ಆ್ಯಪ್ನಗರ

ಉತ್ತಮ ಮಳೆ: ಹಸಿರಾದ ಬೆಳೆ

ರಾಮನಾಥಪುರ, ಕೊಣನೂರು ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆ ಬಿದ್ದ ಪರಿಣಾಮ ರೈತರು ಬಿತ್ತನೆ ಮಾಡಿದ್ದ ಬೆಳೆಗಳು ನಳನಳಿಸುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

Vijaya Karnataka 29 May 2019, 5:00 am
ಕೊಣನೂರು: ರಾಮನಾಥಪುರ, ಕೊಣನೂರು ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆ ಬಿದ್ದ ಪರಿಣಾಮ ರೈತರು ಬಿತ್ತನೆ ಮಾಡಿದ್ದ ಬೆಳೆಗಳು ನಳನಳಿಸುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
Vijaya Karnataka Web good rain greenery in fields
ಉತ್ತಮ ಮಳೆ: ಹಸಿರಾದ ಬೆಳೆ


ಮುಂಗಾರಿನ ಉರಿಬಿಸಿಲಿನ ತಾಪ ಹೆಚ್ಚಿ ಉಂಟಾಗಿದ್ದ ಅಸಹನೀಯ ವಾತಾವರಣಕ್ಕೆ ರಾಮನಾಥಪುರ, ಕೊಣನೂರು ಹೋಬಳಿಯಾದ್ಯಂತ ಹಾಗೂ ಸುತ್ತ ಮುತ್ತ ಬಹುತೇಕ ಭಾಗಗಳಲ್ಲಿ 3 ದಿವಸಗಳಿಂದ ಸುರಿದ ಮಳೆ ತಂಪನ್ನೆರೆಯಿತು. ಬಹಳ ದಿನಗಳಿಂದ ಬಿಸಿಲಿನ ಝಳ ಹೆಚ್ಚಾಗಿತ್ತು. ಮೊದಲ ಸಲ ಕೆಲವು ಭಾಗದಲ್ಲಿ ಉತ್ತಮ ಮಳೆ ಬಿದ್ದು ಸಾರ್ವಜನಿಕರಿಗೆ ಹಾಗೂ ರೈತರಿಗೆ ಸಲ್ಪ ಮಟ್ಟಿಗೆ ಅನುಕೂಲವಾಯಿತು. ರಾಮನಾಥಪುರ ಹೋಬಳಿಯ ರುದ್ರಪಟ್ಟಣ, ಸೋಂಪುರ ಲಕ್ಕೂರು, ಮಲ್ಲಾಪುರ, ಕೆರಗೋಡು ಭಾಗದ ತಗ್ಗು ಪ್ರದೇಶದಲ್ಲಿ ಬೆಳೆದ ಬೆಳೆಗಳು ಉತ್ತಮ ಮಳೆಯಿಂದ ನಳನಳಿಸುತ್ತಿವೆ.

ಪೂರ್ವದಿಂದ ಮುಂಗಾರು ಮಳೆ ಬೀಳ ತೊಡಗಿದಾಗ ರೈತರು ಹರ್ಷ ಚಿತ್ತರಾಗಿದ್ದರು. ಉತ್ತಮ ಫಸಲು, ಬೆಲೆ ಬರಬಹುದು ಎಂಬ ಲೆಕ್ಕಾಚಾರ ರೈತರದ್ದಾಗಿದೆ. ಆದರೆ ಈ ಸಂತಸ ಬಹುಕಾಲ ಉಳಿಯಬೇಕಾಗಿದೆ. ಮಳೆಗಾಗಿ ಮುಗಿಲು ನೋಡುತ್ತಿದ್ದ ರೈತಾಪಿ ವರ್ಗ ಕೃಷಿ ಕಾರ‍್ಯಗಳನ್ನು ಉತ್ತಮ ರೀತಿಯಲ್ಲಿ ಮಾಡಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ರೈತರು ಮಾಡಿದ ಬೆಳೆಯ ಲೆಕ್ಕಾಚಾರ ನೋಡಿದರೆ ಉತ್ತಮ ಬೆಳೆ ಹಾಗೂ ಬೆಲೆ ಬರುವ ನಿರೀಕ್ಷೆಯಿದೆ.

ಒಮ್ಮೆಮ್ಮೆ ಮಳೆ ಬಾರದೇ ಬೆಳೆ ಒಣಗಿ ಹೋಗುತ್ತವೆ. ಮತ್ತೊಮ್ಮೆ ಮಳೆ ಬಂದು ಹಾನಿಯಾಗುತ್ತವೆ ಎಂಬುದು ರಾಮನಾಥಪುರ ತಂಬಾಕು ಮಂಡಳಿ ವ್ಯಾಪ್ತಿಯ ಈ ಭಾಗದ ಕೃಷಿಕರ ಪರಿಸ್ಥಿತಿ. ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆಗಳ ಪ್ಲಾಟ್‌ ಪಾರಂ 7 ಹಾಗೂ 63ರ ವ್ಯಾಪ್ತಿಯಲ್ಲಿ ಸುಮಾರು 50 ಸಾವಿರ ತಂಬಾಕು ಬೆಳೆಗಾರರಿದ್ದಾರೆ. ತಾಲೂಕಿನಲ್ಲಿ ಮೊದಲನೇ ಹಂತದ ಹೊಗೆಸೊಪ್ಪು ಬೆಳೆಗಳು ಇನ್ನು ಸಲ್ಪ ದಿವಸಗಳಲ್ಲಿ ರಸಗೊಬ್ಬರ ಹಾಕುವ ಹಂತದಲ್ಲಿವೆ. ಕಳೆದ ವರ್ಷ ಮೇ ಮೊದಲ ವಾರದಲ್ಲಿ ಮಳೆ ಬೀಳದ ಹಿನ್ನೆಲೆಯಲ್ಲಿ ತಂಬಾಕು ಅಲೂ ಬೆಳೆ ಬಿತ್ತನೆಗೆ ಭಾರಿ ಹಿನ್ನಡೆಯಾಗಿತ್ತು. ಈ ಬಾರಿ ಅವಧಿಗಿಂತ ಮುನ್ನವೇ ಮಳೆ ಪ್ರಾರಂಭವಾಗಿರುವುದರಿಂದ ಹಾಗೂ ಸೂಕ್ತವಾದ ವಾತವರಣ ಇರುವುದರಿಂದ ಉಳುಮೆ ಮಾಡಲು ಅನುಕೂಲವಾಗಿದೆ. ಅಲ್ಲದೇ, ಮೊದಲನೇ ಹಂತದ ತಂಬಾಕು ಸಸಿ ಮಾಡಿ ಈಗಾಗಲೇ ನಾಟಿ ಮಾಡಲಾಗಿದೆ. 2 ನೇ ಹಂತದ ತಂಬಾಕು ನಾಟಿಯನ್ನು ಮುಂಬರುವ ಜೂನ್‌ ಮೊದಲನೇ ಅಥವಾ ಎರಡನೇ ವಾರದಿಂದಲೇ ತಂಬಾಕು ಸಸಿ ಮಡಿ ಮಾಡಲಾಗುವುದು, ಈಗ ಅಲೂಗೆಡ್ಡೆ ಬೆಳೆ ಬಿತ್ತನೆ ಮಾಡಲು ಅನುಕೂಲವಾಗಲಿದೆ.

ರೈತರು ಯಾವುದೇ ಬೆಳೆ ಮಾಡಲು ಹೆದರುವುದಿಲ್ಲ. ಆದರೆ, ಇತ್ತೀಚೆಗೆ ಕೂಲಿಕಾರರು ಸಿಗದ ಕಾರಣ ಮನೆಯವರಿಂದ ಎಷ್ಟು ಮಾಡಿಸಲು ಸಾಧ್ಯ ಎಂಬ ಅಲೋಚನೆಯಿಂದ ಬೆಳೆ ಮಾಡುತ್ತಿದ್ದೇವೆ. ಕೈತುಂಬ ಹಣ ನೀಡಿದರೂ ಉಳುಮೆಗೆ ಜನ ಸಿಗುತ್ತಿಲ್ಲ. ಕಳೆದ 25-30 ವರ್ಷಗಳಿಂದಲೂ ಸತತವಾಗಿ ತಂಬಾಕು, ಅಲೂಬೆಳೆಯನ್ನು ಬೆಳೆಯುತ್ತಾ ಬಂದಿದ್ದೇವೆ. ಆದರೆ, ಕಳೆದ ವರ್ಷದಿಂದ ಕೂಲಿ ಕಾರ್ಮಿಕರ ತೊಂದರೆಯಿಂದ ಅಲೂ ಬೆಳೆ ಕಡಿಮೆ ಮಾಡಿ, ಮುಸುಕಿನ ಜೋಳ ಹಾಗೂ ಶುಂಠಿ ಬೆಳೆ ಮಾಡುತ್ತಿದ್ದೇವೆ.
- ಮುಗಳೂರು ಕೃಷ್ಣೇಗೌಡ, ರೈತ ಮುಖಂಡ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ