ಆ್ಯಪ್ನಗರ

ನೆರೆ ಸಂತ್ರಸ್ತರ ಪರ ವಿದ್ಯಾರ್ಥಿನಿ ಮನವಿಗೆ ಉತ್ತಮ ಸ್ಪಂದನೆ

ಸುರಿದ ಭಾರಿ ಮಳೆಯಿಂದ ಆಸ್ತಿ-ಪಾಸ್ತಿ ಕಳೆದುಕೊಂಡು ಬೀದಿಗೆ ಬಿದ್ದ ಸಂತ್ರಸ್ತರ ನೆರವಿಗಾಗಿ ನಮ್ಮ ಕಾಲೇಜಿನ ವಿದ್ಯಾರ್ಥಿನಿ ಲಾಲಿತ್ಯ ಟ್ವಿಟರ್‌, ಫೇಸ್‌ಬುಕ್‌ ಮೂಲಕ ಮನವಿ ಮಾಡಿದ ಹಿನ್ನೆಲೆಯಲ್ಲಿ ಉತ್ತಮ ಸ್ಪಂದನೆ ದೊರಕಿದೆ ಮತ್ತು ಕಾಲೇಜಿನಿಂದಲೂ ಸಹಕಾರ ಕೊಡಲಾಗುತ್ತಿದೆ ಎಂದು ಎವಿಕೆ ಕಾಲೇಜು ಪ್ರಾಂಶುಪಾಲೆ ಡಾ. ಆಶಾಲತಾ ತಿಳಿಸಿದರು.

Vijaya Karnataka 15 Aug 2019, 5:00 am
ಹಾಸನ: ಸುರಿದ ಭಾರಿ ಮಳೆಯಿಂದ ಆಸ್ತಿ-ಪಾಸ್ತಿ ಕಳೆದುಕೊಂಡು ಬೀದಿಗೆ ಬಿದ್ದ ಸಂತ್ರಸ್ತರ ನೆರವಿಗಾಗಿ ನಮ್ಮ ಕಾಲೇಜಿನ ವಿದ್ಯಾರ್ಥಿನಿ ಲಾಲಿತ್ಯ ಟ್ವಿಟರ್‌, ಫೇಸ್‌ಬುಕ್‌ ಮೂಲಕ ಮನವಿ ಮಾಡಿದ ಹಿನ್ನೆಲೆಯಲ್ಲಿ ಉತ್ತಮ ಸ್ಪಂದನೆ ದೊರಕಿದೆ ಮತ್ತು ಕಾಲೇಜಿನಿಂದಲೂ ಸಹಕಾರ ಕೊಡಲಾಗುತ್ತಿದೆ ಎಂದು ಎವಿಕೆ ಕಾಲೇಜು ಪ್ರಾಂಶುಪಾಲೆ ಡಾ. ಆಶಾಲತಾ ತಿಳಿಸಿದರು.
Vijaya Karnataka Web good response to the plea of the flood victims
ನೆರೆ ಸಂತ್ರಸ್ತರ ಪರ ವಿದ್ಯಾರ್ಥಿನಿ ಮನವಿಗೆ ಉತ್ತಮ ಸ್ಪಂದನೆ


ಈಗಾಗಲೇ ಲಾಲಿತ್ಯ ಖಾತೆಯಲ್ಲಿ 15 ಸಾವಿರ ರೂ. ಸಂಗ್ರಹವಾಗಿದೆ. ಇದರಲ್ಲಿ ಸಂತ್ರಸ್ತರ ಆರೋಗ್ಯಕ್ಕೆ ಸಂಬಂಧಿಸಿದ ಔಷಧ ಇತರೆ ಪದಾರ್ಥವನ್ನು ಖರೀದಿ ಮಾಡಲಾಗಿದೆ. ಈ ಬಗ್ಗೆ ಟ್ವಿಟರ್‌, ಫೇಸ್‌ಬುಕ್‌ ಗ್ರೂಪ್‌ನಲ್ಲೂ ಶೇರ್‌ ಮಾಡಿರುವುದಾಗಿ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನೆರೆ ಸಂತ್ರಸ್ತರಿಗೆ ಸರಕಾರದಿಂದ ಹಲವಾರು ಯೋಜನೆಗಳಿದ್ದರೂ ಮಾನವೀಯತೆ ದೃಷ್ಟಿಯಲ್ಲಿ ಎವಿಕೆ ಕಾಲೇಜು ವಿದ್ಯಾರ್ಥಿಗಳಿಂದ 5 ಸಾವಿರ, ಉಪನ್ಯಾಸಕರಿಂದ 3 ಸಾವಿರ ಸಂಗ್ರಹ ಮಾಡಲಾಗಿದೆ. ಎವಿಕೆ ಕಾಲೇಜಿನಲ್ಲಿ ಒಟ್ಟು 33 ಜನ ಉಪನ್ಯಾಸಕರಿದ್ದು, ಒಂದು ದಿನದ ಸಂಬಳ ಕೊಡಲು ಕೂಡ ಮುಂದಾಗಿದ್ದಾರೆ ಎಂದು ಹೇಳಿದರು.

ಕಾಲೇಜಿನ ಆಡಳಿತಾಧಿಕಾರಿ ಡಾ. ಯಶೋಧ, ಕಾಲೇಜು ವಿದ್ಯಾರ್ಥಿನಿ ಲಾಲಿತ್ಯ, ಹರ್ಷಿತಾ, ಪ್ರಿಯಾಂಕ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ