ಆ್ಯಪ್ನಗರ

ಬ್ಯಾಂಕ್‌ ಸಿಬ್ಬಂದಿ ನಿರ್ಲಕ್ಷ ್ಯ: ರೈತರ ಆಕ್ರೋಶ

ತಾಲೂಕಿನ ಚೀಕನಹಳ್ಳಿಯಲ್ಲಿ ಸಾಲಮನ್ನಾ ಯೋಜನೆಗೆ ದಾಖಲಾತಿ ಸಲ್ಲಿಸಲು ಬ್ಯಾಂಕ್‌ಗೆ ಹೋದ ರೈತರಿಗೆ ಬ್ಯಾಂಕ್‌ ವ್ಯವಸ್ಥಾಪಕರು ಉಡಾಫೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿ ರೈತರು ಹಾಗೂ ಕಾಫಿ ಬೆಳೆಗಾರರ ಸಮೂಹವು ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Vijaya Karnataka 19 Dec 2018, 5:00 am
ಬೇಲೂರು : ತಾಲೂಕಿನ ಚೀಕನಹಳ್ಳಿಯಲ್ಲಿ ಸಾಲಮನ್ನಾ ಯೋಜನೆಗೆ ದಾಖಲಾತಿ ಸಲ್ಲಿಸಲು ಬ್ಯಾಂಕ್‌ಗೆ ಹೋದ ರೈತರಿಗೆ ಬ್ಯಾಂಕ್‌ ವ್ಯವಸ್ಥಾಪಕರು ಉಡಾಫೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿ ರೈತರು ಹಾಗೂ ಕಾಫಿ ಬೆಳೆಗಾರರ ಸಮೂಹವು ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
Vijaya Karnataka Web farmers protest
ಬ್ಯಾಂಕ್‌ ಸಿಬ್ಬಂದಿ ನಿರ್ಲಕ್ಷ ್ಯ: ರೈತರ ಆಕ್ರೋಶ


ಚೀಕನಹಳ್ಳಿಯಲ್ಲಿನ ಕಾರ್ಪೋರೇಷನ್‌ ಬ್ಯಾಂಕ್‌ನ ವ್ಯವಸ್ಥಾಪಕ ಬ್ಯಾಂಕ್‌ನಲ್ಲಿ ಸಾಲ ಪಡೆದಿರುವ ಮಹಿಳೆಯೊಬ್ಬರು ಬ್ಯಾಂಕ್‌ಗೆ ದಾಖಲೆ ಸಲ್ಲಿಸಲು ಬಂದ ಸಂದರ್ಭದಲ್ಲಿ ಬ್ಯಾಂಕ್‌ ವ್ಯವಸ್ಥಾಪಕರು ಉಡಾಫೆ ಉತ್ತರ ನೀಡಿದ್ದಾರೆ ಎಂದು ಆರೋಪಿಸಿದರು.

ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಸರಕಾರ ರೈತಾಪಿ ವರ್ಗದ ಜನರು ಬ್ಯಾಂಕ್‌ಗಳಲ್ಲಿ ಮಾಡಿರುವ 2 ಲಕ್ಷ ರೂ.ಗಳ ವರೆಗಿನ ಸಾಲಮನ್ನಾ ಮಾಡುವುದಾಗಿ ಹೇಳಿದೆ ಮತ್ತು ಇದಕ್ಕೆ ಸಂಬಂಧಿಸಿದಂತೆ ದಾಖಲೆ ಒದಗಿಸಲೂ ತಿಳಿಸಿದೆ. ಆದರೆ ಸಾಲಗಾರರು ದಾಖಲಾತಿಗಳನ್ನು ನೀಡಲು ಬ್ಯಾಂಕ್‌ಗೆ ಬಂದಾಗ ಬ್ಯಾಂಕ್‌ ವ್ಯವಸ್ಥಾಪಕರು ಉಡಾಫೆ ಉತ್ತರ ನೀಡಿ ಸಾಗ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬರಗಾಲದ ಪರಿಸ್ಥಿತಿಯಲ್ಲಿ ಕಾಫಿ ಬೆಳಗಾರರು ರೈತಾಪಿ ವರ್ಗದ ಜನರು ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದಾರೆ. ಆರ್ಥಿಕವಾಗಿ ಲಾಭ ದೊರಕದೆ ಕಂಗೆಟ್ಟಿದ್ದಾರೆ. ಇಂತಹ ಸನ್ನಿವೇಶದಲ್ಲಿ ಸರಕಾರ ಸಾಲಗಾರ ಹಿತ ಕಾಪಾಡಲು ಮುಂದಾಗಿದೆ. ಆದರೆ ಬ್ಯಾಂಕ್‌ಗಳ ವ್ಯವಸ್ಥಾಪಕರ ಬೇಜವಾಬ್ದಾರಿ ಧೋರಣೆ ಹಾಗೂ ವರ್ತನೆಯಿಂದ ರೈತಾಪಿ ವರ್ಗದ ಜನರು ಸಂಕಷ್ಟಗಳನ್ನು ಅನುಭವಿಸುಂತಾಗಿದೆ ಎಂದು ದೂರಿದರು.

ಈ ಕುರಿತು ಮೇಲಧಿಕಾರಿಗಳು ತಕ್ಷ ಣವೇ ಗಮನ ಹರಿಸಬೇಕು. ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಸಾಲಗಾರರ ಹಿತರಕ್ಷ ಣೆಗೆ ಮುಂದಾಗಬೇಕೆಂದು ಆಗ್ರಹಿಸಿದರು.

ಚೀಕನಹಳ್ಳಿ ಗ್ರಾಪಂ ಅಧ್ಯಕ್ಷ ಕೇಶವಮೂರ್ತಿ, ಜಿಲ್ಲಾಧಿಕಾರಿಗಳು ಈಗಾಗಲೇ ಎಲ್ಲ ಬ್ಯಾಂಕ್‌ಗಳಿಗೆ ರೈತಾಪಿ ವರ್ಗದ ಜನರು ಸಾಲಮನ್ನಾದ ಮುಂದಿನ ಕ್ರಮಕ್ಕಾಗಿ ದಾಖಲಾತಿಗಳನ್ನು ನೀಡಲು ಆದೇಶ ನೀಡಿದ್ದಾರೆ. ಇದನ್ನು ಕಡೆಗಣಿಸಿ ಬ್ಯಾಂಕ್‌ನ ವ್ಯವಸ್ಥಾಪಕರು ರೈತಾಪಿ ವರ್ಗ ಜನರೊಂದಿಗೆ ಉಡಾಫೆಯಿಂದ ವರ್ತಿಸುವುದುದು ಸರಿಯಲ್ಲ. ಯೋಜನೆಯ ಲಾಭವನ್ನು ರೈತಾಪಿ ವರ್ಗದ ಜನರಿಗೆ ದೊರಕಿಸಿಕೊಡಲು ಮುಂದಾಗಬೇಕೆಂದು ಒತ್ತಾಯಿಸಿದರು.

ತಾಲೂಕು ಕೃಷಿ ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಚೇತನ್‌ ಕುಮಾರ್‌, ಕರ್ನಾಟಕ ಬೆಳಗಾರರ ಸಂಘದ ಕಾರ್ಯದರ್ಶಿ ಡಾ.ಎನ್‌.ಕೆ.ಪ್ರದೀಪ್‌, ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಗೋವಿಂದ ಶಟ್ಟಿ, ಮುಖಂಡರಾದ ಹುಲ್ಲಹಳ್ಳಿ ಸುರೇಶ್‌, ಎಚ್‌.ಜಿ.ಚಿದಾನಂದ್‌, ಸುರೇಶ್‌, ಕೆ.ಪಿ. ಶೈಲೇಶ್‌, ಮಲ್ಲಿಕಾರ್ಜುನ, ರಮೇಶ್‌, ಗಂಗಾಧರ್‌, ಪ್ರದೀಪ್‌, ದಿವಾಕರ್‌ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ