ಆ್ಯಪ್ನಗರ

ಗುರುಪೂರ್ಣಿಮೆ: ಶ್ರೀ ಜೇನುಕಲ್‌ ದೇಗುಲಕ್ಕೆ ಭಕ್ತಸಾಗರ

ತಾಲೂಕಿನ ಸುಕ್ಷೇತ್ರ ಯಾದಾಪುರದ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ಗುರುಪೂರ್ಣಿಮೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ನೂರಾರು ಭಕ್ತರ ಸಮ್ಮುಖದಲ್ಲಿ ನಡೆದವು.

Vijaya Karnataka 17 Jul 2019, 5:00 am
ಅರಸೀಕೆರೆ : ತಾಲೂಕಿನ ಸುಕ್ಷೇತ್ರ ಯಾದಾಪುರದ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ಗುರುಪೂರ್ಣಿಮೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ನೂರಾರು ಭಕ್ತರ ಸಮ್ಮುಖದಲ್ಲಿ ನಡೆದವು.
Vijaya Karnataka Web HSN-HSN16ASK-P1


ನಗರದಿಂದ 8 ಕಿ.ಮೀ ದೂರದಲ್ಲಿರುವ ಯಾದಾಪುರದಲ್ಲಿ ನೆಲೆಸಿರುವ ಜೇನುಕಲ್ಲು ಸಿದ್ದೇಶ್ವರರರ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಅಭಿಷೇಕ, ಬಿಲ್ವಾರ್ಚನೆ, ನೂರೊಂದೆಡೆ ಸೇವೆ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಬೆಟ್ಟದ ಮೇಲೆ ಪಾದುಕೆಯ ಮೂಲಕ ದರ್ಶನ ನೀಡಿರುವ ಇಲ್ಲಿನ ಶ್ರೀಯವರನ್ನು ನೋಡಲು ರಾಜ್ಯದ ನಾನಾ ಮೂಲಗಳಿಂದ ಭಕ್ತರು ತಂಡೋಪ ತಂಡವಾಗಿ ಬಂದು ತಮ್ಮ ಹರಕೆ ತೀರಿಸಿದರು. ಅಲ್ಲದೇ ಬೆಟ್ಟದ ತಪ್ಪಲಿನಲ್ಲಿರುವ ಬಸವೇಶ್ವರ ಸ್ವಾಮಿಯ ದರ್ಶನವನ್ನು ಸರದಿ ಸಾಲಿನಲ್ಲಿ ನಿಂತು ಪಡೆದರು.

ಗಂಗೆ ಪೂಜೆ, ನೂರೊಂದೆಡೆ ಸೇವೆ : ಜನರ ಆರಾಧ್ಯ ದೈವವಾಗಿರುವ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಗೆ ರಾಜ್ಯದ ನಾನಾ ಮೂಲಗಳಿಂದ ಬರುವ ಭಕ್ತರು ಬೆಟ್ಟದ ಮೇಲೆ ಗಂಗೆ ಪೂಜೆ, ನೂರೊಂದೆಡೆ ಸೇವೆ, ಕರ್ಪೂರ ಸೇವೆಯನ್ನು ಅರ್ಪಿಸುವ ಮೂಲಕ ಹರಕೆ ಸಲ್ಲಿಸಿದ್ದು ಸಾಮಾನ್ಯವಾಗಿತ್ತು.

ವ್ಯವಸ್ಥೆ : ಭಕ್ತರಿಗಾಗಿ ದೇವಸ್ಥಾನದ ಮಂಡಳಿಯಿಂದ ಅನ್ನ ದಾಸೋಹವನ್ನು ಹಮ್ಮಿಕೊಳ್ಳಲಾಗಿತ್ತು. ಅರಸೀಕೆರೆ ನಗರದಿಂದ ದೇವಸ್ಥಾನಕ್ಕೆ ಕೆಎಸ್‌ಆರ್‌ಟಿಸಿ ವತಿಯಿಂದ ವಿಶೇಷ ಬಸ್‌ಗಳ ಸೌಲಭ್ಯವನ್ನು ಒದಗಿಸಲಾಗಿತ್ತು, ಅಲ್ಲದೇ ಪೊಲೀಸ್‌ ಇಲಾಖೆಯಿಂದ ಬಿಗಿ ಬಂದೋಬಸ್ತ್‌ ವ್ಯವಸ್ಥೆಯನ್ನು ಮಾಡಲಾಗಿತ್ತು.

ಹಲವು ದೇವಾಲಯಗಳಲ್ಲಿ ಪೂಜೆ : ಗುರುಪೂರ್ಣಿಮೆಯ ಪ್ರಯುಕ್ತ ನಗರದ ಸಾಯಿನಾಥ ದೇವಸ್ಥಾನದಲ್ಲಿ ಸಾಯಿಬಾಬರಿಗೆ ವಿಶೇಷ ಪೂಜೆ, ಶ್ಯಾನುಭೋಗರ ಬೀದಿಯಲ್ಲಿರುವ ರಾಘವೇಂದ್ರ ಮಠದಲ್ಲಿ, ಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ಸತೀಶ್‌ ಶರ್ಮಾಜೀಯವರಿಂದ ಹೋಮ ಹವನ, ಪ್ರಾಚೀನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ದತ್ತಾತ್ರೇಯ ಸ್ವಾಮಿಗೆ ವಿಶೇಷ ಪೂಜಾಕಾರ್ಯಗಳನ್ನು ನಡೆಸಲಾಯಿತು. ಅಲ್ಲದೇ ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ತೀರ್ಥ ಪ್ರಸಾದವನ್ನು ಏರ್ಪಡಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ