ಆ್ಯಪ್ನಗರ

ಸಮಾಜದಲ್ಲಿ ವಕೀಲರ ಪಾತ್ರ ಮುಖ್ಯ: ಎಸ್ಪಿ ಅಭಿಮತ

ಹಾಸನ: ಸಮಾಜದಲ್ಲಿ ವಕೀಲರ ಪಾತ್ರ ಮುಖ್ಯವಾದದ್ದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ್‌ಗೌಡ ಅಭಿಪ್ರಾಯ ಪಟ್ಟರು.

Vijaya Karnataka 23 Feb 2019, 5:00 am
ಹಾಸನ: ಸಮಾಜದಲ್ಲಿ ವಕೀಲರ ಪಾತ್ರ ಮುಖ್ಯವಾದದ್ದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ್‌ಗೌಡ ಅಭಿಪ್ರಾಯ ಪಟ್ಟರು.
Vijaya Karnataka Web hassan advocate union state law college workshop
ಸಮಾಜದಲ್ಲಿ ವಕೀಲರ ಪಾತ್ರ ಮುಖ್ಯ: ಎಸ್ಪಿ ಅಭಿಮತ


ನಗರದ ಎಂ.ಕೃಷ್ಣ ಕಾನೂನು ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಕಾಲೇಜು ಸಹಯೋಗದಲ್ಲಿ ಶುಕ್ರವಾರ ಬೆಳಗ್ಗೆ ಹಮ್ಮಿಕೊಂಡಿದ್ದ ಕಾರಾರ‍ಯಗಾರ ಉದ್ಘಾಟಿಸಿ ಮಾತನಾಡಿ, ವಕೀಲರ ಕೆಲಸ ರಾಜಗಾಂಭಿರ‍್ಯವಿರುವ ಒಳ್ಳೆಯ ಹುದ್ದೆ ಎಂದರೇ ತಪ್ಪಾಗಲಾರದು ಎಂದರು.

ಸಮಾಜದಲ್ಲಿ ವಕೀಲರ ಪಾತ್ರ ಬಹು ಮುಖ್ಯ. ಸಮಾಜವನ್ನು ಉತ್ತಮದತ್ತ ಕೊಂಡೊಯ್ಯುವ ಬಗ್ಗೆ ತಮ್ಮದೆ ಆದ ಕಾಣಿಕೆ ಇರುತ್ತದೆ. ಕಕ್ಷಿದಾರನಿಗೆ ನ್ಯಾಯ ಒದಗಿಸುವುದು ಒಬ್ಬ ವಕೀಲನ ಗುರಿಯಾಗಿರಬೇಕು. ಅವರೇ ನಮಗೆ ದೇವರಿದ್ದಂತೆ. ನ್ಯಾಯವನ್ನು ಬೇಡಿ ಬಂದವರಿಗೆ ನ್ಯಾಯ ಒದಗಿಸಿ ಕೊಟ್ಟರೇ ವಕೀಲರನ್ನು ದೇವರಂತೆ ಕಾಣುತ್ತಾರೆ ಎಂದು ತಿಳಿಸಿದರು.

ಪೊಲೀಸ್‌ ಅಧಿಕಾರಿಗಳು ಆರೋಪಿಗಳನ್ನು ಹಿಡಿದು ತಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸುತ್ತಾರೆ. ಸರಿಯಾದ ರೀತಿ ನ್ಯಾಯವನ್ನು ದೊರಕಿಸಿಕೊಡುವುದು ವಕೀಲರ ಕರ್ತವ್ಯ. ನಮ್ಮ ನಿಮ್ಮ ಕರ್ತವ್ಯ ಪರಸ್ಪರ ವಿರುದ್ಧವಾಗಿದ್ದರೂ ಸಹ ಸಮಾಜದ ದೃಷ್ಟಿಯಲ್ಲಿ ಪೂರಕವಾಗಿರುತ್ತದೆ ಎಂದು ಹೇಳಿದರು.

ವಕೀಲ ವೃತ್ತಿಯಿಂದ ರಾಜಕೀಯದವರೆಗೂ ಕಾಲಿಟ್ಟಿರುವ ಅನೇಕರು ಇದ್ದಾರೆ. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವ ವಿದ್ಯಮಾನ ನಡೆಯುತ್ತಿದೆ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಜೀವನದಲ್ಲಿ ಐಎಎಸ್‌, ಐಪಿಎಸ್‌ ಅಧಿಕಾರಿ ಆಗಬೇಕು ಎಂಬ ಉದ್ದೇಶಗಳನ್ನು ಇಟ್ಟುಕೊಂಡಿದ್ದರೆ ಶ್ರದ್ಧೆಯಿಂದ ಗುರಿ ಮುಟ್ಟಬಹುದು ಎಂದರು.

ಕಾಲೇಜಿನ ಕಾರ್ಯದರ್ಶಿ ಆರ್‌.ಡಿ.ದ್ಯಾವೇಗೌಡ ಮಾತನಾಡಿ, ಯಾವುದೇ ವೃತ್ತಿಯಾಗಿರಲಿ ಯಶಸ್ಸು ಕಾಣಬೇಕಾದರೆ ಕಠಿಣ ಶ್ರಮ ಹಾಗೂ ಗುರಿ ಇರಬೇಕು. ಇಂದಿನ ಸ್ಪರ್ಧಾ ಯುಗದಲ್ಲಿ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಗ್ರಂಥಾಲಯ, ಆನ್‌ಲೈನ್‌ ಮೂಲಕ ಅಧ್ಯಯನ ಮಾಡಬೇಕು. ವಕೀಲರಾದವರು ಒಂದು ಪ್ರಕರಣವನ್ನು ಹೇಗೆ ಕೊಂಡೊಯ್ಯಬೇಕು ಎಂಬುದನ್ನು ತಿಳಿಯಬೇಕು ಎಂದು ಹೇಳಿದರು.

ಕಾಲೇಜಿನ ಖಜಾಂಚಿ ಶೇಷಾದ್ರಿ, ಎಂ ಕೃಷ್ಣ ಕಾನೂನು ಕಾಲೇಜು ಪ್ರಾಂಶುಪಾಲ ಡಾ. ಶ್ರೀನಿವಾಸ್‌, ಮಂಗಳೂರು ಎಸ್‌.ಡಿ.ಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ತಾರಾನಾಥ್‌, ಎಂ ಕೃಷ್ಣ ಕಾನೂನು ಕಾಲೇಜು ಸಿಬ್ಬಂದಿ ಹೇಮಂತ್‌ ಕುಮಾರ್‌, ಸುಭಾಷ್‌, ಚಂದ್ರಾಸ್‌, ತನುಜಾ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ