ಆ್ಯಪ್ನಗರ

ನನಗಿನ್ನೂ ವಯಸ್ಸಾಗಿಲ್ಲ, ಹಾಸನ ನಂ.1 ಮಾಡೇ ಮಾಡ್ತೀನಿ: ಎಚ್‌ಡಿ ರೇವಣ್ಣ

ಹಾಸನ ಜಿಲ್ಲೆಗೆ ಮಾಡಿರುವ ಕೆಲಸದ ಬಗ್ಗೆ ಹೇಳಲು ಬೆಟ್ಟದಷ್ಟಿದೆ. ನನಗಿನ್ನೂ ವಯಸ್ಸಾಗಿಲ್ಲ. ಇಂದಲ್ಲ, ನಾಳೆ ಹಾಸನ ಜಿಲ್ಲೆಯನ್ನು ನಂ.1 ಮಾಡಿಯೇ ತೀರುತ್ತೇನೆ ಎಂದು ಮಾಜಿ ಸಚಿವ ಎಚ್‌ಡಿ ರೇವಣ್ಣ ಹೇಳಿದರು.

Vijaya Karnataka Web 30 Aug 2019, 4:06 pm
ಹಾಸನ: ನನಗೇನು ವಯಸ್ಸಾಗಿಲ್ಲ, ಇವತ್ತಲ್ಲ, ನಾಳೆ ಹಾಸನ ಜಿಲ್ಲೆಯನ್ನು ನಂ.1 ಮಾಡುತ್ತೇನೆ ಎಂದು ಮಾಜಿ ಸಚಿವ ಎಚ್‌ಡಿ ರೇವಣ್ಣ ಶಪಥ ಮಾಡಿದರು. ಜಿಲ್ಲೆಗೆ ಮಾಡಿರುವ ಕೆಲಸದ ಬಗ್ಗೆ ಹೇಳಲು ಬೆಟ್ಟದಷ್ಟಿದೆ. ಇನ್ನೂ ರಾಜಕೀಯ ಮಾಡೋ ಶಕ್ತಿ ಇರುವ ಕಾರಣ ಐದು ಜಿಲ್ಲೆಯ ಜವಾಬ್ದಾರಿಯನ್ನು ತೆಗೆದುಕೊಂಡು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಲಗೈಯಾಗಿ ನಿಲ್ಲುತ್ತೇನೆ ಎಂದರು.
Vijaya Karnataka Web HD Revanna


ಹಾಸನ ಜಿಲ್ಲೆಗೆ ಮಾತ್ರ ರೇವಣ್ಣ ಸೀಮಿತ ಎಂಬ ಆರೋಪವಿತ್ತು. ಆ ಕಾರಣ ತನ್ನ ಕಾರ್ಯಕ್ಷೇತ್ರವನ್ನು ರಾಜ್ಯಕ್ಕೂ ವಿಸ್ತರಿಸಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿಹೇಳಿದರು. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬೇರೆ, ನಾನು ಬೇರೆಯಲ್ಲ, ಸರಕಾರ ಉರುಳಲು ನಾನೇ ಕಾರಣ ಎಂಬ ಆರೋಪದ ಬಗ್ಗೆ ಅದೇನು ಎಂಬುದನ್ನು ಆಮೇಲೆ ಹೇಳುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗುತ್ತದೆಯೇ? ಆ ಕಾರಣ ಪಕ್ಷ ಸಂಘಟನೆಗೆ ಹೊರಟಿದ್ದಿರಾ ಎಂಬ ಪ್ರಶ್ನೆಗೆ ಮಧ್ಯನೂ ಗೊತ್ತಿಲ್ಲ, ಮಧ್ಯಂತರ ಚುನಾವಣೆ ಮಾಹಿತಿಯೂ ಇಲ್ಲ ಎಂದು ಹೇಳಿದರು.

ಶಿವಮೊಗ್ಗ ಅಭಿವೃದ್ಧಿ: ಜಿಲ್ಲೆಹಾಗೂ ರಾಜ್ಯದಲ್ಲಿಪ್ರವಾಹ, ಅತಿವೃಷ್ಟಿ ಸಂಭವಿಸಿ ಜನ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿಶಿವಮೊಗ್ಗ , ಶಿಕಾರಿಪುರದ ಅಭಿವೃದ್ಧಿಗೆ 2 ಸಾವಿರ ಕೋಟಿ ಕೊಟ್ಟಿದ್ದಾರೆ. ಹೀಗಿರುವಾಗ ಅವರಿಗೆ ಮನಸ್ಸು ಬಂದಾಗ ಸಂಕಷ್ಟಕ್ಕೆ ನೆರವಾಗಲಿ, ಅಭಿವೃದ್ಧಿಗೆ ಹಣ ನೀಡಲಿ. ಎಲ್ಲವನ್ನು ಕಾದು ನೋಡುತ್ತೇವೆ. ಟೀಕೆ ಮಾಡಲ್ಲ, ಆತುರ ಪಡಲ್ಲಎಂದು ಜಾಣ್ಮೆಯ ಉತ್ತರ ನೀಡಿದರು.

ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ 14 ತಿಂಗಳ ಅಧಿಕಾರಾವಧಿಯಲ್ಲಿಯಾವ್ಯಾವ ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಕಾಲಬಂದಾಗ ಬಿಡಿಸಿಡುತ್ತೇನೆ ಎಂದರು.

ಜಿಲ್ಲೆಯಲ್ಲಿ ಅತಿವೃಷ್ಟಿ, ಪ್ರವಾಹದಿಂದ ರಸ್ತೆ, ಕೆರೆ,ಕಟ್ಟೆ, ಬೆಳೆ, ಮನೆ, ಕೃಷಿ ಮತ್ತು ತೋಟಗಾರಿಕೆ ಬೆಳೆ ಸೇರಿದಂತೆ 590 ಕೋಟಿ ರೂ. ಹಾನಿಯಾಗಿದೆ, ಕೇಂದ್ರದ ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿಯ ನಿಯಮಾವಳಿ ಅನುಸರಿಸಿದರೆ 139 ಕೋಟಿ ರೂ. ಬರುತ್ತದೆ. ಆದಕಾರಣ ನಿಯಮ ಸಡಿಲಿಸಿ ನಷ್ಟವಾದ ಪೂರ್ಣ ಹಣ ಕೊಡಬೇಕು ಎಂದು ಒತ್ತಾಯಿಸಿದರು. ಶಾಸಕ ಎಚ್‌.ಕೆ.ಕುಮಾರಸ್ವಾಮಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ