ಆ್ಯಪ್ನಗರ

ಹಾಸನ: ಬೇಲೂರು ಸಮೀಪ ಗೋಡೌನ್‌ ಮೇಲೆ ಆನೆ ದಾಳಿ, ಅನ್ನಭಾಗ್ಯ ಅಕ್ಕಿ ಮುಕ್ಕಿದ ಗಜಪಡೆ

ಬೇಲೂರು ತಾಲೂಕಿನ ಅನುಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದೆ. ಸಕಲೇಶಪುರ ಆಲೂರು ಭಾಗದಲ್ಲಿ ಇದ್ದ ಆನೆ ಹಾವಳಿಅರೆ ಮಲೆನಾಡು ಭಾಗವಾಗಿರುವ ಬೇಲೂರು ತಾಲೂಕಿಗೆ ಕಾಲಿಟ್ಟಿದೆ.

Lipi 22 Apr 2022, 7:22 pm
ಬೇಲೂರು (ಹಾಸನ): ಅನ್ನಭಾಗ್ಯ ಅಕ್ಕಿ ಇರಿಸಿರುವ ಗೋಡೌನ್‌ ಮೇಲೆ ಆನೆಯೊಂದು ದಾಳಿ ನಡೆಸಿದೆ. ಅಕ್ಕಿಯನ್ನು ತಿಂದು ಹಾಕಿ, ಅಪಾರ ಪ್ರಮಾಣದ ಅಕ್ಕಿಯನ್ನು ಚೆಲ್ಲಾಪಿಲ್ಲಿ ಮಾಡಿದ ಘಟನೆ ಬೇಲೂರು ತಾಲೂಕಿನಲ್ಲಿ ನಡೆದಿದೆ.
Vijaya Karnataka Web elephant attack hasana eat anna bhagya rice
ಹಾಸನ: ಬೇಲೂರು ಸಮೀಪ ಗೋಡೌನ್‌ ಮೇಲೆ ಆನೆ ದಾಳಿ, ಅನ್ನಭಾಗ್ಯ ಅಕ್ಕಿ ಮುಕ್ಕಿದ ಗಜಪಡೆ


ಹಾಸನ ತಾಲೂಕು ಬೇಲೂರು ತಾಲೂಕಿನ ಅನುಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದೆ. ಆಹಾರವನ್ನು ಅರಸಿ ಕಾಡಿನಿಂದ ಈಗ ಆನೆಗಳು ನಾಡಿನತ್ತ ಬರುತ್ತಲೇ ಇದೆ. ಸಕಲೇಶಪುರ ಆಲೂರು ಭಾಗದಲ್ಲಿ ಇದ್ದ ಆನೆ ಹಾವಳಿ ಈಗ ಅರೆಮಲೆನಾಡು ಭಾಗವಾಗಿರುವ ಬೇಲೂರು ತಾಲೂಕಿಗೆ ಕಾಲಿಟ್ಟಿದೆ. ಹಸಿದ ಆನೆಯೊಂದು ಅನುಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಗೋಡೋನ್ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ಕಿಯನ್ನು ಹಾಳುಮಾಡಿದೆ.

ಆನೆದಾಳಿ ದೃಶ್ಯಾವಳಿಗಳು ಈಗ ಸಿಸಿಟಿವಿಯಲ್ಲಿ ಸೆರೆಯಾಗಿದೆ., ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಬೇಲೂರು ಪೊಲೀಸ್ ಪ್ರಾಣ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಷ್ಟದ ಪರಿಹಾರವನ್ನು ಸರಕಾರ ನೀಡಬೇಕು ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಕುಮಾರ್ ಅವರು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಪರಿಸರ ಸಂರಕ್ಷಣೆ ಎಲ್ಲರ ಹೊಣೆ

ಹಾಸನ: ಪರಿಸರ ನಮ್ಮ ಆಸ್ತಿ, ಪರಿಸರ ಸ್ವಚ್ಛವಾಗಿಡುವುದರ ಮೂಲಕ ಭೂಮಿಯ ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ ಎಂದು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ತಿಳಿಸಿದರು.

ಕರ್ನಾಟಕ ಅರಣ್ಯ ಇಲಾಖೆ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಹಸಿರು ಭೂಮಿ ಪ್ರತಿಷ್ಠಾನದ ವತಿಯಿಂದ ಎಸ್‌.ಎಂ.ಕೃಷ್ಣ ನಗರದ ಉದ್ಯಾನವನದಲ್ಲಿಆಯೋಜಿಸಿದ್ದ ವಿಶ್ವ ಭೂ ದಿನಾಚರಣೆಯಲ್ಲಿಮಾತನಾಡಿ, ‘‘ಭೂಮಿ ಪ್ರತಿಯೊಂದು ಜೀವ ಸಂಕುಲಗಳಿಗೆ ಆಶ್ರಯ ನೀಡಿದೆ. ಭೂಮಿ ಸಂರಕ್ಷಣೆಗೆ ಸಾರ್ವಜನಿಕರಲ್ಲಿಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’’ ಎಂದರು.

‘ನನಗೆ ಅಧಿಕಾರಕ್ಕಿಂತ ರಾಜ್ಯ ಉಳಿಸೋದು ಹೇಗೆ ಅನ್ನೋದೇ ಚಿಂತೆಯಾಗಿದೆ’; ಎಚ್‌ಡಿ ದೇವೇಗೌಡ

‘‘ನಾವು ಇರುವ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಸಾಮಾಜಿಕ ಜವಾಬ್ದಾರಿಯಿಂದ ನಾವು ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ಭೂಮಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದು ಕೂಡಾ ನಮ್ಮ ಜವಾಬ್ದಾರಿ. ಸದ್ಯ ನಾವು ಮಾಲಿನ್ಯ, ಅರಣ್ಯ ನಾಶ ಮತ್ತು ಜಾಗತಿಕ ತಾಪಮಾನ ಏರಿಕೆ ಹೀಗೆ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದೇವೆ. ಪರಿಸರದ ಮೇಲಿನ ಮನುಷÜ್ಯರ ಪ್ರಹಾರ ಹೀಗೆಯೇ ಮುಂದುವರಿದರೆ ಪರಿಸ್ಥಿತಿಯ ಭೀಕರತೆಯನ್ನು ಊಹಿಸುವುದಕ್ಕೆ ಸಾಧ್ಯವಿಲ್ಲ. ಈ ಎಲ್ಲಾಸಮಸ್ಯೆಗಳಿಗೂ ಪರಿಹಾರ ಪರಿಸರ ರಕ್ಷಣೆ ಮಾಡುವ ಕಾರ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’’ ಎಂದು ಜಿಲ್ಲಾಧಿಕಾರಿ ಗಿರೀಶ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ