ಹಾಸನ: ಹಾಸನ ಮೂಲದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಗ್ರೀನ್ ಝೋನ್ನಲ್ಲಿರುವ ಹಾಸನದ ಜನತೆಯಲ್ಲಿ ಆತಂಕ ಶುರುವಾಗಿದೆ. ಆದರೆ, ಸೋಂಕಿತನಿಗೂ ಹಾಸನ ಜಿಲ್ಲೆಗೂ ಯಾವುದೇ ನಂಟಿಲ್ಲ. ಜಿಲ್ಲೆಯ ಜನ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಸ್ಪಷ್ಟನೆ ನೀಡಿದ್ದಾರೆ. ಸಂಜೆ ಬಿಡುಗಡೆಯಾದ ಕೊರೊನಾ ಬುಲೆಟಿನ್ನಲ್ಲಿ ಹಾಸನದ ವ್ಯಕ್ತಿಗೆ ಕೊರೊನಾ ಸೋಂಕು ಇರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ. ಆದರೆ, ಸೋಂಕಿತ ವ್ಯಕ್ತಿ ಹೆಣ್ಣಲ್ಲ ಗಂಡು. ಸೋಂಕಿತ ವ್ಯಕ್ತಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಮೂಲದವರು. ಆದರೆ, ಸೋಂಕಿತನಿಗೂ ಜಿಲ್ಲೆಗೂ ಯಾವುದೇ ನಂಟಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಸೋಂಕಿತ ವ್ಯಕ್ತಿ ಮೂಲತಃ ಹಾಸನದವನಾಗಿದ್ದರೂ ಮನೆಯವರ ಜೊತೆ ಸಂಪರ್ಕ ಹೊಂದಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಆತನ ಮನೆಯವರನ್ನು ಕ್ವಾರಂಟೇನ್ ಮಾಡಿದ್ದೇವೆ. ಜಿಲ್ಲೆಯ ಜನ ಭಯಪಡುವ ಅವಶ್ಯಕತೆ ಇಲ್ಲ. ಸಾಮಾಜಿಕ ಅಂತರದ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.
ತಬ್ಲಿಘಿಗಳಿಂದ ಗ್ರೀನ್ ಝೋನ್ ಶಿವಮೊಗ್ಗಕ್ಕೂ ಕಾಲಿಟ್ಟ ಕೊರೊನಾ, 8 ಜನಕ್ಕೆ ಸೋಂಕು ದೃಢ
ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲರೂ ಜಾಗೃತರಾಗಿರಬೇಕು. ಬೇರೆ ಬೇರೆ ರಾಜ್ಯಗಳಿಂದ ಜಿಲ್ಲೆಗೆ ಜನ ಬರುತ್ತಿದ್ದಾರೆ. ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗುತ್ತಿದೆ. ನಿಯಮಾವಳಿ ಪ್ರಕಾರ ಎಲ್ಲರನ್ನೂ ಎಲ್ಲ ರೀತಿಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಡಿಸಿ ಆರ್.ಗಿರೀಶ್ ವಿವರಿಸಿದರು.
ರಾಜ್ಯದಲ್ಲಿ ತಣ್ಣಗಾದ ಕೊರೊನಾ ಅಬ್ಬರ, 14 ಹೊಸ ಕೇಸ್; ಹಾಸನಕ್ಕೆ ಕೋವಿಡ್ ಎಂಟ್ರಿ
ಮೇ 7ರಂದು ಮುಂಬೈನಿಂದ ಬಂದಿದ್ದ ನಾಲ್ವರು ಅನುಮಾನದಿಂದ ನೇರವಾಗಿ ಕೆ.ಆರ್.ಪೇಟೆ ಮೂಲಕ ಮಂಡ್ಯ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದರು. ಇದೀಗ ಅದರಲ್ಲಿ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅವರಿಗೂ ಜಿಲ್ಲೆಗೂ ಯಾವುದೇ ಸಂಪರ್ಕವಿಲ್ಲ ಎಂದು ಅವರು ಪುನರುಚ್ಛರಿಸಿದರು.
ಬಾಲ್ಯವಿವಾಹಕ್ಕೆ ತಡೆಯೊಡ್ಡಿ ಬಾಲಕಿಯನ್ನು ರಕ್ಷಿಸಿದ ಮಕ್ಕಳ ಸಹಾಯವಾಣಿ
ಸೋಂಕಿತ ವ್ಯಕ್ತಿ ಮೂಲತಃ ಹಾಸನದವನಾಗಿದ್ದರೂ ಮನೆಯವರ ಜೊತೆ ಸಂಪರ್ಕ ಹೊಂದಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಆತನ ಮನೆಯವರನ್ನು ಕ್ವಾರಂಟೇನ್ ಮಾಡಿದ್ದೇವೆ. ಜಿಲ್ಲೆಯ ಜನ ಭಯಪಡುವ ಅವಶ್ಯಕತೆ ಇಲ್ಲ. ಸಾಮಾಜಿಕ ಅಂತರದ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.
ತಬ್ಲಿಘಿಗಳಿಂದ ಗ್ರೀನ್ ಝೋನ್ ಶಿವಮೊಗ್ಗಕ್ಕೂ ಕಾಲಿಟ್ಟ ಕೊರೊನಾ, 8 ಜನಕ್ಕೆ ಸೋಂಕು ದೃಢ
ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲರೂ ಜಾಗೃತರಾಗಿರಬೇಕು. ಬೇರೆ ಬೇರೆ ರಾಜ್ಯಗಳಿಂದ ಜಿಲ್ಲೆಗೆ ಜನ ಬರುತ್ತಿದ್ದಾರೆ. ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗುತ್ತಿದೆ. ನಿಯಮಾವಳಿ ಪ್ರಕಾರ ಎಲ್ಲರನ್ನೂ ಎಲ್ಲ ರೀತಿಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಡಿಸಿ ಆರ್.ಗಿರೀಶ್ ವಿವರಿಸಿದರು.
ರಾಜ್ಯದಲ್ಲಿ ತಣ್ಣಗಾದ ಕೊರೊನಾ ಅಬ್ಬರ, 14 ಹೊಸ ಕೇಸ್; ಹಾಸನಕ್ಕೆ ಕೋವಿಡ್ ಎಂಟ್ರಿ
ಮೇ 7ರಂದು ಮುಂಬೈನಿಂದ ಬಂದಿದ್ದ ನಾಲ್ವರು ಅನುಮಾನದಿಂದ ನೇರವಾಗಿ ಕೆ.ಆರ್.ಪೇಟೆ ಮೂಲಕ ಮಂಡ್ಯ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದರು. ಇದೀಗ ಅದರಲ್ಲಿ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅವರಿಗೂ ಜಿಲ್ಲೆಗೂ ಯಾವುದೇ ಸಂಪರ್ಕವಿಲ್ಲ ಎಂದು ಅವರು ಪುನರುಚ್ಛರಿಸಿದರು.
ಬಾಲ್ಯವಿವಾಹಕ್ಕೆ ತಡೆಯೊಡ್ಡಿ ಬಾಲಕಿಯನ್ನು ರಕ್ಷಿಸಿದ ಮಕ್ಕಳ ಸಹಾಯವಾಣಿ