ಆ್ಯಪ್ನಗರ

ಆನೆ ದಾಳಿ: ಪರಿಹಾರದ ಚೆಕ್‌ ಬೌನ್ಸ್‌ !

ಆನೆ ದಾಳಿಯಿಂದ ಕಳೆದ 10 ದಿನದ ಹಿಂದೆ ಮೃತಪಟ್ಟ ಮಹಿಳೆಯ ಕುಟುಂಬಸ್ಥರಿಗೆ ಪರಿಹಾರವಾಗಿ ಅರಣ್ಯ ಇಲಾಖೆಯಿಂದ ನೀಡಿದ್ದ ಚೆಕ್‌ಬೌನ್ಸ್‌ ಆಗಿದೆ.

Vijaya Karnataka 27 Jun 2019, 5:00 am
ಬೇಲೂರು: ಆನೆ ದಾಳಿಯಿಂದ ಕಳೆದ 10 ದಿನದ ಹಿಂದೆ ಮೃತಪಟ್ಟ ಮಹಿಳೆಯ ಕುಟುಂಬಸ್ಥರಿಗೆ ಪರಿಹಾರವಾಗಿ ಅರಣ್ಯ ಇಲಾಖೆಯಿಂದ ನೀಡಿದ್ದ ಚೆಕ್‌ಬೌನ್ಸ್‌ ಆಗಿದೆ.
Vijaya Karnataka Web elephant attack compensation cheque bounce
ಆನೆ ದಾಳಿ: ಪರಿಹಾರದ ಚೆಕ್‌ ಬೌನ್ಸ್‌ !


ತಾಲೂಕಿನ ಅಡಗೂರು ಸಮೀಪದ ದೇವರಹಳ್ಳಿ ಗ್ರಾಮದ ಬಳಿ ಇತ್ತೀಚೆಗೆ ಒಂಟಿ ಸಲಗದ ದಾಳಿಯಿಂದ ಪುಷ್ಪಲತಾ ಎಂಬುವರು ಮೃತಪಟ್ಟಿದ್ದರು. ದಾಳಿ ವಿಷಯ ತಿಳಿದು ಮೃತರ ನಿವಾಸಕ್ಕೆ ತೆರಳಿದ ಶಾಸಕ ಕೆ.ಎಸ್‌.ಲಿಂಗೇಶ್‌, ತಾ.ಪಂ.ಅಧ್ಯಕ್ಷ ರಂಗೇಗೌಡ, ತಾ.ಪಂ.ಸದಸ್ಯ ವಿಜಯಕುಮಾರ್‌ ಮೃತ ಮಹಿಳೆಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಲ್ಲದೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರವಾಗಿ 2 ಲಕ್ಷ ರೂ. ಚೆಕ್‌ ಅನ್ನು ಕೊಡಿಸಿದ್ದರು. ಇನ್ನೂ 2 ಲಕ್ಷ ರೂ. ಚೆಕ್‌ ಅನ್ನು ಶೀಘ್ರವೇ ಕೊಡಿಸುವುದಾಗಿ ಭರವಸೆ ನೀಡಿದ್ದರು.

ಆದರೆ, ಮೃತ ಪುಷ್ಪಲತಾ ಅವರ ಪತಿ ಟಾಕೂರ್‌ ಅವರು ಪರಿಹಾರದ ಚೆಕ್‌ ಅನ್ನು ಬ್ಯಾಂಕಿಗೆ ಕೊಟ್ಟಾಗ 'ಅರಣ್ಯ ಇಲಾಖೆ ಖಾತೆಯಲ್ಲಿ ಹಣ ಇಲ್ಲ' ಎಂದು ವಾಪಸ್‌ ನೀಡಿದ್ದಾರೆ. ಹಣಕ್ಕಾಗಿ ಅರಣ್ಯ ಇಲಾಖೆ ಕಚೇರಿಗೆ ಅಲೆಯುವುದೇ ಆಗಿದೆ ಎಂದು ಟಾಕೂರ್‌ ಅಳಲು ತೋಡಿಕೊಂಡಿದ್ದಾರೆ.

ಇದೀಗ ಕೊಟ್ಟಿರುವ 2 ಲಕ್ಷ ರೂ. ಚೆಕ್‌ಗೆ ಹಣವಿಲ್ಲ ಎಂದರೆ ಉಳಿದ 2 ಲಕ್ಷ ರೂ. ಗತಿಯೇನು ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಶಾಸಕರು ಹಾಗೂ ತಾ.ಪಂ.ಅಧ್ಯಕ್ಷ , ಸದಸ್ಯರು ಗಮನಹರಿಸಿ ಹಣ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ.

ಪರಿಹಾರದ ಚೆಕ್‌ಬೌನ್ಸ್‌ ಆಗಬಾರದು. ಏತಕ್ಕಾಗಿ ಹೀಗೆ ಆಯಿತು ಎಂಬುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹಾರದ ಹಣ ಕುಟುಂಬಸ್ಥರಿಗೆ ತಲುಪುವಂತೆ ಕ್ರಮ ಕೈಗೊಳ್ಳಲಾಗುವುದು.
-ಕೆ.ಎಸ್‌.ಲಿಂಗೇಶ್‌, ಶಾಸಕರು, ಬೇಲೂರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ