ಆ್ಯಪ್ನಗರ

ಗರ್ವದ ಮಾತಿನಿಂದ ಗರ್ವಭಂಗ: ಪ್ರಧಾನಿಗೆ ಗೌಡರ ಎಚ್ಚರಿಕೆ

ಕಳೆದ ಐದು ವರ್ಷದ ಅಧಿಕಾರವಧಿಯಲ್ಲಿ ಎಲ್ಲ ಸಾಧನೆಯನ್ನು ನಾನೇ ಮಾಡಿದ್ದೇನೆ ಎಂಬ ಪ್ರಧಾನಿ ನರೇಂದ್ರ ಮೋದಿಯ ಮಾತು ಅವರ ಆ ಸ್ಥಾನಕ್ಕೆ ತಕ್ಕದ್ದಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದರು.

Vijaya Karnataka 10 Feb 2019, 5:00 am
ಹಾಸನ: ಕಳೆದ ಐದು ವರ್ಷದ ಅಧಿಕಾರವಧಿಯಲ್ಲಿ ಎಲ್ಲ ಸಾಧನೆಯನ್ನು ನಾನೇ ಮಾಡಿದ್ದೇನೆ ಎಂಬ ಪ್ರಧಾನಿ ನರೇಂದ್ರ ಮೋದಿಯ ಮಾತು ಅವರ ಆ ಸ್ಥಾನಕ್ಕೆ ತಕ್ಕದ್ದಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದರು.
Vijaya Karnataka Web grieving of pride speech gowdas warning to pm
ಗರ್ವದ ಮಾತಿನಿಂದ ಗರ್ವಭಂಗ: ಪ್ರಧಾನಿಗೆ ಗೌಡರ ಎಚ್ಚರಿಕೆ


ಹೊಳೆನರಸೀಪುರದ ಸರಕಾರಿ ಮಹಿಳಾ ಕಾಲೇಜು, ಗೃಹವಿಜ್ಞಾನ ಕಾಲೇಜು ದಶಮಾನೋತ್ಸವ ಸಮಾರಂಭದಲ್ಲಿ ಶನಿವಾರ ಮಾತನಾಡಿ, ''ಎಲ್ಲ ಕೆಲಸವನ್ನು ಮೋದಿಯವರೇ ಮಾಡಿದ್ದೇ ಆದಲ್ಲಿ ಸ್ವಾತಂತ್ರ್ಯ ನಂತರದಿಂದ ದೇಶವನ್ನಾಳಿದ ಪ್ರಧಾನಿಗಳು ಏನೂ ಮಾಡಿಲ್ಲವೇ? ಪ್ರಧಾನಿಯಾದವರು ತಮ್ಮ ಚೌಕಟ್ಟು ಮೀರಿ ಮಾತನಾಡಬಾರದು ಎಂಬ ಎಚ್ಚರಿಕೆ ಇಲ್ಲವಾದಲ್ಲಿ ಇಂತಹ ಗರ್ವದ ಮಾತಿನಿಂದ ಗರ್ವಭಂಗವಾಗುತ್ತದೆ,''ಎಂದು ಎಚ್ಚರಿಸಿದರು.

''ಅನೇಕ ಪುಣ್ಯಾತ್ಮರು ಬಂದು ಹೋಗಿದ್ದಾರೆ ಅವರ ಸೇವೆ ಸ್ಮರಿಸಬೇಕು, ಬ್ರಿಟಿಷರಿಂದ ಭಾರತವನ್ನು ಉಳಿಸಿಕೊಳ್ಳಲಿಲ್ಲವೇ,'' ಎಂದು ಪ್ರಶ್ನಿಸಿದರು.

''ಮಣ್ಣಿನಮಗ ಇವರೊಬರೇ ಎಂದು ನನ್ನನ್ನು ಟೀಕಿಸುವವರು ಇದ್ದಾರೆ. ಆದರೆ ಅದು ಜನ ಕರೆದದ್ದು, ಭಗವಂತ ನಿರ್ಧಾರ ಮಾಡಿದ್ದನ್ನು ತಪ್ಪಿಸಲು ಸಾಧ್ಯವಿಲ್ಲ ಎನ್ನುವ ಮೂಲಕ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ತಮ್ಮ ಭಾಷಣದಲ್ಲಿ, ''ದೇವೇಗೌಡರು ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು ಎಂಬುದು ಜನರ ಅಭಿಲಾಷೆ,''ಎಂಬ ಮಾತಿಗೆ ಜಾಣ್ಮೆಯ ಉತ್ತರ ನೀಡಿದರು.

------------

ಕಾಲೇಜುಗಳಲ್ಲಿ ಯೋಗ, ಧ್ಯಾನ
ಕಡ್ಡಾಯಕ್ಕೆ ಚಿಂತನೆ: ಜಿಟಿಡಿ


ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ''ಹಿಂದೆಲ್ಲ 150ರಿಂದ 300 ರೂ.ವೇತನ ಪಡೆದು, ಸೈಕಲ್‌ನಲ್ಲಿ ಮೂರ್ನಾಲ್ಕು ಕಿ.ಮೀ.ಹೋಗಿ ಉಪನ್ಯಾಸಕರು ಪಾಠಮಾಡಿ ಬರುತ್ತಿದ್ದರು. ಇಂದಿನ ಉಪನ್ಯಾಸಕರುಗಳು ದಿನಕ್ಕೆ ಎರಡು ಗಂಟೆ ಪಾಠಮಾಡಿ ಯುಜಿಸಿ ಅನ್ವಯ ಲಕ್ಷ, ಲಕ್ಷ ವೇತನ ಪಡೆಯುತ್ತಾರೆ,''ಎಂದು ಅಸಮಾಧಾನ ವ್ಯಕ್ತಪಡಿಸಿದಲ್ಲದೆ, ''ರಾಜಕೀಯ ಮಾಡುವುದನ್ನು ಮೊದಲು ಬಿಡಿ, ಆತ್ಮಾವಲೋಕನ ಮಾಡಿಕೊಳ್ಳಿ,''ಎಂದು ಸಲಹೆ ನೀಡಿದರು.

''ಪ್ರತಿ ವಿವಿಗಳು ಐದು ಹಳ್ಳಿಯನ್ನು ದತ್ತು ಪಡೆದುಕೊಳ್ಳುವ ಮೂಲಕ ಅಕ್ಷರ, ಸ್ವಚ್ಛತೆ, ಉದ್ಯೋಗ ಸೃಷ್ಟಿ ಪಾಠ ಮಾಡಬೇಕು,''ಎಂದು ಸಲಹೆ ನೀಡಿದರು.

''ಇನ್ನು ಮುಂದಿನ ದಿನಗಳಲ್ಲಿ ಎಲ್ಲ ಕಾಲೇಜುಗಳಲ್ಲಿ ಯೋಗ, ಧ್ಯಾನವನ್ನು ಕಡ್ಡಾಯಗೊಳಿಸುವ ಚಿಂತನೆ ಇದೆ,''ಎಂದು ಸಚಿವರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ