ಆ್ಯಪ್ನಗರ

ಜಿಂಕೆ ಹತ್ಯೆ: ಆರೋಪಿಗಳ ಪತ್ತೆಗೆ ಬಲೆ

ತಾಲೂಕಿನ ಗೊಬ್ಬಳಿ ಅರಣ್ಯದಲ್ಲಿ ದುಷ್ಕರ್ಮಿಗಳು ನಾಡಬಂದೂಕಿನಿಂದ ಜಿಂಕೆಯೊಂದನ್ನು ಕೊಂದಿದ್ದು, ಆರೋಪಿಗಳ ಪತ್ತೆಗೆ ಇಲಾಖೆ ಬಲೆ ಬೀಸಿದೆ.

Vijaya Karnataka 19 Sep 2018, 5:00 am
ಅರಕಲಗೂಡು: ತಾಲೂಕಿನ ಗೊಬ್ಬಳಿ ಅರಣ್ಯದಲ್ಲಿ ದುಷ್ಕರ್ಮಿಗಳು ನಾಡಬಂದೂಕಿನಿಂದ ಜಿಂಕೆಯೊಂದನ್ನು ಕೊಂದಿದ್ದು, ಆರೋಪಿಗಳ ಪತ್ತೆಗೆ ಇಲಾಖೆ ಬಲೆ ಬೀಸಿದೆ.
Vijaya Karnataka Web deer killed officers in search of culprits
ಜಿಂಕೆ ಹತ್ಯೆ: ಆರೋಪಿಗಳ ಪತ್ತೆಗೆ ಬಲೆ


ಈ ಭಾಗದಲ್ಲಿ ಹೊರಜಿಲ್ಲೆಯ ತಂಡವೊಂದು ಬೇಟೆಗಾಗಿ ಬಂದು ಹಂಪಾಪುರ ಗ್ರಾಮದ ಕೆಲವರ ಸಹಕಾರದಿಂದ ಜಿಂಕೆಯನ್ನು ಕೊಂದಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಜಿಂಕೆಯ ದೇಹದಲ್ಲಿ ಎರಡು ಕಡೆ ಗುಂಡೇಟು ಬಿದ್ದಿರುವ ಗಾಯ ಪರೀಕ್ಷಾ ವೇಳೆ ಪತ್ತೆಯಾಗಿದೆ,''ಎಂದು ಸಕಲೇಶಪುರ ಉಪ ವಿಭಾಗದ ಸಹಾಯಕ ಉಪ ಅರಣ್ಯ ಸಂರಕ್ಷ ಣಾಧಿಕಾರಿ ಲಿಂಗರಾಜು ಪತ್ರಿಕೆಗೆ ತಿಳಿಸಿದರು.

ವಲಯ ಅರಣ್ಯಾಧಿಕಾರಿ ವಿನಯ್‌ಚಂದ್ರ ಮಾತನಾಡಿ, ''ಗೊಬ್ಬಳಿ ಅರಣ್ಯದಲ್ಲಿ ಜಿಂಕೆ ಮೃತಪಟ್ಟಿರುವ ಬಗ್ಗೆ ದನಗಾಹಿಗಳಿಂದ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಕೃತ್ಯದಲ್ಲಿ ಭಾಗಿಯಾದವರ ಪತ್ತೆಗೆ ಶೋಧ ನಡೆಸುತ್ತಿದ್ದು, ಸದ್ಯದಲ್ಲಿಯೇ ಆರೋಪಿಗಳನ್ನು ವಶಕ್ಕೆ ಪಡೆಯಲಾಗುವುದು. ಇತ್ತೀಚೆಗೆ ಬೆಟ್ಟದರಂಗನಾಥಸ್ವಾಮಿ ಬೆಟ್ಟದಲ್ಲಿ ಉರುಳಿಗೆ ಸಿಲುಕಿ ಮೃತಪಟ್ಟಿರುವ ಚಿರತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಹಂತ ಮುಗಿದಿದೆ,''ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ