ಬೇಲೂರು: ಹೆಣ್ಣುಮಕ್ಕಳ ರಕ್ಷಣೆಗಾಗಿ ಭ್ರೂಣ ಲಿಂಗ ಪತ್ತೆ ನಿಷೇಧಿಸಿ, ಅನೇಕ ಕಾಯಿದೆಗಳನ್ನು ಜಾರಿಗೆ ತಂದರೂ ಹೆಣ್ಣು ಭ್ರೂಣ ಹತ್ಯೆ ಹೆಚ್ಚುತ್ತಿ ರುವುದು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳೂ ಹೆಚ್ಚುತ್ತಿರುವುದು ಆತಂಕಕಾರಿ ವಿಚಾರವಾಗಿದೆ ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯದರ್ಶಿ ಎಂ.ಸಿ.ಉಷಾ ಹೇಳಿದ್ದಾರೆ.
ತಾಲೂಕಿನ ಮುತ್ತುಗನ್ನೇ ಗ್ರಾಮದಲ್ಲಿ ತಾಲೂಕು ಬಿಜೆಪಿ ಘಟಕದಿಂದ ನಡೆದ ವಿಶ್ವ ಮಹಿಳಾ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವು ದರಿಂದ ಹೆಣ್ಣಿನ ಸಂಖ್ಯೆಯು ದಿನಗಳದಂತೆ ಇಳಿಮುಖವಾಗುತ್ತಿದೆ. ಇದು ಸಮಾಜದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇದರ ಜತೆಯಲ್ಲಿ ಹೆಣ್ಣು ಮಕ್ಕಳ ಮಾರಾಟ ಜಾಲಗಳೂ ಸದಢ ಸಮಾಜದ ಮೇಲೆ ಮಾರಕವಾದ ಪರಿಣಾಮ ವನ್ನುಂಟು ಮಾಡುತ್ತದೆ. ಈ ಕುರಿತು ಎಲ್ಲರೂ ಜಾಗತಿ ವಹಿಸುವ ಅಗತ್ಯವಿದೆ ಎಂದರು.
ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯೆ ಸುಶೀಲ ಅಣ್ಣಪ್ಪ, ಸದ್ಯ ಮಹಿಳೆಯರಿಗೆ ಗ್ರಾಪಂ ತಾಪ ಹಾಗೂ ಜಿಪಂಗಳಲ್ಲಿ ಶೇ.50ರ ಅನುಪಾತದಲ್ಲಿ ಮೀಸಲಾತಿ ಇರುವಂತೆ ವಿಧಾನ ಸಭೆ ಹಾಗೂ ಲೋಕಸಭೆಯಲ್ಲೂ ಈ ಕ್ರಮ ಜಾರಿಯಾಗಬೇಕೆಂದು ಆಗ್ರಹ ಮಾಡಿದರು.
ಲಿಂಗ ತಾರತಮ್ಯ ಸರಿದೂಗಿಸಲು ಇದು ಅಗತ್ಯ ಎಂದು ಪ್ರತಿಪಾದಿಸಿದರು. ಅಲ್ಲದೆ, ಹೆಣ್ಣಿನ ಕುರಿತು ಕೀಳರಿಮೆ ತೊರೆದು ಸಮಾನ ಭಾವನೆಯನ್ನು ಕಾಣುವ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಮುಂದಾಗಬೇಕೆಂದರು.
ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾಗಣೇಶ್ ಸಹ ಮಾತನಾಡಿ ದರು. ತಾಲೂಕು ಬಿಜೆಪಿಘಟಕಾಧ್ಯಕ್ಷ ಕೊರಟಿಗೆರೆ ಪ್ರಕಾಶ್, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ರೇಣುಕುಮಾರ್, ರಾಜ್ಯ ಹಿಂದುಳಿದ ವರ್ಗ ವಿಭಾಗದ ಪ್ರ.ಕಾರ್ಯದರ್ಶಿ ಇ.ಎಚ್.ಲಕ್ಷ್ಮಣ್, ಅಡಗೂರು ಬಸವರಾಜು, ಮುಖಂಡರಾದ ಬಿ.ಕೆ.ಚಂದ್ರಕಲಾ, ಶಾಂತಮ್ಮ, ವಿಜಯಲಕ್ಷ್ಮೀ, ಅನ್ನಪೂರ್ಣ ಉಷಾ ಮತ್ತಿತರರು ಹಾಜರಿದ್ದರು.
ತಾಲೂಕಿನ ಮುತ್ತುಗನ್ನೇ ಗ್ರಾಮದಲ್ಲಿ ತಾಲೂಕು ಬಿಜೆಪಿ ಘಟಕದಿಂದ ನಡೆದ ವಿಶ್ವ ಮಹಿಳಾ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವು ದರಿಂದ ಹೆಣ್ಣಿನ ಸಂಖ್ಯೆಯು ದಿನಗಳದಂತೆ ಇಳಿಮುಖವಾಗುತ್ತಿದೆ. ಇದು ಸಮಾಜದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇದರ ಜತೆಯಲ್ಲಿ ಹೆಣ್ಣು ಮಕ್ಕಳ ಮಾರಾಟ ಜಾಲಗಳೂ ಸದಢ ಸಮಾಜದ ಮೇಲೆ ಮಾರಕವಾದ ಪರಿಣಾಮ ವನ್ನುಂಟು ಮಾಡುತ್ತದೆ. ಈ ಕುರಿತು ಎಲ್ಲರೂ ಜಾಗತಿ ವಹಿಸುವ ಅಗತ್ಯವಿದೆ ಎಂದರು.
ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯೆ ಸುಶೀಲ ಅಣ್ಣಪ್ಪ, ಸದ್ಯ ಮಹಿಳೆಯರಿಗೆ ಗ್ರಾಪಂ ತಾಪ ಹಾಗೂ ಜಿಪಂಗಳಲ್ಲಿ ಶೇ.50ರ ಅನುಪಾತದಲ್ಲಿ ಮೀಸಲಾತಿ ಇರುವಂತೆ ವಿಧಾನ ಸಭೆ ಹಾಗೂ ಲೋಕಸಭೆಯಲ್ಲೂ ಈ ಕ್ರಮ ಜಾರಿಯಾಗಬೇಕೆಂದು ಆಗ್ರಹ ಮಾಡಿದರು.
ಲಿಂಗ ತಾರತಮ್ಯ ಸರಿದೂಗಿಸಲು ಇದು ಅಗತ್ಯ ಎಂದು ಪ್ರತಿಪಾದಿಸಿದರು. ಅಲ್ಲದೆ, ಹೆಣ್ಣಿನ ಕುರಿತು ಕೀಳರಿಮೆ ತೊರೆದು ಸಮಾನ ಭಾವನೆಯನ್ನು ಕಾಣುವ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಮುಂದಾಗಬೇಕೆಂದರು.
ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾಗಣೇಶ್ ಸಹ ಮಾತನಾಡಿ ದರು. ತಾಲೂಕು ಬಿಜೆಪಿಘಟಕಾಧ್ಯಕ್ಷ ಕೊರಟಿಗೆರೆ ಪ್ರಕಾಶ್, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ರೇಣುಕುಮಾರ್, ರಾಜ್ಯ ಹಿಂದುಳಿದ ವರ್ಗ ವಿಭಾಗದ ಪ್ರ.ಕಾರ್ಯದರ್ಶಿ ಇ.ಎಚ್.ಲಕ್ಷ್ಮಣ್, ಅಡಗೂರು ಬಸವರಾಜು, ಮುಖಂಡರಾದ ಬಿ.ಕೆ.ಚಂದ್ರಕಲಾ, ಶಾಂತಮ್ಮ, ವಿಜಯಲಕ್ಷ್ಮೀ, ಅನ್ನಪೂರ್ಣ ಉಷಾ ಮತ್ತಿತರರು ಹಾಜರಿದ್ದರು.