ಆ್ಯಪ್ನಗರ

ಎಚ್ಡಿಕೆ ರಾಜಕೀಯ ಸನ್ಯಾಸತ್ವ ಪಡೆಯಲಿ: ಎ.ಮಂಜು ಟಾಂಗ್‌

ದೂರವಾಣಿ ಕದ್ದಾಲಿಕೆ ಪ್ರಕರಣದ ಆರೋಪ ಸಾಬೀತಾಗುವ ಆತಂಕದಿಂದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಜಕೀಯದಿಂದ ದೂರ ಉಳಿಯುವ ಮಾತನಾಡುತ್ತಿದ್ದು, ರಾಜಕೀಯ ಸನ್ಯಾಸತ್ವಕ್ಕೆ ಇದು ಸೂಕ್ತ ಸಮಯ ಎಂದು ಮಾಜಿ ಸಚಿವ ಎ.ಮಂಜು ಟಾಂಗ್‌ ನೀಡಿದರು.

Vijaya Karnataka 23 Oct 2019, 5:00 am
ಹಾಸನ: ದೂರವಾಣಿ ಕದ್ದಾಲಿಕೆ ಪ್ರಕರಣದ ಆರೋಪ ಸಾಬೀತಾಗುವ ಆತಂಕದಿಂದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಜಕೀಯದಿಂದ ದೂರ ಉಳಿಯುವ ಮಾತನಾಡುತ್ತಿದ್ದು, ರಾಜಕೀಯ ಸನ್ಯಾಸತ್ವಕ್ಕೆ ಇದು ಸೂಕ್ತ ಸಮಯ ಎಂದು ಮಾಜಿ ಸಚಿವ ಎ.ಮಂಜು ಟಾಂಗ್‌ ನೀಡಿದರು.
Vijaya Karnataka Web get hdk political asceticism a manju tong
ಎಚ್ಡಿಕೆ ರಾಜಕೀಯ ಸನ್ಯಾಸತ್ವ ಪಡೆಯಲಿ: ಎ.ಮಂಜು ಟಾಂಗ್‌


ಹಾಸನಾಂಬ ದೇವರ ದರ್ಶನ ಬಳಿಕ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, ''ತಮ್ಮ ಪಕ್ಷದ ಶಾಸಕರ ಮೇಲೆ ನಂಬಿಕೆ ಇಲ್ಲದವರು ಅವರ ಫೋನ್‌ ಕದ್ದಾಲಿಸುವ ಜತೆಗೆ ಮೈತ್ರಿ ಪಕ್ಷ ಕಾಂಗ್ರೆಸ್‌ ಮುಖಂಡರ ಫೋನ್‌ಗಳನ್ನೂ ಕದ್ದಾಲಿಸಲಾಗಿದೆ.

ಇಂತಹ ಗುರುತರ ಆರೋಪದಿಂದ ಪಾರಾಗಲು ರಾಜಕೀಯ ದಿಂದ ದೂರ ಉಳಿಯುತ್ತೇನೆ, ಸನ್ಯಾಸತ್ವ ತೆಗೆದುಕೊಳ್ಳುತ್ತೇನೆ ಎಂಬ ಹೇಳಿಕೆ ನೀಡುತ್ತಿದ್ದಾರೆ'' ಎಂದು ಟೀಕಿಸಿದರು. ಮೋದಿ ಓಲೈಕೆಗಾಗಿ ಫೋಟೊ: ''ರಾಷ್ಟ್ರಪತಿ ಚುನಾವಣೆ ಯಲ್ಲಿ ಮತ ಚಲಾಯಿಸಲು ಹಾಗೂ ಸರ್ದಾರ್‌ ವಲ್ಲಭಾಯಿ ಪಟೇಲ್‌ ಪ್ರತಿಮೆ ಉದ್ಘಾಟನಾ ಸಮಾರಂಭಕ್ಕೆ ಅಧಿಕೃತ ಆಹ್ವಾನ ನೀಡಿದರೂ ಹೋಗದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಈಗ ಪ್ರತಿಮೆ ಎದುರು ನಿಂತು ಫೋಟೊ ಕ್ಲಿಕ್ಕಿಸಿಕೊಂಡು ಪ್ರಧಾನಿಗೆ ಟ್ವೀಟ್‌ ಮಾಡಿ ಶ್ಲಾಘಿಸುವ ಮೂಲಕ ಮೋದಿ ಓಲೈಕೆಯ ರಾಜಕಾರಣ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ಬೆಳಗ್ಗೆ ಒಂದು ರೀತಿ, ರಾತ್ರಿ ಮತ್ತೊಂದು ರೀತಿ ಹೇಳಿಕೆ ನೀಡುವುದರಲ್ಲಿ ನಿಸ್ಸೀಮರು'' ಎಂದು ವ್ಯಂಗ್ಯವಾಡಿದರು.

ಜೆಡಿಎಸ್‌ಗೆ ಭವಿಷ್ಯವಿಲ್ಲ: ''ಸದಾ ಮಕ್ಕಳು, ಮೊಮ್ಮಕ್ಕಳ ರಾಜಕೀಯ ಏಳಿಗೆ ಬಗ್ಗೆಯೇ ಚಿಂತಿಸಿ ರಾಜಕಾರಣ ಮಾಡುವ ಜೆಡಿಎಸ್‌ಗೆ ಮುಂದಿನ ದಿನದಲ್ಲಿ ಭವಿಷ್ಯವಿಲ್ಲ, ಆ ಪಕ್ಷವೇ ಇರಲ್ಲ,'' ಎಂದು ಮಂಜು ಭವಿಷ್ಯ ನುಡಿದರು. ''ಜೆಡಿಎಸ್‌ನ 20 ಶಾಸಕರು ಎಲ್ಲೆಲ್ಲಿಗೆ ಹೋಗುತ್ತಾರೆ ಕಾದು ನೋಡಿ'' ಎಂದು ಪಕ್ಷಾಂತರದ ಸುಳಿವು ನೀಡಿದರು. ಪ್ರತಿ ಚುನಾವಣೆ ಸಂದರ್ಭದಲ್ಲಿ ಸರ್ಜಿಕಲ್‌ ಸ್ಟ್ರೈಕ್‌ ನಡೆಸಲಾಗುತ್ತಿದೆ ಎಂಬ ಎಚ್ಡಿಕೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಎ.ಮಂಜು.''ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಕೂಡ ಬಾಂಗ್ಲಾದೇಶದ ಮೇಲೆ ಯುದ್ಧ ಸಾರಿದ್ದರಲ್ಲ. ಅದು ಚುನಾವಣೆ ರಾಜಕೀಯ ಎಂದು ಅರ್ಥೈಸಲು ಸಾಧ್ಯವೇ? ಪರಿಸ್ಥಿತಿಗೆ ಅನು ಗುಣವಾಗಿ ಭದ್ರತೆ ದೃಷ್ಟಿಯಿಂದ ತೀರ್ಮಾನ ಕೈಗೊಂಡಿರುತ್ತಾರೆ. ಇದು ಕೆಲವೊಬ್ಬರಿಗೆ ಅರ್ಥ ಆಗಲ್ಲ'' ಎಂದು ಲೇವಡಿ ಮಾಡಿ ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ