ಆ್ಯಪ್ನಗರ

ದ್ವೇಷದ ರಾಜಕಾರಣ ಮಾಡಿದ್ರೆ ಹೋರಾಟ

ಪ್ರಧಾನಿ ಮೋದಿ, ಅಮಿತ್‌ ಶಾ ಹಾದಿ-ಬೀದಿ ತಿರುಗಿದರೂ, 'ಆಮ್‌ ಆದ್ಮಿ' ಪೊರಕೆ ತೆಗೆದು ಕೊಂಡು ಗುಡಿಸಿ ಹಾಕಲಿಲ್ಲವೇ? ದ್ವೇಷದ ರಾಜಕಾರಣ ಮಾಡಿದರೆ ರಾಜ್ಯದಲ್ಲೂಅದೇ ಸ್ಥಿತಿ ಬರಲಿದೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಎಚ್ಚರಿಸಿದ್ದಾರೆ.

Vijaya Karnataka 13 Feb 2020, 5:00 am
ಹಾಸನ: ಪ್ರಧಾನಿ ಮೋದಿ, ಅಮಿತ್‌ ಶಾ ಹಾದಿ-ಬೀದಿ ತಿರುಗಿದರೂ, 'ಆಮ್‌ ಆದ್ಮಿ' ಪೊರಕೆ ತೆಗೆದು ಕೊಂಡು ಗುಡಿಸಿ ಹಾಕಲಿಲ್ಲವೇ? ದ್ವೇಷದ ರಾಜಕಾರಣ ಮಾಡಿದರೆ ರಾಜ್ಯದಲ್ಲೂ ಅದೇ ಸ್ಥಿತಿ ಬರಲಿದೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಎಚ್ಚರಿಸಿದ್ದಾರೆ.
Vijaya Karnataka Web HD REVANNA_1CLR


''ಸಮ್ಮಿಶ್ರ ಸರಕಾರದ ಅವಧಿಯಲ್ಲಿಮಂಜೂರಾದ ಯೋಜನೆಗಳಿಗೆ ಹಣ ಬಿಡುಗಡೆ ಮಾಡದೆ ತಡೆಹಿಡಿಯಲಾಗಿದೆ. ಚನ್ನಪಟ್ಟಣ ಕೆರೆ ವಿಹಾರಧಾಮ ನಿರ್ಮಾಣಕ್ಕೆ 144 ಕೋಟಿ ರೂ. ಮಂಜೂರಾಗಿದ್ದನ್ನು 35 ಕೋಟಿಗೆ ಸೀಮಿತಗೊಳಿಸಿ, ಉಳಿದ ಹಣವನ್ನು ನಗರ ವ್ಯಾಪ್ತಿಯ ಆರು ಹಾಗೂ ಒಂಬತ್ತು ಉದ್ಯಾನ ಅಭಿವೃದ್ಧಿಗೆ ಪರಿ ಷ್ಕರಿಸಲಾಗುತ್ತಿದೆ'' ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ದೂರಿದರು.

''ಮೊಸಳೆ ಹೊಸಳ್ಳಿಯಲ್ಲಿಪ್ರಾರಂಭ ವಾಗಿರುವ ಸರಕಾರಿ ಎಂಜಿನಿಯರಿಂಗ್‌ ಕಾಲೇಜು ಸಂಯೋಜನೆಯನ್ನು ಉನ್ನತ ಶಿಕ್ಷಣ ಇಲಾಖೆ ತಿರಸ್ಕರಿಸಿದೆ. ನಗರೋತ್ಥಾನ ಕ್ರಿಯಾ ಯೋಜನೆಗೆ ಪೌರಾಡಳಿತ ಇಲಾಖೆ ಯಿಂದ 2019ರ ಜ. 25 ರಂದು ಅನು ಮೋದನೆ ದೊರೆತು ಕಾಮಗಾರಿ ಅನುಷ್ಠಾನಕ್ಕೆ ಟೆಂಡರ್‌ ಕರೆಯ ಲಾಗಿತ್ತು. ಈ ಹಂತದಲ್ಲಿರಾಜ ಕೀಯ ದುರುದ್ದೇಶದಿಂದ ಕಾಮ ಗಾರಿ ಬದಲಾವಣೆ ಮಾಡಲಾಗು ತ್ತಿದೆ'' ಎಂದು ಆಪಾದಿಸಿದರು.

''ಜಿಲ್ಲೆಗೆ ನಾನಾ ಅಭಿವೃದ್ಧಿ ಕಾಮಗಾರಿಗೆ ತಡೆಯೊಡ್ಡಿದ್ದು, ಇದನ್ನು ವಿರೋಧಿಸಿ ಫೆ. 24ರಂದು ಜಿಲ್ಲಾಧಿಕಾರಿ ಕಚೇರಿ ಬಳಿ ಶಾಂತಿಯುತ ಧರಣಿ ನಡೆಸುತ್ತೇವೆ. ಯೋಜನೆಗೆ ಹಣ ಬಿಡುಗಡೆಗೊಳಿಸದಿದ್ದಲ್ಲಿ ಮುಖ್ಯಮಂತ್ರಿ ಮನೆ ಎದುರು ಧರಣಿ ನಡೆಸುತ್ತೇವೆ'' ಎಂದು ಎಚ್ಚರಿಸಿದರು.

ಸವಕಲು ನಾಣ್ಯಕ್ಕೆ ಬೆಲೆ: ''ಜೆಡಿಎಸ್‌ ಸವಕಲು ನಾಣ್ಯ'' ಎಂಬ ಕಂದಾಯ ಸಚಿವ ಆರ್‌.ಅಶೋಕ್‌ ಟೀಕೆಗೆ ಪ್ರತಿಕ್ರಿಯಿಸಿ, ''ಸವಕಲು ನಾಣ್ಯಕ್ಕೆ ಇರುವ ಬೆಲೆ ಅವರಿಗೇನು ಗೊತ್ತು?. 2013ರಲ್ಲಿಬಿಜೆಪಿ ಮೂರನೇ ಸ್ಥಾನದಲ್ಲಿತ್ತು. ಆಗ ಜೆಡಿಎಸ್‌ ಎರಡನೇ ಸ್ಥಾನದಲ್ಲಿತ್ತು ಎಂಬುದನ್ನು ತಿಳಿಯಬೇಕು. ರಾಜಕೀಯವಾಗಿ ದೇವೇಗೌಡರನ್ನು ಮುಗಿಸಲೇಬೇಕೆಂದು ಎರಡು ರಾಷ್ಟ್ರೀಯ ಪಕ್ಷಗಳು ಯತ್ನಿಸುತ್ತಿವೆ. ಅದೆಲ್ಲಆಗದ ಮಾತು'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ