ಹಾಸನ: ಕೇರಳ ಮೂಲದ ಹಣ್ಣಿನ ವ್ಯಾಪಾರಿಯನ್ನು ದುಷ್ಕರ್ಮಿಗಳಿಂದ ಪಾರು ಮಾಡುವಲ್ಲಿ ಹಾಸನ ಜಿಲ್ಲೆಯ ಗೊರೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಅನ್ವರ್ ಎಂಬ ವ್ಯಾಪಾರಿಯನ್ನು ಕೇರಳ ರಾಜ್ಯದ ಕಾಸರಗೋಡಿನಿಂದ ಕಾರಿನಲ್ಲಿ ಅಪಹರಣ ಮಾಡಲಾಗಿತ್ತು. ಕಾಸರಗೋಡು ಡಿವೈಎಸ್ಪಿ ಸುನೀಲ್ಕುಮಾರ್ ಅವರ ಮಾಹಿತಿ ಅನ್ವಯ ಗುರುವಾರ ಉಡುಪಿ ಕಡೆಯಿಂದ ಗೊರೂರು ಕಡೆಗೆ ಬಂದ ಕಾರನ್ನು ಪೊಲೀಸರು ಹಾಗೂ ಸಾರ್ವಜನಿಕರು ತಡೆಯಲು ಯತ್ನಿಸಿದ್ದಾರೆ. ಆ ವೇಳೆ ಅನ್ವರ್ ಕಾರಿನಿಂದ ಜಿಗಿದು ಪಾರಾಗಿದ್ದು, ಇಬ್ಬರು ಅಪಹರಣಕಾರರು ಗೊರೂರಿನ ಹೇಮಾವತಿ ಜಲಾಶಯ ಹಿನ್ನೀರು ಪ್ರದೇಶದ ಕೋನಾಪುರ ಬಳಿ ಕಾರು ಬಿಟ್ಟು ಪರಾರಿಯಾಗಿದ್ದಾರೆ ಎಂದು ಗೊರೂರು ಠಾಣೆ ಎಸ್ಐ ಸಾಗರ್ ತಿಳಿಸಿದ್ದಾರೆ.
ಹಣ್ಣಿನ ವ್ಯಾಪಾರಿ ಅನ್ವರ್ ಬಳಿ ಸಾಕಷ್ಟು ಹಣವಿದೆ ಎಂದು ಭಾವಿಸಿ ಆತನನ್ನು ಕಾರಿನ ಸಮೇತ ಅಪಹರಣಕಾರರು ಮಂಗಳವಾರ ಅಪಹರಿಸಿದ್ದರು. ಬಳಿಕ ಎರಡು ಲಕ್ಷ ನೀಡುವಂತೆ ಒತ್ತಾಯಿಸಿದ್ದರಿಂದ ಈ ಸಂಗತಿಯನ್ನು ಮೊಬೈಲ್ ಕರೆ ಮಾಡಿ ತನ್ನ ಪತ್ನಿಗೆ ಅನ್ವರ್ ತಿಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಅನ್ವರ್ ಪತ್ನಿ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದು, ಮೊಬೈಲ್ ಲೊಕೇಷನ್ ಆಧಾರದಲ್ಲಿ ಹಾಸನದ ಎಎಸ್ಪಿ ನಂದಿನಿ ಅವರಿಗೆ ಕಾಸರಗೋಡು ಡಿವೈಎಸ್ಪಿ ಸುನೀಲ್ಕುಮಾರ್ ಮಾಹಿತಿ ನೀಡಿದ್ದರು ಎನ್ನಲಾಗಿದೆ.
ಕೂಡಲೇ ಮುನ್ನೆಚ್ಚರಿಕೆ ವಹಿಸಿ, ಗೊರೂರಿನಲ್ಲಿ ವಾಹನ ತಡೆಗೆ ಬ್ಯಾರಿಕೇಡ್ ಹಾಗೂ ರಸ್ತೆಗೆ ಅಡ್ಡಲಾಗಿ ಲಾರಿ ನಿಲ್ಲಿಸಿದ್ದರೂ, ಆರೋಪಿಗಳು ಶರವೇಗದಲ್ಲಿ ಪರಾರಿಯಾಗಿದ್ದಲ್ಲದೆ, ಪೊಲೀಸರು ತಮ್ಮನ್ನು ಹಿಂಬಾಲಿಸುತ್ತಿರುವುದನ್ನು ಖಚಿತಪಡಿಸಿಕೊಂಡು ಕಾರು ನಿಲ್ಲಿಸಿ ಪರಾರಿಯಾಗಿದ್ದಾರೆ. ಗೊರೂರು ಪೊಲೀಸರ ಕಾರ್ಯಾಚರಣೆ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.
ಹಣ್ಣಿನ ವ್ಯಾಪಾರಿ ಅನ್ವರ್ ಬಳಿ ಸಾಕಷ್ಟು ಹಣವಿದೆ ಎಂದು ಭಾವಿಸಿ ಆತನನ್ನು ಕಾರಿನ ಸಮೇತ ಅಪಹರಣಕಾರರು ಮಂಗಳವಾರ ಅಪಹರಿಸಿದ್ದರು. ಬಳಿಕ ಎರಡು ಲಕ್ಷ ನೀಡುವಂತೆ ಒತ್ತಾಯಿಸಿದ್ದರಿಂದ ಈ ಸಂಗತಿಯನ್ನು ಮೊಬೈಲ್ ಕರೆ ಮಾಡಿ ತನ್ನ ಪತ್ನಿಗೆ ಅನ್ವರ್ ತಿಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಅನ್ವರ್ ಪತ್ನಿ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದು, ಮೊಬೈಲ್ ಲೊಕೇಷನ್ ಆಧಾರದಲ್ಲಿ ಹಾಸನದ ಎಎಸ್ಪಿ ನಂದಿನಿ ಅವರಿಗೆ ಕಾಸರಗೋಡು ಡಿವೈಎಸ್ಪಿ ಸುನೀಲ್ಕುಮಾರ್ ಮಾಹಿತಿ ನೀಡಿದ್ದರು ಎನ್ನಲಾಗಿದೆ.
ಕೂಡಲೇ ಮುನ್ನೆಚ್ಚರಿಕೆ ವಹಿಸಿ, ಗೊರೂರಿನಲ್ಲಿ ವಾಹನ ತಡೆಗೆ ಬ್ಯಾರಿಕೇಡ್ ಹಾಗೂ ರಸ್ತೆಗೆ ಅಡ್ಡಲಾಗಿ ಲಾರಿ ನಿಲ್ಲಿಸಿದ್ದರೂ, ಆರೋಪಿಗಳು ಶರವೇಗದಲ್ಲಿ ಪರಾರಿಯಾಗಿದ್ದಲ್ಲದೆ, ಪೊಲೀಸರು ತಮ್ಮನ್ನು ಹಿಂಬಾಲಿಸುತ್ತಿರುವುದನ್ನು ಖಚಿತಪಡಿಸಿಕೊಂಡು ಕಾರು ನಿಲ್ಲಿಸಿ ಪರಾರಿಯಾಗಿದ್ದಾರೆ. ಗೊರೂರು ಪೊಲೀಸರ ಕಾರ್ಯಾಚರಣೆ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.