ಆ್ಯಪ್ನಗರ

ಹರಕೆ ತೀರಿಸುವಾಗ ಸೀರೆಗೆ ತಾಗಿದ ಬೆಂಕಿ: ಮಹಿಳೆ ಅಪಾಯದಿಂದ ಪಾರು

ಲಕ್ಷಾಂತರ ಮಂದಿಯ ಆರಾಧ್ಯ ದೇವತೆ ಎನಿಸಿರುವ ಶ್ರೀ ಸ್ವರ್ಣಗೌರಮ್ಮ ದೇವಿ ನೆಲೆಸಿರುವ ತಾಲೂಕಿನ ಮಾಡಾಳು ಕ್ಷೇತ್ರದಲ್ಲಿ ನೂರಾರು ಭಕ್ತರು ಹರಕೆ ತೀರಿಸುತ್ತಿದ್ದ ವೇಳೆ ಮಹಿಳೆಯೊಬ್ಬರ ಸೀರೆಗೆ ಆಕಸ್ಮಿಕವಾಗಿ ಕರ್ಪೂರದ ಜ್ವಾಲೆ ತಾಗಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

Vijaya Karnataka 13 Sep 2018, 5:00 am
ಅರಸೀಕೆರೆ: ಲಕ್ಷಾಂತರ ಮಂದಿಯ ಆರಾಧ್ಯ ದೇವತೆ ಎನಿಸಿರುವ ಶ್ರೀ ಸ್ವರ್ಣಗೌರಮ್ಮ ದೇವಿ ನೆಲೆಸಿರುವ ತಾಲೂಕಿನ ಮಾಡಾಳು ಕ್ಷೇತ್ರದಲ್ಲಿ ನೂರಾರು ಭಕ್ತರು ಹರಕೆ ತೀರಿಸುತ್ತಿದ್ದ ವೇಳೆ ಮಹಿಳೆಯೊಬ್ಬರ ಸೀರೆಗೆ ಆಕಸ್ಮಿಕವಾಗಿ ಕರ್ಪೂರದ ಜ್ವಾಲೆ ತಾಗಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
Vijaya Karnataka Web fire burned to saree the woman was safe in danger
ಹರಕೆ ತೀರಿಸುವಾಗ ಸೀರೆಗೆ ತಾಗಿದ ಬೆಂಕಿ: ಮಹಿಳೆ ಅಪಾಯದಿಂದ ಪಾರು


ದೇವಾಲಯದ ಬಳಿ ಸ್ವರ್ಣಗೌರಿಗೆ ಕರ್ಪೂರದ ಕುಂಡವಿದ್ದು, ಇಲ್ಲಿ ಸಾವಿರಾರು ಭಕ್ತರು ಕರ್ಪೂರ ಹೊತ್ತಿಸುತ್ತಾರೆ. ಹೀಗಾಗಿ ಅಗ್ನಿ ಕುಂಡದಲ್ಲಿ ಬುಧವಾರ ದೊಡ್ಡ ಜ್ವಾಲೆ ಉರಿಯುತ್ತಿತ್ತು. ಇಲ್ಲಿ ಭಕ್ತರು ತಲೆ ಮೇಲೆ ದುಗುಲ ಹೊತ್ತು ಹರಕೆ ತೀರಿಸುವುದು ಸಂಪ್ರದಾಯ. ಅದರಂತೆ ಮಹಿಳೆಯೊಬ್ಬರು ಹರಕೆ ತೀರಿಸುವಾಗ ಅವರು ಹೊತ್ತಿದ್ದ ದುಗುಲ ಆಕಸ್ಮಾತ್‌ ಅಗ್ನಿ ಕುಂಡದೊಳಕ್ಕೆ ಬಿತ್ತು. ಪರಿಣಾಮ ಕುಂಡದಿಂದ ಕಿಡಿಯೊಂದು ಹಾರಿ ಸಮೀಪವಿದ್ದ ಮತ್ತೊಬ್ಬ ಮಹಿಳೆಯ ಸೀರೆಗೆ ತಾಗಿ ಬೆಂಕಿಹೊತ್ತಿಕೊಂಡಿದೆ. ಇದರಿಂದ ಗಾಬರಿಯಾದ ಮಹಿಳೆ, ಬೆಂಕಿ ನಂದಿಸುವ ಭರದಲ್ಲಿ ನೆಲಕ್ಕುರುಳಿದರು. ಆಗ ಜ್ವಾಲೆ ಮತ್ತಷ್ಟು ಆವರಿಸಿಕೊಂಡು ಸ್ಥಳದಲ್ಲಿ ಆತಂಕ ಸೃಷ್ಟಿಸಿತು.

ಸಮೀಪದಲ್ಲಿದ್ದ ಇತರೆ ಭಕ್ತರು ತಕ್ಷಣ ಎಚ್ಚೆತ್ತುಕೊಂಡು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಮಹಿಳೆ ಯಾವುದೇ ಅಪಾಯವಿಲ್ಲದೇ ಪಾರಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ