ಆ್ಯಪ್ನಗರ

ಗೌಡರ ಮನೆ ದೇವರ ದೇಗುಲ, ಅರ್ಚಕರ ಮನೆ ಮೇಲೆ ಐಟಿ ದಾಳಿ

ದೇವೇಗೌಡರ ಸ್ವಗ್ರಾಮ ಹರದನಹಳ್ಳಿಯ ಈಶ್ವರ ದೇವಾಲಯ ಮತ್ತು ಅರ್ಚಕ ಪ್ರಕಾಶ್‌ಭಟ್‌ ಅವರ ನಿವಾಸಕ್ಕೆ ಐಟಿಯ ಅಧಿಕಾರಿಗಳು ಭೇಟಿ ನೀಡಿ ತೀವ್ರ ಶೋಧ ನಡೆಸಿದರು.

Vijaya Karnataka 13 Apr 2019, 5:00 am
ಹೊಳೆನರಸೀಪುರ: ದೇವೇಗೌಡರ ಸ್ವಗ್ರಾಮ ಹರದನಹಳ್ಳಿಯ ಈಶ್ವರ ದೇವಾಲಯ ಮತ್ತು ಅರ್ಚಕ ಪ್ರಕಾಶ್‌ಭಟ್‌ ಅವರ ನಿವಾಸಕ್ಕೆ ಐಟಿಯ ಅಧಿಕಾರಿಗಳು ಭೇಟಿ ನೀಡಿ ತೀವ್ರ ಶೋಧ ನಡೆಸಿದರು.
Vijaya Karnataka Web gowdas house of god an attack on the priests house
ಗೌಡರ ಮನೆ ದೇವರ ದೇಗುಲ, ಅರ್ಚಕರ ಮನೆ ಮೇಲೆ ಐಟಿ ದಾಳಿ


ಚುನಾವಣಾ ವೆಚ್ಚಕ್ಕಾಗಿ ಅಕ್ರಮವಾಗಿ ಹಣ ಇಟ್ಟಿದ್ದಾರೆ ಎಂಬ ದೂರಿನ ಮೇರೆಗೆ 5 ಅಧಿಕಾರಿಗಳ ತಂಡ ಶುಕ್ರವಾರ ಮಧ್ಯಾಹ್ನ 12ರ ಸುಮಾರಿಗೆ ಪರಿಶೀಲಿಸಿದರು.

ಮನೆಯಲ್ಲಿದ್ದ ಕೆಲವು ದಾಖಲೆಗಳನ್ನು ಪರಿಶೀಲಿಸಿದರು. ನಂತರ ಗುಡಿಯಲ್ಲಿ ಶೋಧ ನಡೆಸಿದರು. ಗರ್ಭಗುಡಿ ಪ್ರವೇಶಿಸದ ಅಧಿಕಾರಿಗಳು, ಅರ್ಚಕರ ಸಹಾಯದೊಂದಿಗೆ ಶೋಧ ಕಾರ್ಯ ಪೂರ್ಣಗೊಳಿಸಿದರು. ಮೊದಲು ಚುನಾವಣಾ ಆಯೋಗದವರು ಎಂದು ಹೇಳಿಕೊಂಡಿದ್ದರು. ನಂತರ ಆದಾಯ ತೆರಿಗೆ ಇಲಾಖೆ ಎಂಬುದು ಖಾತ್ರಿಯಾಯಿತು ಎಂದು ಅರ್ಚಕರು ತಿಳಿಸಿದ್ದಾರೆ.

ಕಳೆದ ವಾರ ಪಟ್ಟಣದ ಅಂಬೇಡ್ಕರ್‌ ನಗರದ ಬಳಿ ಬೈಕ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 25 ಲಕ್ಷ ರೂ. ಹಿಡಿದಿದ್ದರು. ಪ್ರತಿಷ್ಟಿತ ದೇವಾಲಯದ ಮೇಕೆ ದಾಳಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ