ಆ್ಯಪ್ನಗರ

ರೈತರಿಗೆ ಬಿಜೆಪಿ ಕೊಟ್ಟ ಕೊಡುಗೆಗಳೇನು: ರೇವಣ್ಣ ಪ್ರಶ್ನೆ

ಕೇಂದ್ರದ ಬಿಜೆಪಿ ರೈತರಿಗಾಗಿ ಕೊಟ್ಟ ಕೊಡುಗೆಗಳೇನು,'' ಎಂದು ಪ್ರಶ್ನಿಸಿದ ಅವರು, ''ರಾಜ್ಯದ 159 ತಾಲೂಕುಗಳಲ್ಲಿ ಬರಗಾಲ ಬಂದಿದ್ದರೂ ಪರಿಹಾರವಾಗಿ ಹಣ ನೀಡಿಲ್ಲ. ಯುಪಿಎ ಸರಕಾರದ ಯೋಜನೆಗಳನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ,'' ಎಂದು ಟೀಕಿಸಿದರು.

Vijaya Karnataka 30 Mar 2019, 7:28 am
ಅರಸೀಕೆರೆ: ರಾಜ್ಯದ ಎಲ್ಲಾ ವರ್ಗಗಳನ್ನು ಒಗ್ಗಟ್ಟಾಗಿ ಕೊಂಡೊಯ್ಯುವ ಪಕ್ಷ ವೆಂದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಾತ್ರ. ಬಿಜೆಪಿ ಕೋಮುಗಲಭೆಗಳ ಮೂಲಕ ಸಂಘರ್ಷವನ್ನುಂಟು ಮಾಡುವ ಪಕ್ಷ ವಾಗಿದ್ದು ಚುನಾವಣೆ ವೇಳೆ ನಾಟಕವಾಡುತ್ತಿದೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.
Vijaya Karnataka Web revanna


ನಗರದ ಹಳ್ಳಿಮನೆಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ''ಕೇಂದ್ರದ ಬಿಜೆಪಿ ರೈತರಿಗಾಗಿ ಕೊಟ್ಟ ಕೊಡುಗೆಗಳೇನು,'' ಎಂದು ಪ್ರಶ್ನಿಸಿದ ಅವರು, ''ರಾಜ್ಯದ 159 ತಾಲೂಕುಗಳಲ್ಲಿ ಬರಗಾಲ ಬಂದಿದ್ದರೂ ಪರಿಹಾರವಾಗಿ ಹಣ ನೀಡಿಲ್ಲ. ಯುಪಿಎ ಸರಕಾರದ ಯೋಜನೆಗಳನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ,'' ಎಂದು ಟೀಕಿಸಿದರು.

''ರಾಷ್ಟ್ರಮಟ್ಟದಲ್ಲಿ ನಡೆದ ಹೊಂದಾಣಿಕೆ ಪರಿಣಾಮ ಹಾಸನದಲ್ಲಿ ಮೈತ್ರಿ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅವರನ್ನು ಅಭ್ಯರ್ಥಿಯನ್ನಾಗಿಸಿದ್ದು ಗೆಲುವಿಗೆ ಸಹಕರಿಸಬೇಕು. ಎ.ಮಂಜು ಎಲ್ಲರಿಗೂ ಟೋಪಿ ಹಾಕುವ ವ್ಯಕ್ತಿ. ಈ ಹಿಂದೆ ಸಿದ್ದರಾಮಯ್ಯ ಅವರಿಂದ ಎಲ್ಲವನ್ನು ಪಡೆದು ಪಕ್ಷ ಬದಲಿಸುವ ಮೂಲಕ ನಂಬಿದವರಿಗೆ ಟೋಪಿ ಹಾಕಿದ್ದಾರೆ,'' ಎಂದು ಆರೋಪಿಸಿದರು.

ಮಾಜಿ ಸಚಿವ ಬಿ.ಶಿವರಾಂ, ವಿಧಾನ ಪರಿಷತ್‌ ಸದಸ್ಯ ಎಂಎಲ್‌ಸಿ ಗೋಪಾಲಸ್ವಾಮಿ, ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿದರು. ಜಿ.ಪಂ. ಸದಸ್ಯ ಪಟೇಲ್‌ಶಿವಪ್ಪ, ಮಾಡಾಳುಸ್ವಾಮಿ, ಮುಖಂಡರಾದ ಬಿ.ಜಿ.ಶಶಿಧರ್‌, ಬಾಣಾವರ ಶ್ರೀನಿವಾಸ್‌, ಗಂಡಸಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮೆಟ್ರೋಬಾಬು ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ