ಆ್ಯಪ್ನಗರ

ಸಾಲ ಮನ್ನಾ ಹಣ ದುರುಪಯೋಗ: ಕೃಷಿ ಪತ್ತಿನ ಸಂಘದ ಮೂವರು ಸಿಇಒಗಳ ಅಮಾನತು

ರೈತರ ಬೆಳೆ ಸಾಲಮನ್ನಾ ಯೋಜನೆ ಹಣ ರೈತರಿಗೆ ವಿತರಿಸುವಲ್ಲಿ 15ರಿಂದ 16 ಲಕ್ಷ ರೂ. ದುರುಪಯೋಗ ಮಾಡಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅಧ್ಯಕ್ಷ ನಾಗರಾಜ್‌ ತಿಳಿಸಿದರು.

Vijaya Karnataka 16 Jul 2019, 5:00 am
ಹಾಸನ: ರೈತರ ಬೆಳೆ ಸಾಲಮನ್ನಾ ಯೋಜನೆ ಹಣ ರೈತರಿಗೆ ವಿತರಿಸುವಲ್ಲಿ 15ರಿಂದ 16 ಲಕ್ಷ ರೂ. ದುರುಪಯೋಗ ಮಾಡಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅಧ್ಯಕ್ಷ ನಾಗರಾಜ್‌ ತಿಳಿಸಿದರು.
Vijaya Karnataka Web debt waiver money laundering
ಸಾಲ ಮನ್ನಾ ಹಣ ದುರುಪಯೋಗ: ಕೃಷಿ ಪತ್ತಿನ ಸಂಘದ ಮೂವರು ಸಿಇಒಗಳ ಅಮಾನತು


ತಾಲೂಕಿನ ಹಳೇಕೊಪ್ಪಲು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಸೋಮಶೇಖರ್‌, ಹಿರೇಕಡಲೂರು ಸಂಘದ ಸಿ.ಎ.ಕೀರ್ತಿಕುಮಾರ್‌, ಚನ್ನರಾಯಪಟ್ಟಣ ಗೌಡಗೆರೆ ಸಂಘದ ಕೆ.ಟಿ.ಮಂಜೇಗೌಡ ಅಮಾನತುಗೊಂಡವರು. ಕೋರವಂಗಲ, ಮತಿಘಟ್ಟ, ಜಿನ್ನೇನಹಳ್ಳಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಂದ ವರದಿ ಕೇಳಲಾಗಿದೆ,'' ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

''ರಾಜ್ಯ ಸರಕಾರ ರೈತರ ಬೆಳೆಸಾಲ ಮನ್ನಾದ ಅನ್ವಯ ಜಿಲ್ಲೆಯ 197 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 91,455 ರೈತರಿಗೆ 502 ಕೋಟಿ ರೂ. ಸಾಲಮನ್ನಾ ಮಾಡಿದ್ದು, ತೆರಿಗೆ ವ್ಯಾಪ್ತಿಯಲ್ಲಿ ಬರುವವರ 26 ಕೋಟಿ ಹೊರತು ಪಡಿಸಿದೆ. 476 ಕೋಟಿ ಸಾಲಮನ್ನಾ ಆಗಿದೆ. ಇದರಲ್ಲಿ 357 ಕೋಟಿ ಬಿಡುಗಡೆಯಾಗಿದ್ದು, 24,555 ರೈತರ 119 ಕೋಟಿ ಬಾಕಿ ಬರಬೇಕಿದೆ,'' ಎಂದು ಅಂಕಿ,ಅಂಶ ನೀಡಿದರು.

ವಂಚನೆ ಆರೋಪ: ''ಸಾಲಮನ್ನಾ ಘೋಷಣೆ ಬಳಿಕ ಪ್ರತಿಯೊಬ್ಬ ರೈತರಿಗೂ ಎಟಿಎಂ ವಿತರಿಸಲಾಗಿದೆ. ಅವರ ಖಾತೆಗೆ ಹಣ ಜಮೆ ಮಾಡಲು ಮೇ 9ರಂದೇ ಸೂಚನೆ ನೀಡಲಾಗಿತ್ತು. ಅಗತ್ಯ ಸ್ಥಳಕ್ಕೆ ಮೊಬೈಲ್‌ ಎಟಿಎಂಗಳನ್ನು ಕೂಡ ಕಳುಹಿಸಲಾಗಿತ್ತು. ಇಷ್ಟಾದರೂ ಕೆಲವೆಡೆ ರೈತರು ಪಿನ್‌ಕೋಡ್‌ ಮರೆತು, ಬರೆದಿಟ್ಟುಕೊಂಡಿದ್ದನ್ನು ಕಳೆದುಕೊಂಡ ಪರಿಣಾಮ ರೈತರಿಗೆ 25 ಸಾವಿರ ರೂ. ನೀಡುವ ಬದಲು 10ರಿಂದ 15 ಸಾವಿರ ನೀಡಿ ವಂಚಿಸಲಾಗಿದೆ ಎಂಬ ಆರೋಪ ರೈತರಿಂದ ಕೇಳಿಬಂದಿತ್ತು. ಈ ಬಗ್ಗೆ ತುರ್ತಾಗಿ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದು, ರೈತರಿಗೆ ಸಂಪೂರ್ಣ ಮಾಹಿತಿ ನೀಡಿ, ವಂಚನೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ,'' ಎಂದು ತಿಳಿಸಿದರು.

''ಜಿಲ್ಲೆಯ ಎಲ್ಲ ಸೊಸೈಟಿ, ಬ್ಯಾಂಕ್‌ಗಳಲ್ಲಿ ಒಂದೇ ರೀತಿಯ ಪಾಸ್‌ ಪುಸ್ತಕ ನೀಡಲು ಆರಂಭಿಸಲಾಗಿದೆ. ನೋಟಿಸ್‌ ಬೋರ್ಡ್‌ ಮತ್ತು ಸಂಘದ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಮತ್ತು ಹಾಲು ಉತ್ಪಾದಕರ ಸಂಘ, ಗ್ರಾಪಂ ಕಚೇರಿಯಲ್ಲೂ ಮಾಹಿತಿ ಪ್ರಕಟಿಸಲು ಕ್ರಮ ಕೈಗೊಳ್ಳಲಾಗಿದೆ. ಆರು ಪ್ರಾಥಮಿಕ ಕೃಷಿ ಪತ್ತಿನ ಸಹಕರ ಸಂಘಗಳ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ಪರಿವೀಕ್ಷಣೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ. ಸಾಲದ ಹಣವನ್ನು ಬ್ಯಾಂಕಿನ ಎಸ್‌ಬಿ, ಕೆಸಿಸಿ ಖಾತೆಗಳಿಗೆ ಜಮಾ ಮಾಡಿ ಎಟಿಎಂ ಮೂಲಕವೇ ಪಾವತಿಸಲು ಸೂಚಿಸಲಾಗಿದೆ. ಪ್ರತಿದಿನ ಕೇಂದ್ರ ಕಚೇರಿಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ,'' ಎಂದರು.

ಬ್ಯಾಂಕಿನ ಉಪಾಧ್ಯಕ್ಷ ಗಿರೀಶ್‌ಚನ್ನವೀರಪ್ಪ, ಮಾಜಿ ಅಧ್ಯಕ್ಷ ಹೊನವಳ್ಳಿ ಸತೀಶ್‌,ಜಯರಾಂ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ