ಜಾವಗಲ್ : ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಜಾಗೃತಿ ನಡೆಸಿ ಮತದಾನ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದರು.
ಜಾವಗಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ ವಿಭಾಗ ಹಾಗೂ ಸ್ಕೌಟ್ ಗೈಡ್ಸ್ ವತಿಯಿಂದ ಮತದಾರರ ಜಾಗತಿ ಆಂದೋಲನಾ ಕಾರ್ಯಕ್ರಮ ನಡೆಯಿತು.
ರಾಜ್ಯಶಾಸ ವಿಭಾಗದ ಮುಖ್ಯಸ್ಥ ಎಂ.ಟಿ.ಪುಟ್ಟಸ್ವಾಮಿ ಮಾತನಾಡಿ, ‘‘ರಾಜಕೀಯ ವ್ಯವಸ್ಥೆಯಲ್ಲಿ ಭವಿಷ್ಯದ ಅಭಿವದ್ಧಿ ಹಿತದಷ್ಟಿಯಿಂದ ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಹೆಚ್ಚಿನ ಮಹತ್ವವಿದೆ. ಪ್ರತಿಯೊಬ್ಬ ಯುವಕ ಯುವತಿಯರು ಮತಪಟ್ಟಿಗೆ ಹೆಸರನ್ನು ನೋಂದಾಯಿಸಿಕೊಳ್ಳಿ,’’ಎಂದು ಹೇಳಿದರು.
ಜಾವಗಲ್ ಪಟ್ಟಣದ ಕಾಲೇಜು ರಸ್ತೆ, ಅಮ್ಮನಹಳ್ಳಿ ವತ್ತ, ಜಂಡಮ್ಮನ ಬಡಾವಣೆ, ಸಂತೆಬೀದಿ ರಸ್ತೆ, ಬಾಣಾವರ-ಹಳೇಬೀಡು ರಸ್ತೆ, ಬಸ್ ನಿಲ್ದಾಣ ಮುಂತಾದ ಕಡೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಜಾಥಾ ನಡೆಸಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಹಾಗೂ ಮತದಾನದ ಮಹತ್ವವನ್ನು ಸಾರುವ ಭಿತ್ತಿಪತ್ರಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದರು.
ನಮ್ಮ ಮತವು ಯೋಗ್ಯ ಅಭ್ಯರ್ಥಿಗೆ, ಮತದಾನವು ಬುಲೆಟ್ಗಿಂತ ಬಲವಾಗಿದೆ, ನನ್ನ ಮತ ನನ್ನ ಹಕ್ಕು, ಮತದಾನವು ಹಕ್ಕು ಮಾತ್ರವಲ್ಲ, ನಮ್ಮ ಶಕ್ತಿ, ನಾವು ಮತದಾನ ಮಾಡುವ ಮೂಲಕ ಭವಿಷ್ಯದ ನಿರ್ಮಾಣಕ್ಕೆ ಕೈಜೋಡಿಸೋಣ ಮತ ಚಲಾಯಿಸಿ ಪ್ರಜಾಪ್ರಭುತ್ವ ಉಳಿಸಿ ಎಂದು ಘೋಷಣೆ ಕೂಗಿ ಮತದಾರರಲ್ಲಿ ಜಾಗೃತಿ ಮೂಡಿಸಿದರು.
ಪ್ರಭಾರ ಪ್ರಾಂಶುಪಾಲ ವೈ.ಎಚ್.ಮಹೇಶ್, ಸಹಾಯಕ ಪ್ರಾಧ್ಯಾಪಕರಾದ ವಿರೂಪಾಕ್ಷ, ದಿಲೀಪ್, ವೆಂಕಟೇಶ್, ಲತಾ, ನರಸಿಂಹಮೂರ್ತಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜಾವಗಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ ವಿಭಾಗ ಹಾಗೂ ಸ್ಕೌಟ್ ಗೈಡ್ಸ್ ವತಿಯಿಂದ ಮತದಾರರ ಜಾಗತಿ ಆಂದೋಲನಾ ಕಾರ್ಯಕ್ರಮ ನಡೆಯಿತು.
ರಾಜ್ಯಶಾಸ ವಿಭಾಗದ ಮುಖ್ಯಸ್ಥ ಎಂ.ಟಿ.ಪುಟ್ಟಸ್ವಾಮಿ ಮಾತನಾಡಿ, ‘‘ರಾಜಕೀಯ ವ್ಯವಸ್ಥೆಯಲ್ಲಿ ಭವಿಷ್ಯದ ಅಭಿವದ್ಧಿ ಹಿತದಷ್ಟಿಯಿಂದ ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಹೆಚ್ಚಿನ ಮಹತ್ವವಿದೆ. ಪ್ರತಿಯೊಬ್ಬ ಯುವಕ ಯುವತಿಯರು ಮತಪಟ್ಟಿಗೆ ಹೆಸರನ್ನು ನೋಂದಾಯಿಸಿಕೊಳ್ಳಿ,’’ಎಂದು ಹೇಳಿದರು.
ಜಾವಗಲ್ ಪಟ್ಟಣದ ಕಾಲೇಜು ರಸ್ತೆ, ಅಮ್ಮನಹಳ್ಳಿ ವತ್ತ, ಜಂಡಮ್ಮನ ಬಡಾವಣೆ, ಸಂತೆಬೀದಿ ರಸ್ತೆ, ಬಾಣಾವರ-ಹಳೇಬೀಡು ರಸ್ತೆ, ಬಸ್ ನಿಲ್ದಾಣ ಮುಂತಾದ ಕಡೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಜಾಥಾ ನಡೆಸಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಹಾಗೂ ಮತದಾನದ ಮಹತ್ವವನ್ನು ಸಾರುವ ಭಿತ್ತಿಪತ್ರಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದರು.
ನಮ್ಮ ಮತವು ಯೋಗ್ಯ ಅಭ್ಯರ್ಥಿಗೆ, ಮತದಾನವು ಬುಲೆಟ್ಗಿಂತ ಬಲವಾಗಿದೆ, ನನ್ನ ಮತ ನನ್ನ ಹಕ್ಕು, ಮತದಾನವು ಹಕ್ಕು ಮಾತ್ರವಲ್ಲ, ನಮ್ಮ ಶಕ್ತಿ, ನಾವು ಮತದಾನ ಮಾಡುವ ಮೂಲಕ ಭವಿಷ್ಯದ ನಿರ್ಮಾಣಕ್ಕೆ ಕೈಜೋಡಿಸೋಣ ಮತ ಚಲಾಯಿಸಿ ಪ್ರಜಾಪ್ರಭುತ್ವ ಉಳಿಸಿ ಎಂದು ಘೋಷಣೆ ಕೂಗಿ ಮತದಾರರಲ್ಲಿ ಜಾಗೃತಿ ಮೂಡಿಸಿದರು.
ಪ್ರಭಾರ ಪ್ರಾಂಶುಪಾಲ ವೈ.ಎಚ್.ಮಹೇಶ್, ಸಹಾಯಕ ಪ್ರಾಧ್ಯಾಪಕರಾದ ವಿರೂಪಾಕ್ಷ, ದಿಲೀಪ್, ವೆಂಕಟೇಶ್, ಲತಾ, ನರಸಿಂಹಮೂರ್ತಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.