ಆ್ಯಪ್ನಗರ

ಹಾಸನದಲ್ಲಿ 5 ಕೋಟಿ ವೆಚ್ಚದಲ್ಲಿ ಫುಡ್‌ಪಾರ್ಕ್ ನಿರ್ಮಾಣ: ಶಾಸಕ ಪ್ರೀತಂ ಜೆ. ಗೌಡ

ರಸ್ತೆಬದಿ ವ್ಯಾಪಾರಿಗಳ ಹಿತ ರಕ್ಷಣೆ ಹಿನ್ನೆಲೆಯಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಫುಡ್‌ ಪಾರ್ಕ್ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಹಾಸನದ ಶಾಸಕ ಪ್ರೀತಂ ಜೆ. ಗೌಡ ಹೇಳಿದರು.

Vijaya Karnataka Web 3 Mar 2021, 9:13 pm
ಹಾಸನ: ನಗರದ ಸ್ವಚ್ಛತೆ ಹಾಗೂ ಜನತೆಯ ಆರೋಗ್ಯದ ದೃಷ್ಟಿ, ರಸ್ತೆಬದಿ ವ್ಯಾಪಾರಿಗಳ ಹಿತ ರಕ್ಷಣೆ ಹಿನ್ನೆಲೆಯಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಫುಡ್‌ ಪಾರ್ಕ್ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಶಾಸಕ ಪ್ರೀತಂ ಜೆ. ಗೌಡ ಹೇಳಿದರು.
Vijaya Karnataka Web PREETHAM GOWDA
ಪ್ರೀತಂ ಜಿ ಗೌಡ, ಶಾಸಕ (ಸಂಗ್ರಹ ಚಿತ್ರ)


ನಗರದ ಸಾಲಗಾಮೆ ರಸ್ತೆ, ಸಹ್ಯಾದ್ರಿ ಚಿತ್ರಮಂದಿರ ಬಳಿ ಒಂದುಕೋಟಿ ವೆಚ್ಚದ ಯುಜಿಡಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಗರದಲ್ಲಿ ಹಲವು ವರ್ಷಗಳಿಂದ ಯುಜಿಡಿ ಸಮಸ್ಯೆ ಮನಗಂಡು ದೇವಿಗೆರೆ ವೃತ್ತದಿಂದ ಮುಖ್ಯಮಂತ್ರಿ ನಗರೋತ್ಪಾನ ಯೋಜನೆ ಅಡಿ 1 ಕೋಟಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ದೇವಿಗೆರೆ ವೃತ್ತದ ಬಳಿ ಪದೇ ಪದೆ ಸಮಸ್ಯೆಯಾಗುತ್ತಿತ್ತು. ಮುಖ್ಯಮಂತ್ರಿ ನಗರೋತ್ಪಾನ ಯೋಜನೆಯಡಿ 1 ಕೋಟಿ ವೆಚ್ಚದಲ್ಲಿ ನಗರಸಭೆ ವತಿಯಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ದೇವಿಗೆರೆ ವೃತ್ತದಿಂದ ಎಂಜಿನಿಯರಿಂಗ್‌ ಕಾಲೇಜ್‌ವರೆಗು ಸಂಪರ್ಕ ಕಲ್ಪಿಸುವ ಯುಜಿಡಿ ಕಾಮಗಾರಿ ಒಂದು ತಿಂಗಳಲ್ಲಿ ಮುಗಿಯಲಿದೆ ಎಂದರು.

ಹಾಸನ: ಕೋ ವ್ಯಾಕ್ಸಿನ್‌ ಪಡೆದಿದ್ದ ಆಸ್ಪತ್ರೆ ಸಿಬ್ಬಂದಿ ಸಾವು, ಅಡ್ಡ ಪರಿಣಾಮದಿಂದ ಸಾವು ಎಂದ ಕುಟುಂಬ!

ಮುಂದಿನ ದಿನಗಳಲ್ಲಿ ಈ ರಸ್ತೆಗಳನ್ನು ನೋಡುವುದಕ್ಕೆ, ವಾಯು ವಿಹಾರಕೆ ಬರುವವರಿಗೆ ಉತ್ತಮ ಪರಿಸರ ನಿರ್ಮಾಣ ಮಾಡಲಾಗುವುದು. ನಗರಸಭೆಯ ಎಲ್ಲಾಸದಸ್ಯರ ಸಮ್ಮುಖದಲ್ಲಿ ಒಳ್ಳೆ ಪ್ರಯತ್ನ ಮಾಡಲಾಗುತ್ತಿದೆ. ಹಾಸನದ ಮಾರ್ಕೆಟ್‌ ಜಾಗದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಸಹಕಾರವಾಗುವ ರೀತಿ ಪಾರ್ಕಿಂಗ್‌ ವ್ಯವಸ್ಥೆಯಿಂದ ಹಿಡಿದು ಪಾದಚಾರಿಗಳು ವಾಹನವನ್ನು ಪಾರ್ಕಿಂಗ್‌ ಮಾಡಿ ಸುಸರ್ಜಿತವಾದ ಮಾರ್ಕೆಟ್‌ ಪ್ರದೇಶಕ್ಕೆ ಹೋಗುವ ರೀತಿ ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಯೋಜನೆಗೆ 5 ಕೋಟಿ ರೂ ಹಣವನ್ನು ತಂದು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇನ್ನೊಂದು ತಿಂಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

ಮಲೆನಾಡಿಗೆ ಮುದ ನೀಡಿದ ಕಾಫಿ ಕಂಪು; ರೋಬಸ್ಟಾ ಗಿಡದಲ್ಲಿ ಹೂ ರಾಶಿ, ಪ್ರವಾಸಿಗರು ಫಿದಾ!

ನಗರಸಭೆ ಆಯುಕ್ತ ಕೃಷ್ಣಮೂರ್ತಿ, ಆರೋಗ್ಯ ಅಧಿಕಾರಿ ಮಂಜುನಾಥ್‌, 19ನೇ ವಾರ್ಡಿನ ಅಕ್ಮಲ್‌, ಮುಖಂಡರಾದ ಡಿ.ಟಿ. ಪ್ರಕಾಶ್‌ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ