ಆ್ಯಪ್ನಗರ

ಎಟಿಅರ್‌ ಕುಟುಂಬದಿಂದ ಭೂ ಅಕ್ರಮ

​ ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ನೇತೃತ್ವ ವಹಿಸಿದ್ದ ಶಾಸಕ ಎ.ಟಿ. ರಾಮಸ್ವಾಮಿ ಅವರ ಅಣ್ಣನ ಮಕ್ಕಳು, ಸಂಬಂಧಿಕರೇ 70ರಿಂದ 80 ಎಕರೆ ಭೂ ಒತ್ತುವರಿ ಮಾಡಿದ್ದು, ಇದೊಂದು ರೀತಿ ಬೇಲಿಯೇ ಎದ್ದು ಹೊಲ ಮೇಯ್ದ ಕತೆಯಂತಾಗಿದೆ ಎಂದು ಮಾಜಿ ಸಚಿವ ಎ.ಮಂಜು ಆರೋಪಿಸಿದರು.

Vijaya Karnataka 6 Nov 2019, 5:00 am
ಹಾಸನ: ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ನೇತೃತ್ವ ವಹಿಸಿದ್ದ ಶಾಸಕ ಎ.ಟಿ. ರಾಮಸ್ವಾಮಿ ಅವರ ಅಣ್ಣನ ಮಕ್ಕಳು, ಸಂಬಂಧಿಕರೇ 70ರಿಂದ 80 ಎಕರೆ ಭೂ ಒತ್ತುವರಿ ಮಾಡಿದ್ದು, ಇದೊಂದು ರೀತಿ ಬೇಲಿಯೇ ಎದ್ದು ಹೊಲ ಮೇಯ್ದ ಕತೆಯಂತಾಗಿದೆ ಎಂದು ಮಾಜಿ ಸಚಿವ ಎ.ಮಂಜು ಆರೋಪಿಸಿದರು.
Vijaya Karnataka Web news/hasana/hassan
ಎಟಿಅರ್‌ ಕುಟುಂಬದಿಂದ ಭೂ ಅಕ್ರಮ


''ಜಿಲ್ಲಾಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಯ ಅನುದಾನದಲ್ಲಿಶಾಸಕರು ತಮ್ಮ ತೋಟದ ಮನೆಗೆ ರಸ್ತೆಯನ್ನು ಮಾಡಿಸಿಕೊಂಡು ಅಕ್ರಮ ಎಸಗಿದ್ದಾರೆ,'' ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

''ಬೆಂಗಳೂರಿನಲ್ಲಿಭೂಕಬಳಿಕೆ ವಿರೋಧಿ ಹೋರಾಟ ಮಾಡುವ ಶಾಸಕ ಎ.ಟಿ.ರಾಮಸ್ವಾಮಿ ಮೊದಲು ಕೊಣನೂರು ಹೋಬಳಿ ಬಿಸಲಹಳ್ಳಿ ಸರ್ವೆನಂ 7/1.7/2,8/1ಎ ಹಾಗೂ 8/1ಎ.2 ರಲ್ಲಿಹಾದುಹೋಗಿರುವ ಹಾಗೂ ಸರ್ವೆ ನಂ 8/1ಬಿ ಹಾದುಹೋಗಿರುವ ಕಾಲುದಾರಿ ಮತ್ತು ಬಂಡಿ ಪ್ರದೇಶವನ್ನು ಒತ್ತುವರಿ ಮಾಡಿದವರು ಯಾರು ಎಂಬುದನ್ನು ಶಾಸಕರು ಹೇಳಬೇಕು,'' ಎಂದು ಒತ್ತಾಯಿಸಿದರು.

''ಕೊಣನೂರು ಹೋಬಳಿ ಚಿಕ್ಕಬೊಮ್ಮನಹಳ್ಳಿ ಗ್ರಾಮದ ಸರ್ವೆನಂ 93ರಲ್ಲಿರಾಜ್ಯ ವಿದ್ಯುತ್‌ ಪ್ರಸರಣಾ ನಿಗಮಕ್ಕೆ ಎರಡು ಎಕರೆ ಜಮೀನು ಮೀಸಲಿದ್ದು, ಅದೇ ಸರ್ವೆ ನಂ 93ರಲ್ಲಿಉಳಿಕೆ 4.13 ಗುಂಟೆ ಸರಕಾರಿ ಬೀಳು ಮತ್ತು ಸರ್ವೆ ನಂ 91 ಮತ್ತು 92ರಲ್ಲಿ1.18 ಎಕರೆ ಮತ್ತು 5.17 ಎಕರೆ ಸರಕಾರಿ ಬೀಳು ಅನುಭವಿಸುತ್ತಿರುವವರು ಶಾಸಕ ಎ.ಟಿ.ರಾಮಸ್ವಾಮಿ ಅಣ್ಣನ ಮಕ್ಕಳು ಮತ್ತು ಹಿಂಬಾಲಕರು.ಆ ಭೂಮಿಯನ್ನು ಬೇರೆಯವರಿಗೆ ಬೆಳೆ ಬೆಳೆಯಲು ಕೊಟ್ಟಿರುವುದು ಸುಳ್ಳೇ ಶಾಸಕರೇ,'' ಎಂದು ದಾಖಲೆ ಪ್ರದರ್ಶಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ