ಆ್ಯಪ್ನಗರ

ಮನೆಗೆ ಬೆಂಕಿ: 1.50ಲಕ್ಷ ಹಾನಿ

ತಾಲೂಕಿನ ವಡ್ಡರಹಳ್ಳಿ ಗ್ರಾಮದ ವಾಸದ ಮನೆ ಸಮೀಪದ ತಿಪ್ಪೆಯಲ್ಲಿ ಕಾಣಿಸಿಕೊಂಡ ಬೆಂಕಿ ಮನೆಗೆ ಆವರಿಸಿ 1.50ಲಕ್ಷ ಹಾನಿ ಸಂಭವಿಸಿದೆ.

Vijaya Karnataka 14 Jul 2019, 5:00 am
ಅರಕಲಗೂಡು: ತಾಲೂಕಿನ ವಡ್ಡರಹಳ್ಳಿ ಗ್ರಾಮದ ವಾಸದ ಮನೆ ಸಮೀಪದ ತಿಪ್ಪೆಯಲ್ಲಿ ಕಾಣಿಸಿಕೊಂಡ ಬೆಂಕಿ ಮನೆಗೆ ಆವರಿಸಿ 1.50ಲಕ್ಷ ಹಾನಿ ಸಂಭವಿಸಿದೆ.
Vijaya Karnataka Web HSN-HSN13ARK3


ಶುಕ್ರವಾರ ಸಂಜೆ ಬೆಂಕಿ ಅವಘಡ ಉಂಟಾಗಿದ್ದು,ಗ್ರಾಮದ ಮಂಜೇಗೌಡ ಎಂಬುವರಿಗೆ ಸೇರಿದ ವಾಸದ ಮನೆಗೆ ಬೆಂಕಿಯಿಂದ ಹಾನಿ ಉಂಟಾಗಿದೆ. ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು, ಧವಸ ಧಾನ್ಯಗಳು ಸುಟ್ಟಹೋಗಿವೆ.

ಮನೆಯ ಮಾಲೀಕ ಮಂಜೇಗೌಡ ಕೋಳಿ ಸಾಗಾಣಿಕೆ ವಾಹನದ ಚಾಲಕನಾಗಿದ್ದು, ಮನೆ ಸಮೀಪದ ತಿಪ್ಪೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಮೀಟರ್‌ ಅಂತರದಲ್ಲಿ ವಾಸದ ಮನೆ ಇದ್ದು, ಗಾಳಿ ಬೀಸಿದ ರಭಸಕ್ಕೆ ಸೌಧೆಗೆ ಬೆಂಕಿ ತಾಗಿದೆ. ಬಳಿಕ ಮನೆಯನ್ನು ಆವರಿಸಿದೆ.ಸಕಾಲದಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಜರಾಗಿ ಬೆಂಕಿ ನಂದಿಸಿದ್ದಾರೆ.

ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ಠಾಣೆಯ ಅಧಿಕಾರಿ ರಾಜು, ಸಿಬ್ಬಂದಿಗಳಾದ ನಿಂಗರಾಜು, ಸಂತೋಷ್‌, ಯೋಗರಾಜ್‌ ತೊಡಗಿಕೊಂಡಿದ್ದರು. ಇವರೊಂದಿಗೆ ಗ್ರಾಮಸ್ಥರು ಸಹ ನೆರವಾದರು.

ಊTಓ13ಂಖಏ3ಅ

ಎಆರ್‌ಕೆ ಫೋಟೋ3-ಕ್ಯಾಪ್ಸನ್‌-ಅರಕಲಗೂಡು ತಾಲೂಕು ವಡ್ಡರಹಳ್ಳಿ ಗ್ರಾಮದ ಮಂಜೇಗೌಡರಿಗೆ ಸೇರಿದ ವಾದ ಮನೆ ಬೆಂಕಿಗೆ ಆಹುತಿಯಾಗಿರುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ