ಆ್ಯಪ್ನಗರ

ಪಶುಭಾಗ್ಯದಲ್ಲಿ ಅವ್ಯಹಾರ: ಎ.ಟಿ.ಆರ್‌.ಆರೋಪ

ಪಶು ಭಾಗ್ಯ ಯೋಜನೆಯ 4 ಕೋಟಿ ರೂ. ಅನುದಾನವನ್ನು ಮಾಜಿ ಸಚಿವ ಎ.ಮಂಜು ತಮ್ಮ ಬೆಂಬಲಿಗರಿಗೆ ಕೊಡಿಸಿ ದುರುಪಯೋಗಕ್ಕೆ ಕಾರಣವಾಗಿದ್ದಾರೆ ಎಂದು ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಆರೋಪಿಸಿದರು.

Vijaya Karnataka 5 Sep 2018, 5:00 am
ಹಾಸನ: ಪಶು ಭಾಗ್ಯ ಯೋಜನೆಯ 4 ಕೋಟಿ ರೂ. ಅನುದಾನವನ್ನು ಮಾಜಿ ಸಚಿವ ಎ.ಮಂಜು ತಮ್ಮ ಬೆಂಬಲಿಗರಿಗೆ ಕೊಡಿಸಿ ದುರುಪಯೋಗಕ್ಕೆ ಕಾರಣವಾಗಿದ್ದಾರೆ ಎಂದು ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಆರೋಪಿಸಿದರು.
Vijaya Karnataka Web grant abuse atr accused
ಪಶುಭಾಗ್ಯದಲ್ಲಿ ಅವ್ಯಹಾರ: ಎ.ಟಿ.ಆರ್‌.ಆರೋಪ


ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಮಂಗಳವಾರ ನಡೆದ 2018-19ನೇ ಸಾಲಿನ ಮೊದಲನೇ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಎ. ಮಂಜು ತಮ್ಮ ಕಡೆಯವರಿಗೆ ಮಾತ್ರ ಯೋಜನೆಯಡಿ ಸಹಾಯಧನ ಕೊಡಿಸಿದ್ದಾರೆ. ಹಸು ಖರೀದಿ ಮಾಡಿ ನೀಡಬೇಕಿದ್ದ ಸಹಕಾರಿ ಸಂಘಗಳು ಕೇವಲ ಸಹಾಯಧನ ಹಣ ನೀಡಿ ಕೈ ತೊಳೆದುಕೊಂಡಿವೆ. ಒಟ್ಟು ನಾಲ್ಕು ಕೋಟಿ ರೂ. ಅವ್ಯವಹಾರ ನಡೆದಿದ್ದು ಎಲ್ಲದಕ್ಕೂ ಮಾಜಿ ಸಚಿವ ಎ.ಮಂಜು ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರಕಾರದ ಸಹಾಯಧನ 60 ಸಾವಿರ ರೂ. ಹಾಗೂ ಫಲಾನುಭವಿ ಹೆಸರಿನಲ್ಲಿ 60 ಸಾವಿರ ರೂ. ಸಾಲದ ರೂಪದಲ್ಲಿ ಜಾರಿಯಾಗುವ ಯೋಜನೆ ಅದಾಗಿದೆ. ಅರ್ಹ ಫಲಾನುಭವಿಗಳಿಗೆ ಸಾಲವನ್ನು ನೀಡದೆ, ಹಸುವನ್ನೂ ಖರೀದಿಸದೆ ಮೋಸ ಮಾಡಿದ್ದಾರೆ ಎಂದರು. ಇದಕ್ಕೆ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಎಚ್‌.ಕೆ. ಕುಮಾರಸ್ವಾಮಿ, ಸಿ.ಎನ್‌. ಬಾಲಕೃಷ್ಣ ಧ್ವನಿಗೂಡಿಸಿದರು.

ಜಿಲ್ಲೆಯಲ್ಲಿರುವ ಬಹುತೇಕ ವೈದ್ಯರು ದುಡ್ಡು ಹುಟ್ಟುವ ಜಾಗವೇ ಬೇಕೆಂದು ಬಯಸುತ್ತಿದ್ದಾರೆ. ಕೆಲಸ ಮಾಡದೆ ಮನೆಯಲ್ಲೆ ಇರಬೇಕೆಂದು ಬಯಸುತ್ತಿದ್ದು, ನೀವು ಸಿಎಂ ಗಮನಕ್ಕೆ ಈ ವಿಚಾರ ತಂದು ಏನಾದರೂ ಪರಿಹಾರ ಕಲ್ಪಿಸಬೇಕು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಸಂಸದ ಎಚ್‌.ಡಿ.ದೇವೇಗೌಡರಲ್ಲಿ ಮನವಿ ಮಾಡಿದರು. ದೇವೇಗೌಡರು ಸಿಎಂಗೆ 'ನೋಡಪ್ಪ ಇದನ್ನ ಸ್ವಲ್ಪ ಸರಿ ಮಾಡು ಅಂತ ಹೇಳಿದರೆ ಅನುಕೂಲ ಆಗುತ್ತದೆ. ಹಾಗಾಗಿ ಸಭೆಯಲ್ಲಿ ಈ ವಿಚಾರ ಹೇಳುತ್ತಿದ್ದೇನೆ ಮುಗುಳ್ನಕ್ಕರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ