ಆ್ಯಪ್ನಗರ

ಕಾಡಾನೆ ದಾಳಿಗೆ ವೃದ್ಧೆ ಬಲಿ

ತಾಲೂಕಿನ ಕ್ಯಾಮನಹಳ್ಳಿ ಸಮೀಪ(ಸಂಕ್ಲಾಪುರ ಮಠ) ಬುಧವಾರ ರಾತ್ರಿ ಕಾಡಾನೆ ದಾಳಿಗೆ ವೃದ್ಧೆ ಬಲಿಯಾಗಿದ್ದಾರೆ.

Vijaya Karnataka 24 May 2019, 5:00 am
ಸಕಲೇಶಪುರ : ತಾಲೂಕಿನ ಕ್ಯಾಮನಹಳ್ಳಿ ಸಮೀಪ(ಸಂಕ್ಲಾಪುರ ಮಠ) ಬುಧವಾರ ರಾತ್ರಿ ಕಾಡಾನೆ ದಾಳಿಗೆ ವೃದ್ಧೆ ಬಲಿಯಾಗಿದ್ದಾರೆ.
Vijaya Karnataka Web HSN-HSN23SKP1


ಗ್ರಾಮದ ಲತಾ(70) ಮೃತರು. ಮನೆಯಿಂದ ಹೊರಗೆ ಹೋಗಿ ರಾತ್ರಿ 8 ಗಂಟೆಯಲ್ಲಿ ವಾಪಸಾಗುತ್ತಿದ್ದಾಗ ಕಾಫಿ ತೋಟದಲ್ಲಿ ಸಲಗ ಏಕಾಏಕಿ ದಾಳಿ ನಡೆಸಿದೆ.

ವೃದ್ಧೆಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರನ್ನೂ ಮದುವೆ ಮಾಡಿಕೊಟ್ಟಿರುವುದರಿಂದ ಒಂಟಿಯಾಗಿ ಮನೆಯಲ್ಲಿ ವಾಸಿಸುತ್ತಿದ್ದರು. ಹಾಗಾಗಿ, ಬುಧವಾರ ರಾತ್ರಿ ಮನೆಗೆ ಮರಳದಿರುವುದು ಯಾರಿಗೂ ಗೊತ್ತಾಗಿಲ್ಲ. ಗುರುವಾರ ಬೆಳಗ್ಗೆ ದೇಹ ಪತ್ತೆಯಾಗಿದ್ದು, ಕಳೆದ ಹಲವು ದಿನಗಳಿಂದ ಭಾಗದಲ್ಲಿ ಅಡ್ಡಾಡಿಕೊಂಡಿದ್ದ ಒಂಟಿ ಸಲಗ ಈ ದಾಳಿ ನಡೆಸಿರಬಹುದು ಎಂದು ಅಂದಾಜಿಸಲಾಗಿದೆ. ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಸ್ಥಳಕ್ಕೆ ಡಿಸಿಎಫ್‌ ಶಿವರಾಂ ಬಾಬು, ಎಸಿಎಫ್‌ ಲಿಂಗರಾಜು, ಆರ್‌ಎಫ್‌ಒ ರವೀಂದ್ರ ಸ್ಥಳ ಪರಿಶೀಲನೆ ನಡೆಸಿ ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರದ ಚೆಕ್‌ ವಿತರಿಸಿದರು. ಪಟ್ಟಣದ ಕ್ರಾಫರ್ಡ್‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಶವವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು.

ಒತ್ತಾಯ: ವೃದ್ಧೆಯ ಪ್ರಾಣ ಹಾನಿಗೆ ಕಾರಣವಾಗಿರುವ ಸಲಗ ಕಳೆದ ಕೆಲವು ವರ್ಷಗಳಿಂದ ಕ್ಯಾಮನಹಳ್ಳಿ, ಹಾನುಬಾಳು, ಅಗನಿ ಸುತ್ತಮುತ್ತ ಪುಂಡಾಟ ನಡೆಸುತ್ತಿದೆ. ಮೂಡಿಗೆರೆ ಭಾಗದಿಂದ ಬಂದಿರುವ ಈ ಆನೆಯ ದಾಳಿಗೆ ಕಳೆದ ವರ್ಷ ಅಗನಿ ಗ್ರಾಮದಲ್ಲಿ ಡ್ಯಾನಿ ಎಂಬುವವರು ಬಲಿಯಾಗಿದ್ದರು. ಈ ಪುಂಡಾನೆಯನ್ನು ಕೂಡಲೆ ಸೆರೆ ಹಿಡಿದು ಬೇರೆಡೆಗೆ ಸಾಗಿಸಿ ಮುಂದೆ ಆಗಬಹುದಾದ ಅನಾಹುತ ತಪ್ಪಿಸಬೇಕು ಎಂದು ಈ ಸುತ್ತಮುತ್ತಲ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮನವಿ: ಹಾನುಬಾಳು ಹೋಬಳಿ ಹಾಗೂ ಇತರೆ ಭಾಗಗಳಲ್ಲಿ ಕಾಡಾನೆ ಬೀಡುಬಿಟ್ಟಿದ್ದು, ಜನರು ಸಂಜೆ ಹಾಗೂ ಬೆಳಗಿನ ವೇಳೆಯಲ್ಲಿ ಎಚ್ಚರಿಕೆಯಿಂದ ಸಂಚರಿಸಬೇಕು. ಆನೆಗಳು ಬೀಡು ಬಿಟ್ಟಿರುವ ಮಾಹಿತಿ ತಿಳಿದ ಗ್ರಾಮಸ್ಥರು ಅಂತಹ ವೇಳೆ ಮನೆಯಿಂದ ಹೊರಗೆ ಬಾರದಿರುವುದು ಒಳಿತು ಎಂದು ಎಸಿಎಫ್‌ ಲಿಂಗರಾಜು ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ