ಆ್ಯಪ್ನಗರ

ರೇವಣ್ಣ ಎದುರೇ ಬಿಜೆಪಿಗೆ ಜೈ ಎಂದ ಕೈ ಕಾರ್ಯಕರ್ತರು

ಅರಸೀಕೆರೆ (ಹಾಸನ ಜಿಲ್ಲೆ): ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಎದುರೇ ‘ಬಿಜೆಪಿಗೆ ಜೈ, ನಮ್ಮ ಮತ ಬಿಜೆಪಿಗೆ’ ಎಂಬ ಘೋಷಣೆಗಳು ಮೊಳಗಿದ ಘಟನೆ ಅರಸೀಕೆರೆಯಲ್ಲಿ ಶುಕ್ರವಾರ ನಡೆದಿದೆ.

Vijaya Karnataka 30 Mar 2019, 4:24 pm
ಅರಸೀಕೆರೆ (ಹಾಸನ ಜಿಲ್ಲೆ): ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಎದುರೇ ‘ಬಿಜೆಪಿಗೆ ಜೈ, ನಮ್ಮ ಮತ ಬಿಜೆಪಿಗೆ’ ಎಂಬ ಘೋಷಣೆಗಳು ಮೊಳಗಿದ ಘಟನೆ ಅರಸೀಕೆರೆಯಲ್ಲಿ ಶುಕ್ರವಾರ ನಡೆದಿದೆ.
Vijaya Karnataka Web hassan arasikere congress workers slogan support bjp
ರೇವಣ್ಣ ಎದುರೇ ಬಿಜೆಪಿಗೆ ಜೈ ಎಂದ ಕೈ ಕಾರ್ಯಕರ್ತರು


ಸಭೆಯಲ್ಲಿ ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೆಲವು ಕೈ ಕಾರ್ಯಕರ್ತರು, ಬಿಜೆಪಿ ಪರ ಘೋಷಣೆ ಕೂಗಿ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದರು.
ನಗರದ ಮೈಸೂರು ರಸ್ತೆಯಲ್ಲಿರುವ ಹಳ್ಳಿಮನೆಯಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವ ಎಚ್.ಡಿ.ರೇವಣ್ಣ, ಶಾಸಕ ಕೆ.ಎಂ.ಶಿವಲಿಂಗೇಗೌಡ, ಎಐಸಿಸಿ ಉಪಾಧ್ಯಕ್ಷ ಬಿ.ಶಿವರಾಂ, ಎಂಎಲ್‌ಸಿ ಗೋಪಾಲಸ್ವಾಮಿ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಮ್ಮುಖದಲ್ಲಿ ತಮ್ಮ ಅನಿಸಿಕೆಗಳನ್ನು ಹೇಳಲು ಅವಕಾಶ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಎಸ್‌ಎಲ್‌ಎನ್ ಯೋಗೀಶ್ ಮಾತನಾಡುವಾಗ ಕ್ಷೇತ್ರದಲ್ಲಿ ಸಮ್ಮಿಶ್ರ ಸರಕಾರದಿಂದ ಕಾಂಗ್ರೆಸ್ ನೆಲ ಕಚ್ಚಿದೆ ಎಂದು ಹೇಳಿದರು. ಈ ಮಾತಿಗೆ ಸಭೆಯ ಮಧ್ಯದಲ್ಲಿದ್ದ ಚಿಕ್ಕೊಂಡಳ್ಳಿ ಕುಮಾರ್ ಸೇರಿದಂತೆ ಕೆಲವರು ತಮ್ಮ ನೋವನ್ನು ಹೊರಹಾಕಿದರು.

‘‘ಹೊಂದಾಣಿಕೆಯಿಂದ ಕಾಂಗ್ರೆಸ್ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡುತ್ತಿಲ್ಲ. ಸರಕಾರದ ನಾಮನಿರ್ದೇಶಿತರನ್ನು ನೇಮಿಸುತ್ತಿಲ್ಲ. ಕಾಂಗ್ರೆಸ್‌ನವರನ್ನು ಜೆಡಿಎಸ್ ಮುಖಂಡರು ಕೆಟ್ಟದ್ದಾಗಿ ನಡೆಸಿಕೊಂಡಿದ್ದಾರೆ. ಯಾರೇ ನಾಯಕರು ನಮಗೆ ತಿಳಿಸಿದರೂ ನಮ್ಮ ಮತ ಬಿಜೆಪಿ ಅಭ್ಯರ್ಥಿಗೆ ಎಂದು ಹೇಳುತ್ತಾ ಬಿಜೆಪಿಗೆ ಜೈ, ನಮ್ಮ ಮತ ಬಿಜೆಪಿಗೆ,’’ ಎಂದು ಕೂಗುತ್ತಾ ಸಭೆಯಿಂದ ಹೊರ ನಡೆದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿ.ಶಿವರಾಂ, ‘‘ಸಭೆಯಿಂದ ಹೊರನಡೆದ ಕೆಲವರು ಈಗಾಗಲೇ ಬಿಜೆಪಿ ಸೇರಿದ್ದು, ಸಭೆಯನ್ನು ಗೊಂದಲಕ್ಕೆ ಸಿಲುಕಿಸಲು ಆಗಮಿಸಿದ್ದಾರೆ. ಈ ಬಗ್ಗೆ ಯಾರು ತಲೆಕೆಡಿಸಿಕೊಳ್ಳುವುದು ಬೇಡ. ನಮ್ಮೆಲ್ಲರ ಮತ ಪ್ರಜ್ವಲ್ ರೇವಣ್ಣ ಪರವಾಗಿರುತ್ತದೆ,’’ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ