ಆ್ಯಪ್ನಗರ

Coconut Products: 'ನಂದಿನಿ' ಮಾದರಿಯಲ್ಲಿ ಕೊಬ್ಬರಿ ಉತ್ಪನ್ನ; ಎಳನೀರು ಟೆಟ್ರಾಪ್ಯಾಕ್‌ ಮಾರಾಟಕ್ಕೆ ಆಗ್ರಹ

ನಂದಿನಿ ಹಾಲಿನ ಮಾದರಿಯಲ್ಲಿ ಕೊಬ್ಬರಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸುವಂತೆ ತೆಂಗು ಬೆಳೆಗಾರರು ಆಗ್ರಹಿಸಿದ್ದಾರೆ. ಬೆಲೆ ಇಳಿಕೆಯ ಹಿನ್ನೆಲೆ ಕೊಬ್ಬರಿ ಉಪ ಉತ್ಪನ್ನಗಳ ತಯಾರಿಕೆ, ನಂದಿನಿ ಹಾಲಿನ ಮಾದರಿಯಲ್ಲೇ ಎಳನೀರಿನ ಟೆಟ್ರಾ ಪ್ಯಾಕ್‌ ಮಾಡಿ ಸರಕಾರಿ ಶಾಲೆ ವಿದ್ಯಾರ್ಥಿಗಳು, ಆಸ್ಪತ್ರೆಗೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ ಮಾರುಕಟ್ಟೆ ಸೃಷ್ಟಿಸಿಕೊಡುವಂತೆಯೂ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Edited byಅವಿನಾಶ ವಗರನಾಳ | Vijaya Karnataka Web 25 Nov 2022, 10:54 am

ಹೈಲೈಟ್ಸ್‌:


  • ನಂದಿನಿ ಹಾಲಿನ ಮಾದರಿಯಲ್ಲಿ ಕೊಬ್ಬರಿ ಉತ್ಪನ್ನ ಮಾರಾಟಕ್ಕೆ ಮನವಿ
  • ʼಟೆಟ್ರಾಪ್ಯಾಕ್‌ ಎಳನೀರು, ಕೊಬ್ಬರಿ ಎಣ್ಣೆ ಮಾರಾಟಕ್ಕ ಅವಕಾಶ ನೀಡಿʼ
  • ತೆಂಗು ಬೆಳೆಗಾರರಿಗೆ ಮಾರುಕಟ್ಟೆ ಸೃಷ್ಟಿಸಲು ಸರ್ಕಾರಕ್ಕೆ ಆಗ್ರಹ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web coconut
* ಪ್ರಕಾಶ್‌ ಜಿ. ಹಾಸನ
ತೆಂಗು ಹಾಗೂ ಕೊಬ್ಬರಿ ಬೆಲೆ ಕಳೆದ ಏಳು ತಿಂಗಳಿಗೆ ಹೋಲಿಕೆ ಮಾಡಿದರೆ ಕ್ವಿಂಟಾಲ್‌ಗೆ ಐದು ಸಾವಿರದಷ್ಟು ಇಳಿಮುಖವಾಗಿದ್ದು, ತೆಂಗು, ಕೊಬ್ಬರಿ ಉಪ ಉತ್ಪನ್ನಗಳ ತಯಾರಿಕೆ, ನಂದಿನಿ ಹಾಲಿನ ಮಾದರಿಯಲ್ಲೇ ಎಳನೀರಿನ ಟೆಟ್ರಾ ಪ್ಯಾಕ್‌ ಮಾಡಿ ಸರಕಾರಿ ಶಾಲೆ ವಿದ್ಯಾರ್ಥಿಗಳು, ಆಸ್ಪತ್ರೆಗೆ ಒದಗಿಸಬೇಕು, ಸರಕಾರ ಮೌಲ್ಯವರ್ಧನೆ ಮಾಡಿ ಸಹಕಾರ ಸಂಘದ ಮೂಲಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂಬ ಸಲಹೆ ಪೂರ್ವಕ ಒತ್ತಾಯ ಬೆಳೆಗಾರರದ್ದಾಗಿದೆ.
ತೆಂಗು ಬೆಳೆಗಾರರು ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ಕಾಯುವುದು ಅನಿವಾರ್ಯವಾಗಿದೆ. ಇನ್ನು ಕೆಲವರು ಮಕ್ಕಳ ಮದುವೆ, ಮನೆ ನಿರ್ಮಾಣ, ಮಕ್ಕಳ ವಿದ್ಯಾಭ್ಯಾಸ ಮತ್ತಿತರ ಕಾರಣದಿಂದ ಸಿಕ್ಕ ಬೆಲೆಗೆ ಕೊಡುವುದು ಮಾಮೂಲಾಗಿದೆ. ಜಿಲ್ಲೆಯ ಒಂದು ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಅರಸೀಕೆರೆ ಹಾಗೂ ಚನ್ನರಾಯ ಪಟ್ಟಣ ತಾಲೂಕು ಪ್ರಮುಖ ಪಾತ್ರ ವಹಿಸುತ್ತವೆ. ಉಳಿದಂತೆ ತಿಪಟೂರು, ತುಮಕೂರು, ಮೈಸೂರು ಜಿಲ್ಲೆಯಲ್ಲಿಯೂ ಹೆಚ್ಚಾಗಿ ತೆಂಗು ಬೆಳೆಯುತ್ತಿದ್ದು, ಬೆಲೆ ಇಳಿಕೆ ಪರಿಣಾಮ ಚಿಂತೆಗೀಡು ಮಾಡಿದೆ.

ತೆಂಗು ಬೆಳೆಗಾರರು ಎಳನೀರು, ತೆಂಗಿನಕಾಯಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬರಿ ಮಾಡಿ ಮಾರಾಟಕ್ಕೆ ಒಲವು ತೋರುತ್ತಾರೆ. ಹೀಗಾಗಿ ಎಳನೀರು ಒಂದಕ್ಕೆ ಮಾರುಕಟ್ಟೆಯಲ್ಲಿ 30 ರಿಂದ 35 ರೂ. ಇದ್ದರೆ, ತೆಂಗಿನಕಾಯಿ 15ರಿಂದ 20 ರೂ.ಗೆ ಮಾರಾಟವಾಗುತ್ತಿದೆ. ಇದು ಉತ್ತಮ ಬೆಲೆಯಾದರೂ ಬೆಳೆಗಾರನಿಗೆ ಸಿಗುವುದು ಮಾತ್ರ ಎಳನೀರಿಗೆ 15ರಿಂದ 20 ರೂ. ತೆಂಗಿನಕಾಯಿಗೆ 8ರಿಂದ 10 ರೂ. ಮಾತ್ರ ಎಂಬುದು ಗಮನಾರ್ಹ ಸಂಗತಿ. ಅರಸೀಕೆರೆ ಎಪಿಎಂಸಿ ಮಾರುಕಟ್ಟೆಗೆ ಏಪ್ರಿಲ್‌ನಿಂದ ಅಕ್ಟೋಬರ್‌ ಅಂತ್ಯದವರೆಗೆ 96,366 ಕ್ವಿಂಟಾಲ್‌ ಕೊಬ್ಬರಿ ಬಂದಿದೆ. ಏಪ್ರಿಲ್‌ನಲ್ಲಿ ಕ್ವಿಂಟಾಲ್‌ಗೆ ಕನಿಷ್ಠ 14 ಸಾವಿರ ರೂ. ಇದ್ದದ್ದು ಪ್ರಸ್ತುತ 12ರಿಂದ 13 ಸಾವಿರ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ.

ಗೋವಾ, ಬಾಂಬೆಯಲ್ಲಿ ಸಂತೆಬೆನ್ನೂರು ಎಳನೀರಿಗೆ ಭಾರೀ ಡಿಮ್ಯಾಂಡ್‌, ರೈತರಿಗೂ ಸಿಗುತ್ತಿದೆ ಉತ್ತಮ ದರ
ಇಳಿಮುಖ: ಏಪ್ರಿಲ್‌ನಲ್ಲಿ ಕ್ವಿಂಟಾಲ್‌ ಕೊಬ್ಬರಿಗೆ ಕನಿಷ್ಠ 14 ಸಾವಿರ ರೂ. ಇದ್ದದ್ದು, ಮೇನಲ್ಲಿ 13 ಸಾವಿರ ರೂ., ಜೂನ್‌ನಲ್ಲಿ 10,200 ರೂ.ರಿಂದ ಆರಂಭಗೊಂಡದ್ದು, ಅಕ್ಟೋಬರ್‌ ಅಂತ್ಯದಿಂದ ಹಿಡಿದು ನವೆಂಬರ್‌ ಕೊನೆಗೆ ಬಂದರೂ 12,320 ರೂ.ನಿಂದ ಮೇಲೆರುತ್ತಿಲ್ಲ ಎಂಬುದು ರೈತರ ಅಳಲು.

Milk Price Hike: ನಂದಿನಿ ಹಾಲು, ಮೊಸರಿನ ದರ 2 ರೂಪಾಯಿ ಹೆಚ್ಚಳ
ನಫೆಡ್‌ ಕೊಬ್ಬರಿಗೆ ಮಾತ್ರ!
ಕೊಬ್ಬರಿ ಬೆಲೆ ಇಳಿಕೆ ಸಂದರ್ಭದಲ್ಲಿ ಬೆಳೆಗಾರ ರೈತರ ಅನುಕೂಲಕ್ಕಾಗಿ ನಫೆಡ್‌ ಮೂಲಕ ಬೆಂಬಲ ಬೆಲೆ ನೀಡಿ ಖರೀದಿಸಲಾಗುತ್ತದೆ. ಆದರೆ, ನಫೆಡ್‌ನಲ್ಲಿ 11 ಸಾವಿರ ಇದ್ದರೆ, ಎಪಿಎಂಸಿಯಲ್ಲಿ 12 ಸಾವಿರ ಇರುವ ಕಾರಣ ಬೆಳೆಗಾರರು ಬೆಂಬಲ ಬೆಲೆಯ ಖರೀದಿ ಕೇಂದ್ರ ತೆರೆಯುವಂತೆ ಧರಣಿ, ಪ್ರತಿಭಟನೆ ನಡೆಸುವುದು ತಪ್ಪಿದಂತಾಗಿದೆ. ಆದರೆ 12 ಸಾವಿರ ಬೆಲೆಯೂ ಕಡಿಮೆ ಎನ್ನುವುದು ಬೆಳೆಗಾರರ ವಾದ.

Arecanut: ಅಡಕೆ ಬೆಳೆಗೆ ಹೊಸ ರೋಗ; ಬುಡ ಸಮೇತ ಬೀಳುತ್ತಿವೆ ಸಸಿಗಳು, ಬೆಳೆಗಾರರಲ್ಲಿ ಆತಂಕ
ಒತ್ತಾಯ: ಕೊಬ್ಬರಿ ಬೆಲೆ ತೀವ್ರ ಕುಸಿತ ಕಂಡ ಸಂದರ್ಭ ನಫೆಡ್‌ ಬೆಂಬಲ ಬೆಲೆ ನೀಡಿ ಖರೀದಿಸುತ್ತದೆ. ಆದರೆ, ತೆಂಗಿನ ಕಾಯಿ ಖರೀದಿಗೆ ಮುಂದಾಗದೆ ಇರುವುದು ಬೆಳೆಗಾರರಿಗೆ ಸಮಸ್ಯೆ. ಹೀಗಾಗಿ ಕೊಬ್ಬರಿಯಂತೆ ತೆಂಗಿಗೂ ಬೆಂಬಲ ಬೆಲೆ ನೀಡಿ ಖರೀದಿಸಿದರೆ ಅನುಕೂಲ. ಇದರೊಂದಿಗೆ ತೆಂಗಿಗೂ ಸಹಕಾರ ಸಂಘ ಸ್ಥಾಪನೆ ಮಾಡಿ ಆ ಮೂಲಕವಾದರೂ ಬೆಳೆಗಾರರ ನೆರವಿಗೆ ನಿಲ್ಲಬೇಕು ಎನ್ನುತ್ತಾರೆ ರೈತರು.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ