ಅಖಾಡ ಸಿದ್ಧಗೊಳಿಸುತ್ತಿರುವ ಪ್ರಜ್ವಲ್, ಕಾರು ದುರ್ಬಳಕೆ ವಿವಾದ
ಸರಕಾರಿ ಕಾರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ವಿವಾದ ಸ್ವರೂಪ ಪಡೆದುಕೊಳ್ಳುತ್ತಿದೆ.
Vijaya Karnataka 30 Jan 2019, 9:15 am
ಹೈಲೈಟ್ಸ್:
- ಸಚಿವ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣರಿಂದ ಸರಕಾರಿ ಕಾರು ದುರ್ಬಳಕೆ ಆರೋಪ
- ವಿವಾದ ಸ್ವರೂಪ ಪಡೆದುಕೊಳ್ಳುತ್ತಿರುವ ಪ್ರಜ್ವಲ್ ರೇವಣ್ಣ ವಿರುದ್ದದ ಆರೋಪ
- ಪ್ರಜ್ವಲ್ ಬಳಸುತ್ತಿದ್ದ ಸ್ವಂತ ಕಾರು ದಾರಿ ಮಧ್ಯೆ ಕೆಟ್ಟು ನಿಂತಿದ್ದಕ್ಕೆ ಬಳಸಲಾಗಿತ್ತು
ಹಾಸನ: ಸರಕಾರಿ ಕಾರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ವಿವಾದ ಸ್ವರೂಪ ಪಡೆದುಕೊಳ್ಳುತ್ತಿದೆ. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪ್ರಜ್ವಲ್ ರೇವಣ್ಣ ಮಂಗಳವಾರ ನಗರದ ಕುವೆಂಪುನಗರ ಬಡಾವಣೆಯಲ್ಲಿ ನಗರಸಭೆಯ ಐದರಿಂದ ಏಳನೇ ವಾರ್ಡಿಗೆ ಸಂಬಂಧಿಸಿದಂತೆ ನಗರಸಭೆ ಸದಸ್ಯರು, ಪಕ್ಷದ ಕಾರ್ಯಕರ್ತರು, ಮುಖಂಡರ ಜತೆ ಸಭೆಯಲ್ಲಿ ಭಾಗವಹಿಸಿದ್ದರು.
ಈ ಸಭೆಗೆ ಆಗಮಿಸಲು ಸರಕಾರಿ ಇನ್ನೋವ ಕೆ.ಎ.01.ಜಿ.ಎ.8009 ನಂಬರಿನ ಕಾರು ಬಳಸಿದ್ದಾರೆ ಎಂಬುದು ಆರೋಪ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪ್ರಜ್ವಲ್ ಸಂಪರ್ಕಕ್ಕೆ ಪ್ರಯತ್ನಿಸಲಾಯಿತಾದರೂ, ಸಂಪರ್ಕಕ್ಕೆ ಸಿಗಲಿಲ್ಲ. ಆದರೆ, ಪ್ರಜ್ವಲ್ ಬಳಸುತ್ತಿದ್ದ ಸ್ವಂತ ಕಾರು ಹೊಳೆನರಸೀಪುರದಿಂದ ಆಗಮಿಸುತ್ತಿದ್ದ ವೇಳೆ ದಾರಿಮಧ್ಯೆ ಕೆಟ್ಟುನಿಂತಿದ್ದರಿಂದ ಆ ಮಾರ್ಗದಲ್ಲಿ ಬಂದ ಎಂಜಿನಿಯರ್ ಕಾರಿನಲ್ಲಿ ಕಾರ್ಯಕರ್ತರೇ ಡ್ರಾಪ್ ನೀಡುವಂತೆ ಒತ್ತಾಯವಾಗಿ ಕಳುಹಿಸಿದ್ದರು ಎಂದು ಜೆಡಿಎಸ್ ವಕ್ತಾರ ರಘು ಸ್ಪಷ್ಟನೆ ನೀಡಿದ್ದಾರೆ.
ಈ ಸಭೆಗೆ ಆಗಮಿಸಲು ಸರಕಾರಿ ಇನ್ನೋವ ಕೆ.ಎ.01.ಜಿ.ಎ.8009 ನಂಬರಿನ ಕಾರು ಬಳಸಿದ್ದಾರೆ ಎಂಬುದು ಆರೋಪ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪ್ರಜ್ವಲ್ ಸಂಪರ್ಕಕ್ಕೆ ಪ್ರಯತ್ನಿಸಲಾಯಿತಾದರೂ, ಸಂಪರ್ಕಕ್ಕೆ ಸಿಗಲಿಲ್ಲ. ಆದರೆ, ಪ್ರಜ್ವಲ್ ಬಳಸುತ್ತಿದ್ದ ಸ್ವಂತ ಕಾರು ಹೊಳೆನರಸೀಪುರದಿಂದ ಆಗಮಿಸುತ್ತಿದ್ದ ವೇಳೆ ದಾರಿಮಧ್ಯೆ ಕೆಟ್ಟುನಿಂತಿದ್ದರಿಂದ ಆ ಮಾರ್ಗದಲ್ಲಿ ಬಂದ ಎಂಜಿನಿಯರ್ ಕಾರಿನಲ್ಲಿ ಕಾರ್ಯಕರ್ತರೇ ಡ್ರಾಪ್ ನೀಡುವಂತೆ ಒತ್ತಾಯವಾಗಿ ಕಳುಹಿಸಿದ್ದರು ಎಂದು ಜೆಡಿಎಸ್ ವಕ್ತಾರ ರಘು ಸ್ಪಷ್ಟನೆ ನೀಡಿದ್ದಾರೆ.