ಆ್ಯಪ್ನಗರ

ಬೆಳೆ ನಷ್ಟ: ರೈತ ಆತ್ಮಹತ್ಯೆ

ಬೆಳೆ ನಷ್ಟ ಹಾಗೂ ಸಾಲ ಬಾಧೆ ತಾಳಲಾರದೆ ಕಳೆನಾಶಕ ಸೇವಿಸಿದ್ದ ರೈತರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

Vijaya Karnataka 27 May 2019, 5:00 am
ಕೊಣನೂರು: ಬೆಳೆ ನಷ್ಟ ಹಾಗೂ ಸಾಲ ಬಾಧೆ ತಾಳಲಾರದೆ ಕಳೆನಾಶಕ ಸೇವಿಸಿದ್ದ ರೈತರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
Vijaya Karnataka Web farmer suicide in konanuru
ಬೆಳೆ ನಷ್ಟ: ರೈತ ಆತ್ಮಹತ್ಯೆ


ಕೊಣನೂರು ಠಾಣಾ ವ್ಯಾಪ್ತಿಯ ದೊಡ್ಡಮಗ್ಗೆ ಹೋಬಳಿ ಚಿಕ್ಕಮಗ್ಗೆ ಹೊಸೂರಿನ ದೇವರಾಜೇಗೌಡ (55)ಮೃತರು. ಇವರು ತಮ್ಮ ಜಮೀನಿನಲ್ಲಿ ನಾಲ್ಕು ಬೋರ್‌ವೆಲ್‌ ಕೊರೆಸಿದ್ದು, ಅವುಗಳಲ್ಲಿ ಸರಿಯಾಗಿ ನೀರು ಬಾರದೆ ಬೆಳೆ ಹಾಳಾಗಿತ್ತು. ಇದರಿಂದ ಸಾಲ ತೀರಿಸಲು ಸಾಧ್ಯವಾಗುವುದಿಲ್ಲ ಎಂದು ಮನನೊಂದು ಮೇ 17ರಂದು ತಮ್ಮ ಮನೆಯ ಬಳಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅಸ್ವಸ್ಥರಾಗಿದ್ದ ಇವರನ್ನು ಚಿಕಿತ್ಸೆಗಾಗಿ ಬೆಂಗಳೂರು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧ್ಯಾಹ್ನ ಮೃತಪಟ್ಟರು. ಮೃತರಿಗೆ ಪತ್ನಿ, ಪುತ್ರರು, ಸಹೋದರರು ಇದ್ದಾರೆ.

''ಮೃತರಿಗೆ 2 ಎಕರೆ ಜಮೀನಿದ್ದು, ದೊಡ್ಡಮಗ್ಗೆ ವಿಜಯಾ ಬ್ಯಾಂಕಿನಲ್ಲಿ ಶುಂಠಿ ಬೆಳೆಯಲು 2 ಲಕ್ಷ ರೂ. ಸಾಲ ಹಾಗೂ ಸುಮಾರು 1 ಲಕ್ಷ ರೂ. ಕೈಸಾಲ ಮಾಡಿದ್ದರು'' ಎಂದು ಮೃತರ ಸಹೋದರ ರಾಜೇಗೌಡ ಕೊಣನೂರು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ