ಆ್ಯಪ್ನಗರ

ಹಾಸನದಲ್ಲಿ ಲಾಕ್‌ಡೌನ್‌ ಸಡಿಲ: ನೀರಾವರಿ ಸೇರಿ ಅಗತ್ಯ ಕಾಮಗಾರಿಗಳಿಗೆ ಅವಕಾಶ

ಜಿಲ್ಲೆಯಲ್ಲಿ ನೀರಾವರಿ ಯೋಜನೆ ಕಾಮಗಾರಿ ಸೇರಿ ಕೆಲ ಅಗತ್ಯ ಯೋಜನೆ ಕಾಮಗಾರಿಗಳಿಗೆ ಅವಕಾಶ ನೀಡಲಾಗಿದೆ ಎಂದು ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ಚಾಮಿ ಹೇಳಿದರು. ಆದರೆ, ಎಲ್ಲಾ ರೀತಿಯ ಅಂಗಡಿ ಮುಂಗಟ್ಟು ತೆರೆಯುವಂತಿಲ್ಲ.

Vijaya Karnataka Web 24 Apr 2020, 4:54 pm
ಹಾಸನ: ಜಿಲ್ಲೆಯಲ್ಲಿ ನೀರಾವರಿ ಯೋಜನೆ ಕಾಮಗಾರಿ ಸೇರಿ ಕೆಲ ಅಗತ್ಯ ಯೋಜನೆ ಕಾಮಗಾರಿಗಳಿಗೆ ಅವಕಾಶ ನೀಡಲಾಗಿದೆ ಎಂದು ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ಚಾಮಿ ಹೇಳಿದರು.
Vijaya Karnataka Web madhu swamy


ಶುಕ್ರವಾರ ಹಾಸನದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿ ಮಾತನಾಡಿದರು. ಗ್ರೀನ್ ಝೋನ್ ಇದ್ದರೂ ಕೂಡ ಹಾಸನದಲ್ಲಿ ಸೂಕ್ತ ಮುಂಜಾಗೃತೆ ಕ್ರಮದೊಂದಿಗೆ ಲಾಕ್‌ಡೌನ್‌ಗೆ ಕೆಲವು ಸಡಿಲಿಕೆ ನೀಡಲಾಗಿದೆ. ಆದರೆ, ಎಲ್ಲಾ ರೀತಿಯ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿಲ್ಲ ಎಂದರು.

ಹಣ್ಣು ತರಕಾರಿ, ಕೊಬ್ಬರಿ ಸೇರಿ ಅಗತ್ಯ ವಸ್ತುಗಳನ್ನು ಬೇರೆಡೆಗೆ ಸಾಗಾಟ ಮಾಡಲು ಅವಕಾಶ ನೀಡಲಾಗಿದೆ. ಇಂತಹ ಸಾಗಾಟ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರು ಕಠಿಣ ಶಿಸ್ತು ಪಾಲಿಸಲೇಬೇಕಿದೆ.

ರಾಮನಗರ ರಕ್ಷಿಸಿ ಇಲ್ಲದಿದ್ದರೆ ಬೀದಿಗಿಳಿಯುವೆ: ಶಾಸಕಿ ಅನಿತಾ ಕುಮಾರಸ್ವಾಮಿ ಎಚ್ಚರಿಕೆ!

ಅಕಸ್ಮಾತ್ ಮನೆಗೆ ಹೋಗಲು ಇಚ್ಚಿಸಿದರೆ, 14 ದಿನ ಕ್ವಾರಂಟೈನ್ ಪೂರೈಸಬೇಕು. ನಗರದಲ್ಲಿರುವ ಯಾವುದೇ ಕೈಗಾರಿಕೆ ತೆರೆಯಲು ಅವಕಾಶ ನೀಡಲಾಗಿಲ್ಲ.

ನಗರದ ಹೊರಗಿನವರು ಮೂರನೇ ಒಂದು ಭಾಗ ಕಾರ್ಮಿಕರಿಂದ ಕೆಲಸ ಮಾಡಿಸಬಹುದು. ಕಾರ್ಮಿಕರನ್ನ ಕೆಲಸ ಮಾಡುವ ಸ್ಥಳದಲ್ಲೇ ವಾಸ್ತವ್ಯ ಮಾಡುವಂತೆ ಮಾಡಬೇಕು. ಇಲ್ಲವಾದರೆ ಕೆಲಸ ಮಾಡಿಸುವವರೇ ಕಾರ್ಮಿಕರನ್ನು ಖಾಸಗಿ ವಾಹನದ ಮೂಲಕ ಕರೆತರಬೇಕು ಎಂದರು.

ಕೊರೊನಾ ನಿಗ್ರಹಕ್ಕೆ ಗ್ರಾಮದೇವತೆ ಮೊರೆ ಹೋದ ಗ್ರಾಮಸ್ಥರು: 1.5 ಕಿ.ಮೀ. ದೀರ್ಘ ದಂಡ ಸೇವೆ!

ವೈಯಕ್ತಿಕ ವಾಗಿ ಯಾರೂ ಕೂಡ ತಮ್ಮ ಬೈಕ್ ಹಾಗೂ ಕಾರಿನಲ್ಲಿ ಕೆಲಸಕ್ಕೆ ಬರಕೂಡದು. ಅಂತಾರಾಜ್ಯ ವ್ಯಾಪ್ತಿಯಲ್ಲೂ ಕೆಲ ಅಗತ್ಯ ವಸ್ತು ಸಾಗಾಟಕ್ಕೆ ನಿಯಮಗಳ ಸಡಿಲಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ