ಹೊಳೆನರಸೀಪುರ: ದೇವೇಗೌಡರ ಸ್ವಗ್ರಾಮ ಹರದನಹಳ್ಳಿಯ ಈಶ್ವರ ದೇವಾಲಯ ಮತ್ತು ಅರ್ಚಕ ಪ್ರಕಾಶ್ಭಟ್ ಅವರ ನಿವಾಸಕ್ಕೆ ಐಟಿಯ ಅಧಿಕಾರಿಗಳು ಭೇಟಿ ನೀಡಿ ತೀವ್ರ ಶೋಧ ನಡೆಸಿದರು.
ಚುನಾವಣಾ ವೆಚ್ಚಕ್ಕಾಗಿ ಅಕ್ರಮವಾಗಿ ಹಣ ಇಟ್ಟಿದ್ದಾರೆ ಎಂಬ ದೂರಿನ ಮೇರೆಗೆ 5 ಅಧಿಕಾರಿಗಳ ತಂಡ ಶುಕ್ರವಾರ ಮಧ್ಯಾಹ್ನ 12ರ ಸುಮಾರಿಗೆ ಪರಿಶೀಲಿಸಿದರು.
ಮನೆಯಲ್ಲಿದ್ದ ಕೆಲವು ದಾಖಲೆಗಳನ್ನು ಪರಿಶೀಲಿಸಿದರು. ನಂತರ ಗುಡಿಯಲ್ಲಿ ಶೋಧ ನಡೆಸಿದರು. ಗರ್ಭಗುಡಿ ಪ್ರವೇಶಿಸದ ಅಧಿಕಾರಿಗಳು, ಅರ್ಚಕರ ಸಹಾಯದೊಂದಿಗೆ ಶೋಧ ಕಾರ್ಯ ಪೂರ್ಣಗೊಳಿಸಿದರು. ಮೊದಲು ಚುನಾವಣಾ ಆಯೋಗದವರು ಎಂದು ಹೇಳಿಕೊಂಡಿದ್ದರು. ನಂತರ ಆದಾಯ ತೆರಿಗೆ ಇಲಾಖೆ ಎಂಬುದು ಖಾತ್ರಿಯಾಯಿತು ಎಂದು ಅರ್ಚಕರು ತಿಳಿಸಿದ್ದಾರೆ.
ಕಳೆದ ವಾರ ಪಟ್ಟಣದ ಅಂಬೇಡ್ಕರ್ ನಗರದ ಬಳಿ ಬೈಕ್ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 25 ಲಕ್ಷ ರೂ. ಹಿಡಿದಿದ್ದರು. ಪ್ರತಿಷ್ಟಿತ ದೇವಾಲಯದ ಮೇಕೆ ದಾಳಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಚುನಾವಣಾ ವೆಚ್ಚಕ್ಕಾಗಿ ಅಕ್ರಮವಾಗಿ ಹಣ ಇಟ್ಟಿದ್ದಾರೆ ಎಂಬ ದೂರಿನ ಮೇರೆಗೆ 5 ಅಧಿಕಾರಿಗಳ ತಂಡ ಶುಕ್ರವಾರ ಮಧ್ಯಾಹ್ನ 12ರ ಸುಮಾರಿಗೆ ಪರಿಶೀಲಿಸಿದರು.
ಮನೆಯಲ್ಲಿದ್ದ ಕೆಲವು ದಾಖಲೆಗಳನ್ನು ಪರಿಶೀಲಿಸಿದರು. ನಂತರ ಗುಡಿಯಲ್ಲಿ ಶೋಧ ನಡೆಸಿದರು. ಗರ್ಭಗುಡಿ ಪ್ರವೇಶಿಸದ ಅಧಿಕಾರಿಗಳು, ಅರ್ಚಕರ ಸಹಾಯದೊಂದಿಗೆ ಶೋಧ ಕಾರ್ಯ ಪೂರ್ಣಗೊಳಿಸಿದರು. ಮೊದಲು ಚುನಾವಣಾ ಆಯೋಗದವರು ಎಂದು ಹೇಳಿಕೊಂಡಿದ್ದರು. ನಂತರ ಆದಾಯ ತೆರಿಗೆ ಇಲಾಖೆ ಎಂಬುದು ಖಾತ್ರಿಯಾಯಿತು ಎಂದು ಅರ್ಚಕರು ತಿಳಿಸಿದ್ದಾರೆ.
ಕಳೆದ ವಾರ ಪಟ್ಟಣದ ಅಂಬೇಡ್ಕರ್ ನಗರದ ಬಳಿ ಬೈಕ್ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 25 ಲಕ್ಷ ರೂ. ಹಿಡಿದಿದ್ದರು. ಪ್ರತಿಷ್ಟಿತ ದೇವಾಲಯದ ಮೇಕೆ ದಾಳಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.