೇಗುಲದಿಂದ 300 ಮೀಟರ್‌ ಅಂತರದಲ್ಲಿಇರುವ ನೀರಿನ ಮೂಲವಾದ ದಮಯಂತಿ ಹೊಂಡ ಅಶುಚಿತ್ವ ಕಂಡು ಅತೀವ ಬೇಸರ ವ್ಯಕ್ತಪಡಿಸಿ ತೆರಳುತ್ತಿದ್ದಾರೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಹೊಂಡ ಗಿಡ, ಗಂಟಿಗಳಿಂದ ತುಂಬಿಹೋಗಿದ್ದು, ಗಬ್ಬು ವಾಸನೆ ಬೀರುತ್ತಿದ್ದು, ಸಮೀಪದ ಶಾಲಾ ವಿದ್ಯಾರ್ಥಿಗಳು, ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.

ಎರಡು ಬಾರಿ ಆಕಸ್ಮಿಕ ಸಿಎಂ ಆಗಿದ್ದವರು ಕುಮಾರಸ್ವಾಮಿ: ಪ್ರೀತಂ ಗೌಡ ತಿರುಗೇಟು

1980ರ ಪೂರ್ವದಲ್ಲಿ ಸಂತೆಗೆ ಬರುವ ವ್ಯಾಪಾರಿಗಳು, ಸಾರ್ವಜನಿಕರಿಗೆ ಕುಡಿಯುವ ನೀರಿನ ಮೂಲವಾಗಿತ್ತು. ಬೋರ್‌ವೆಲ್‌ಗಳು ಬಂದ ಬಳಿಕ ಹೊಂಡವನ್ನು ಶುಚಿತ್ವಗೊಳಿಸದೆ ನಿರ್ಲಕ್ಷಿಸಿದ ಪರಿಣಾಮ ನೀರಿನ ಮೂಲ ನಾಶವಾಗಿ ಯಾರು ಆಕ್ರಮಿಸಿಕೊಳ್ಳುವರೋ ಎಂಬ ಆತಂಕ ಜನತೆಯನ್ನು ಕಾಡುತ್ತಿದೆ. ಹೊಂಡಕ್ಕೆ ಹೊಂದಿಕೊಂಡಂತೆ ನಾಲ್ಕರಿಂದ ಐದು ಎಕರೆಯಷ್ಟು ಜಾಗವಿದ್ದು, ಅದನ್ನು ಅಭಿವೃದ್ಧಿ ಪಡಿಸಿದರೆ ಪ್ರವಾಸಿತಾಣವಾಗಿ ಮಾರ್ಪಡುವ ಸಾಧ್ಯತೆ ಇದೆ. ಚನ್ನಕೇಶವ ದೇಗುಲದ ಆಸ್ತಿಯಾಗಿರುವ ಕಾರಣ ಅಲ್ಲಿ ನಕ್ಷತ್ರವನ, ರಾಶಿವನ, ನವಗ್ರಹವನ, ಪಂಚವಟಿ ವನವನ್ನಾಗಿ ಅಭಿವೃದ್ಧಿಪಡಿಸಲು ಅವಕಾಶವಿದೆ ಎನ್ನುತ್ತಾರೆ ಜಿಲ್ಲಾ ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ವೇದಿಕೆ ಸಂಚಾಲಕ ಟಿ.ವಿ.ನಟರಾಜ್‌ ಪಂಡಿತ್‌.

ಎಚ್‌ಡಿಕೆಯಿಂದ ಸಹಾಯ ಪಡೆದು ಈಗ ಅವರನ್ನೇ ಬಯ್ಯುತ್ತಿದ್ದಾರೆ: ಬಿಜೆಪಿ, ಕಾಂಗ್ರೆಸ್‌ ವಿರುದ್ಧ ರೇವಣ್ಣ ಸಿಡಿಮಿಡಿ

ಜಿಲ್ಲಾಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ವೇದಿಕೆ ಮತ್ತು ಸ್ಕೌಟ್ಸ್‌ ಅಂಡ್‌ ಗೈಡ್ಸ್‌ನ ತಂಡದ ಸಹಾಯದಿಂದ ಒಮ್ಮೆ ಸ್ವಚ್ಛತಾ ಕಾರ್ಯವನ್ನು ಮಾಡಲಾಗಿದೆ. ಕೊರೊನಾ ಬಳಿಕ ಪುನಃ ಅದೇ ಅಶುಚಿತ್ವ ಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ದೇವಾಲಯ ಆಡಳಿತ ಮಂಡಳಿ ಮತ್ತು ಜಿಲ್ಲಾಮುಜುರಾಯಿ ಇಲಾಖೆ ಸಹಕಾರದಲ್ಲಿ ಹೊಂಡವನ್ನು ಅಭಿವೃದ್ಧಿಗೊಳಿಸಿ ಜಲಮೂಲ ಸಂರಕ್ಷಿಸಿ ಎಂದು ಜಿಲ್ಲಾ ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ವೇದಿಕೆ ಮನವಿ ಸಲ್ಲಿಸಿದೆ.

ಇತಿಹಾಸ ಪ್ರಸಿದ್ಧ ಹಾಗೂ ನೀರಿನ ಮೂಲವಾದ ದಮಯಂತಿಹೊಂಡದ ಸಂರಕ್ಷಣೆ ಅತ್ಯಗತ್ಯವಾಗಿದೆ. ನಾಲ್ಕಾರು ಎಕರೆ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಅವಕಾಶವಿದೆ, ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇವೆ.
-ಟಿ.ವಿ. ನಟರಾಜ್‌ ಪಂಡಿತ್‌, ಜಿಲ್ಲಾ ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ವೇದಿಕೆ ಸಂಚಾಲಕರು, ಹಾಸನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ