ಆ್ಯಪ್ನಗರ

ಒಂಟಿ ಸಲಗನ ಗ್ರಾಮ ಸವಾರಿಗೆ ಬೆಚ್ಚಿದ ಜನತೆ

ವಿಕ ಸುದ್ದಿಲೋಕ ಆಲೂರು ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿದ್ದ ಕಾಡಾನೆಗಳ ಗುಂಪಿನಿಂದ ತಪ್ಪಿಸಿಕೊಂಡ ಒಂಟಿಸಲಗವೊಂದು ಕೆಂಚಮ್ಮನ ಹೊಸಕೋಟೆ ಹೋಬಳಿ ವ್ಯಾಪ್ತಿಯ ಹಲವು ...

Vijaya Karnataka 7 Nov 2019, 5:00 am
ಆಲೂರು: ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿದ್ದ ಕಾಡಾನೆಗಳ ಗುಂಪಿನಿಂದ ತಪ್ಪಿಸಿಕೊಂಡ ಒಂಟಿಸಲಗವೊಂದು ಕೆಂಚಮ್ಮನ ಹೊಸಕೋಟೆ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿಹಗಲೊತ್ತಿನಲ್ಲೇ ಅಲೆದಾಡಿ ಗ್ರಾಮಸ್ಥರಲ್ಲಿಭೀತಿ ಹುಟ್ಟಿಸಿತು. ಸಂಜೆ ವೇಳೆಗೆ ಸಮೀಪದ ದುರ್ಗದ ಬೆಟ್ಟವನ್ನು ಪ್ರವೇಶಿಸಿದೆಯಾದರೂ ಗ್ರಾಮಸ್ಥರ ಆತಂಕ ಇನ್ನೂ ದೂರವಾಗಿಲ್ಲ.
Vijaya Karnataka Web elephant walk at aluru taluk village
ಒಂಟಿ ಸಲಗನ ಗ್ರಾಮ ಸವಾರಿಗೆ ಬೆಚ್ಚಿದ ಜನತೆ


ಬುಧವಾರ ಬೆಳಗ್ಗೆ ಸುಮಾರು 11 ರ ವೇಳೆಯಲ್ಲಿದೊಡ್ಡಬೆಟ್ಟ ಅರಣ್ಯ ಪ್ರದೇಶದಿಂದ ಹೊರಟ ಈ ಆನೆ ಕೊಡಗತವಳ್ಳಿ, ಹೊಸಪುರ, ಅಡಿಬೈಲು, ರಂಗನಬೆಟ್ಟ ಮಾರ್ಗವಾಗಿ ಬಾಳಿಗನಹಳ್ಳಿ, ವಾಸುದೇವರಹಳ್ಳಿ, ನಲ್ಲೂರು ಮಾರ್ಗವಾಗಿ ರಸ್ತೆಯಲ್ಲೆಸಂಚರಿಸಿ ಸಂಜೆ ವೇಳೆ ದುರ್ಗದ ಬೆಟ್ಟವನ್ನು ಪ್ರವೇಶಿಸಿದೆ. ಗ್ರಾಮದ ರಸ್ತೆಗಳಲ್ಲಿಸಂಚರಿಸುವ ವೇಳೆಯಲ್ಲಿನಾಯಿಗಳು ಬೊಗಳಿದರೂ ಆನೆ ಮಾತ್ರ ನಿರಾತಂಕವಾಗಿ ಓಡಾಡುತ್ತಿತ್ತು.

ಈ ಸಂದರ್ಭದಲ್ಲಿವಲಯ ಅರಣ್ಯಾಧಿಕಾರಿ ರಾಜಪ್ಪ ನೇತೃತ್ವದಲ್ಲಿಇಲಾಖೆ ಸಿಬ್ಬಂದಿ ಆನೆ ಸಂಚರಿಸುತ್ತಿದ್ದ ಮಾರ್ಗಕ್ಕೊಳಪಡುವ ಗ್ರಾಮಗಳಿಗೆ ಮುಂಜಾಗ್ರತೆಯಾಗಿ ಮೈಕ್‌ ಮೂಲಕ ಯಾರೂ ಮನೆಯಿಂದ ಹೊರಬಾರದಂತೆ ಸೂಚನೆ ನೀಡಿದರು. ಬೈಕ್‌ ಇತರೆ ವಾಹನಗಳಲ್ಲಿಸಂಚರಿಸುವವರು ಆದಷ್ಟು ಬೇಗ ಮನೆ ಸೇರಿಕೊಳ್ಳುವಂತೆ ಸೂಚಿಸಿದರು. ಬಳಿಕ ದುರ್ಗದ ಬೆಟ್ಟವನ್ನು ಸುತ್ತುವರಿದ ಅರಣ್ಯ ಇಲಾಖೆ ಸಿಬ್ಬಂದಿ, ರಾತ್ರಿ ವೇಳೆ ಕಾಡಿಗೆ ಅಟ್ಟಲು ಪ್ರಯತ್ನ ಮಾಡಲಾಗುವುದು ಎಂದು ರಾಜಪ್ಪ ತಿಳಿಸಿದ್ದಾರೆ.

ಬಲಶಾಲಿಯಾಗಿರುವ ಕಾಡಾನೆ ಯಾರಿಗೂ ತೊಂದರೆ ಉಂಟುಮಾಡದೆ ರಾಜಾರೋಷವಾಗಿ ಒಡಾಡಿದ್ದು, ಈ ಹಿನ್ನೆಲೆಯಲ್ಲಿ ಅದಕ್ಕೆ ಭೀಮ ಅಂತ ಹೆಸರಿಡಲಾಗಿದೆ ಎಂದು ರಾಜಪ್ಪ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ