ಆ್ಯಪ್ನಗರ

ದ್ವಾರಸಮುದ್ರಕೆರೆ ಶೀಘ್ರ ಭರ್ತಿ

ವಿಕ ಸುದ್ದಿಲೋಕ ಬೇಲೂರು ಹಳೇಬೀಡಿನ ದ್ವಾರಸಮುದ್ರಕೆರೆ ಶೇ50 ಭರ್ತಿಯಾಗಿದ್ದು, ಆ ಭಾಗದ ಗ್ರಾಮಸ್ಥರ ಮೊಧಿಗಧಿದಲ್ಲಿಮಂದಧಿಹಾಸ ಮೂಧಿಡಿಧಿಸಿದೆ...

Vijaya Karnataka 3 Dec 2019, 5:00 am
ಬೇಲೂರು: ಹಳೇಬೀಡಿನ ದ್ವಾರಸಮುದ್ರಕೆರೆ ಶೇ.50 ಭರ್ತಿಯಾಗಿದ್ದು, ಆ ಭಾಗದ ಗ್ರಾಮಸ್ಥರ ಮೊಗದಲ್ಲಿಮಂದಹಾಸ ಮೂಡಿಸಿದೆ.
Vijaya Karnataka Web dwarasamudra lake will full fill shortly
ದ್ವಾರಸಮುದ್ರಕೆರೆ ಶೀಘ್ರ ಭರ್ತಿ

1992ರ ಆಸುಪಾಸಿನಲ್ಲಿಭರ್ತಿಯಾಗಿದ್ದ ಕೆರೆ ನಂತರ 2009ರಲ್ಲಿಭರ್ತಿಯಾಗಿ ಕೋಡಿ ಮೇಲೆ ನೀರು ಹರಿದಿತ್ತು. ನಂತರ ಈವರಗೆ ಭರ್ತಿಯಾಗಿರಲಿಲ್ಲ. ಭರ್ತಿಯಾಗಿದ್ದ ಕೆರೆ ನೀರು ಕಾಲಿಯಾದ ನಂತರ ಒಣಗಿದ ಕೆರೆ ಈ ವರ್ಷ ತುಂಬು ಹಂತಕ್ಕೆ ಬಂದಿದೆ. 250 ಎಕರೆಯಷ್ಟಿರುವ ಕೆರೆಯಲ್ಲಿಇದೀಗ ಅರ್ಧದಷ್ಟು ನೀರು ಬಂದಿದೆ. ಅತಿಯಾದ ಮಳೆ ಹಾಗೂ ಯಗಚಿ ನಾಲೆಯಿಂದ ಹರಿದ ನೀರು ಕೆರೆಗೆ ನೀರು ಹರಿಯಲು ಕಾರಣವಾಗಿದೆ. ಇದೀಗ ಬರುತ್ತಿರುವ ಮಳೆ ಇನ್ನು ಕೆಲವು ದಿನ ಬಂದರೆ ಮಧಿತ್ತೆ ಕೆರೆ ಭರ್ತಿಯಾಗಲಿದೆ ಎನ್ನುತ್ತಾರೆ ಗ್ರಾಮಸ್ಥರು. ಕೆರೆಗೆ ನೀರು ಬಂದಿರುವುದರಿಂದ ಹಾಗೂ ಸುತ್ತಮುತ್ತಲಿನ ಅನೇಕ ಕೆರೆಕೆಟ್ಟೆಗಳು ಭರ್ತಿಯಾಗುತ್ತವೆ.
ಹಳೇಬೀಡು ಹೋಬಳಿ ವ್ಯಾಪ್ತಿಯ ಬತ್ತಿದ ಕೊಳವೆಬಾವಿಗಳಲ್ಲಿನೀರು ಬರತೊಡಗಿದೆ. ಕುಡಿಯುವ ನೀರಿಗೆ ಹಾಹಾಕಾರ ಪಡುತ್ತಿದ್ದು, ಸದ್ಯ ತಪ್ಪಿದೆ. ಆದರೂ ಇದು ತಾತ್ಕಾಲಿಕ, ಯಾವ ಸಂದರ್ಭ ಕೆರೆಯಲ್ಲಿನೀರು ಕಾಲಿಯಾವುದೊ ತಿಳಿಯುತ್ತಿಲ್ಲ. ಇದಕ್ಕಾಗಿ ಶಾಶ್ವತವಾದ ನೀರಾವರಿ ಯೋಜನೆ ಅನುಷ್ಠಾನಗೊಳಿಸಬೇಕು ಎನ್ನುತ್ತಾರೆ ಸ್ಥಳೀಯ ರೈತರು.
ನಾಲೆ ಕೊರಕಲು: ಯಗಚಿ ಏತ ನೀರಾವರಿ ಯೋಜನೆಯ ಅಡಗೂರು ಕೆರೆಗೆ ನೀರು ಹರಿಸುವ ನಾಲೆಯು ಮಾದಿಹಳ್ಳಿ-ಹಗರೆ ನಡುವೆ ಕೊರಕಲು ಬಿದ್ದಿದ್ದು, ರೈತರು ಕೊರಕಲು ಮುಚ್ಚಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ನೀರು ಹರಿಯುತ್ತಿರುವ ನಾಲೆಯಲ್ಲಿಅಲ್ಲಲ್ಲಿಬಿದ್ದಿರುವ ಕೊರಕಲು ಹೆಚ್ಚಾದರೆ ನಾಲೆ ಒಡೆದುಹೋಗುವ ಭೀತಿಯಲ್ಲಿರುವ ರೈತರು ತಾವೆ ಸ್ವತಃ ಟ್ರಾಕ್ಟರ್‌ನಲ್ಲಿಮಣ್ಣುತಂದು ಮುಚ್ಚುವ ಕೆಲಸ ಮಾಡಿಕೊಳ್ಳಲು ಯೋಜನೆ ರೂಪಿಸಿದ್ದಾಧಿರೆ. ಮಂಗಳವಾರ ಬೆಳಗ್ಗೆ ಸಲಕರಣೆ ಹಾಗೂ ಜೆಸಿಬಿ ತಂದು ಕೊರಕಲು ಮುಚ್ಚುವ ಕೆಲಸ ಆರಂಭಿಸಲಾಗುತ್ತದೆ ಎಂದು ಹಳೇಬೀಡು ಬಸವರಾಜು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ