ಆ್ಯಪ್ನಗರ

ಹೋರಾಟಗಾರ, ವೈದ್ಯ ಡಾ.ಎ.ಸಿ.ಮುನಿವೆಂಕಟೇಗೌಡ ಇನ್ನಿಲ್ಲ

ಜನಾನುರಾಗಿ ವೈದ್ಯ ಡಾ.ಎ.ಸಿ.ಮುನಿವೆಂಕಟೇಗೌಡ (86) ಬಹು ಅಂಗಾಗ ವೈಫಲ್ಯದಿಂದ ಭಾನುವಾರ ತಮ್ಮದೇ ನರ್ಸಿಂಗ್‌ ಹೋಂನಲ್ಲಿ ನಿಧನರಾದರು.

Vijaya Karnataka 4 Mar 2019, 5:00 am
ಹಾಸನ: ಜನಾನುರಾಗಿ ವೈದ್ಯ ಡಾ.ಎ.ಸಿ.ಮುನಿವೆಂಕಟೇಗೌಡ (86) ಬಹು ಅಂಗಾಗ ವೈಫಲ್ಯದಿಂದ ಭಾನುವಾರ ತಮ್ಮದೇ ನರ್ಸಿಂಗ್‌ ಹೋಂನಲ್ಲಿ ನಿಧನರಾದರು.
Vijaya Karnataka Web dr ac munivankate gowda no more
ಹೋರಾಟಗಾರ, ವೈದ್ಯ ಡಾ.ಎ.ಸಿ.ಮುನಿವೆಂಕಟೇಗೌಡ ಇನ್ನಿಲ್ಲ


ಇವರಿಗೆ ಪತ್ನಿ ಜಯಲಕ್ಷ್ಮಿ ಹಾಗೂ ಪುತ್ರರಾದ ಶರತ್‌ಚಂದ್ರ, ವಸಂತಮಾಧವ, ಪುತ್ರಿ ಆರತಿ ಇದ್ದಾರೆ.

1934ರಲ್ಲಿ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ಅಲಂಗೂರಿನಲ್ಲಿ ಜನಿಸಿದ ಡಾ.ಮುನಿವೆಂಕಟೇಗೌಡರು, ಮೈಸೂರು ಮೆಡಿಕಲ್‌ ಕಾಲೇಜಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿದರು.

ಹಾಸನದ ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ಮೂಲಕ ವೃತ್ತಿಯಲ್ಲಿ ಹೆಸರು ಗಳಿಸಿದರು. ರೈತರು, ದಲಿತರು ಸೇರಿದಂತೆ ಸಮಾಜದಲ್ಲಿ ಎಲ್ಲ ವರ್ಗದ ಸಮಾನತೆಗಾಗಿ ಚಳವಳಿ ಹಮ್ಮಿಕೊಂಡು ಸರಕಾರದ ಕೆಂಗಣ್ಣಿಗೆ ಬಿದ್ದ ಬಳಿಕ ಸರಕಾರಿ ವೈದ್ಯ ವೃತ್ತಿಗೆ ರಾಜೀನಾಮೆ ನೀಡಿ ಹೊರಬಂದು ಜನತಾ ಆಸ್ಪತ್ರೆಯನ್ನು ತೆರೆದಿದ್ದರು. ತುರ್ತು ಪರಿಸ್ಥಿತಿ ಸಂದರ್ಭ ಜಯಪ್ರಕಾಶ್‌ ನಾರಾಯಣ್‌ರ ಪ್ರಭಾವದಿಂದ ಚಳವಳಿಗೆ ಧುಮುಕಿದ್ದರು.

ಕಾವೇರಿ ಹೋರಾಟ ಪ್ರಾರಂಭವಾದಾಗ ಚಳವಳಿಯ ನೇತೃತ್ವ ವಹಿಸಿ ಸಮಿತಿ ಅಧ್ಯಕ್ಷರು ಆಗಿದ್ದರು. 1977ರಲ್ಲಿ ಜನತಾ ಮಾಧ್ಯಮ ಪತ್ರಿಕೆಯನ್ನು ಪ್ರಾರಂಭಿಸಿದರು. 1980ರಲ್ಲಿ ಸಹಕಾರಿ ತತ್ವದಲ್ಲಿ ಸಂಜೀವಿನಿ ಸಹಕಾರಿ ಆಸ್ಪತ್ರೆ ಸ್ತಂಭಗಳಲ್ಲೊಬ್ಬರಾಗಿ ಪ್ರಾರಂಭಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹೀಗೆ ಹತ್ತು ಹಲವು ಸಂಘ, ಸಂಸ್ಥೆಗಳಲ್ಲಿ ಜಾನುರಾಗಿಯಾಗಿ ಸೇವೆ ಸಲ್ಲಿಸಿದ್ದರು. ಇವರಿಗೆ 2004ರಲ್ಲಿ ರಾಜ್ಯೋತ್ಸವ ಪ್ರಶಸ್ತಿದೊರೆತಿತ್ತು. 2014ರಲ್ಲಿ 80ರ ಸಂವತ್ಸರ ಹಿನ್ನೆಲೆಯಲ್ಲಿ ಅವರ ಸ್ನೇಹಿತರು, ಅಭಿಮಾನಿಗಳು ಎಲ್ಲರೊಳಗಾಗಿ ಅಭಿನಂದನಾ ಗ್ರಂಥವನ್ನು ಹೊರತಂದಿದ್ದರು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ಆತ್ಮೀಯರು, ಹಿತೈಷಿಗಳು ಆಗಿದ್ದ ಮುನಿವೆಂಕಟೇಗೌಡರು ರಾಜಕೀಯ ಕ್ಷೇತ್ರಕ್ಕೆ ಬರಲು ಎಷ್ಟೇ ಒತ್ತಡವಿದ್ದರೂ, ತಮ್ಮ ಕೈಯಲ್ಲಿದ್ದ ಬಿ ಫಾರಂ ಅನ್ನು ಮಾಜಿ ಶಾಸಕ ಎಚ್‌.ಎಸ್‌.ಪ್ರಕಾಶ್‌ಗೆ ನೀಡಿ ಶುಭಕೋರಿದ್ದರು.

ಮುನಿವೆಂಕಟೇಗೌಡರ ಅಂತ್ಯಕ್ರಿಯೆ ಎಲ್ಲಿ ಮಾಡಬೇಕು ಅಥವಾ ವೈದ್ಯಕೀಯ ಕಾಲೇಜಿಗೆ ದೇಹ ದಾನಮಾಡುವುದೋ ಎಂಬುದನ್ನು ಸೋಮವಾರ ನಿರ್ಧರಿಸಲಾಗುವುದು ಎಂದು ಕುಟುಂಬದ ಮೂಲ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ