ಆ್ಯಪ್ನಗರ

ಹೆಸರು ಬೆಳೆಗೆ ಹಳದಿ ರೋಗ: ಕೀಟ ನಾಶಕ ಸಿಂಪಡೆಣೆಗೆ ಸಲಹೆ

ಹೆಸರು ಬೆಳೆಗೆ ಹಳದಿ ರೋಗ: ಕೀಟ ನಾಶಕ ಸಿಂಪಡೆಣೆಗೆ ಸಲಹೆ * ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಕೆಂಪ ಚೌಡಪ್ಪ ------------------ ವಿಕ ಸುದ್ದಿಲೋಕ ಅರಸೀಕೆರೆ ತಾಲೂಕಿನ ...

Vijaya Karnataka 14 Jun 2018, 5:00 am
ಅರಸೀಕೆರೆ: ತಾಲೂಕಿನ ಕೆಲವು ಭಾಗಗಳಲ್ಲಿ ಹೆಸರು ಬೆಳೆಗೆ ಹಳದಿ ಎಲೆ ರೋಗ ಕಾಣಿಸಿಕೊಳ್ಳುತ್ತಿದ್ದು ರೈತರು ಮುಂಜಾಗೃತೆಯಾಗಿ ರೋಗಗ್ರಸ್ಥ ಗಿಡಗಳಿಗೆ ಕೀಟ ನಾಶಕ ಸಿಂಪಡಿಸುವ ಮೂಲಕ ರೋಗ ತಡೆಗಟ್ಟಬಹುದು ಎಂದು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಕೆಂಪ ಚೌಡಪ್ಪ ತಿಳಿಸಿದರು.
Vijaya Karnataka Web hassan arasikere moong daal yellow insets problem officers visit
ಹೆಸರು ಬೆಳೆಗೆ ಹಳದಿ ರೋಗ: ಕೀಟ ನಾಶಕ ಸಿಂಪಡೆಣೆಗೆ ಸಲಹೆ


ಹೆಸರು ಬೆಳೆಗೆ ಕೀಟ ಬಾಧೆ ಕಾಡುತ್ತಿರುವ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ತಾಲೂಕಿನ ಎಲ್ಲೆಡೆ ಮುಂಗಾರು ಮಳೆ ಉತ್ತಮವಾಗಿ ಬೀಳುತ್ತಿದೆ. ಈವರೆಗೂ ಯಾವುದೇ ಮಳೆ ಹಾನಿ ಸಂಭವಿಸಿಲ್ಲ. ಆದರೆ, ಜಮೀನುಗಳಲ್ಲಿ ಹೆಚ್ಚಿನ ತೇವಾಂಶದ ಕಾರಣ ಕ್ರೀಮಿ ಕೀಟಗಳ ಭಾದೆಗಳು ಕಂಡು ಬರುತ್ತಿದೆ. ಹೆಸರು, ಅಲಸಂದೆ, ತೊಗರಿ ಇತ್ಯಾದಿ ದ್ವಿದಳ ಧಾನ್ಯಗಳ ಬೆಳೆಗಳಿಗೆ ವಿವಿಧ ರೋಗಗಳು ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ತಾಲೂಕಿನ ಕಸಬಾ ಮತ್ತು ಕಣಕಟ್ಟೆ ಹೋಬಳಿಯ ಕೆಲವು ಜಮೀನುಗಳಿಗೆ ಭೇಟಿ ನೀಡಿದ್ದ ವೇಳೆ ಹೆಸರು ಗಿಡಗಳು ಹೂವು ಕಟ್ಟುವ ಹಂತದಲ್ಲಿದ್ದು ಅದಕ್ಕೆ ಹಳದಿ ಎಲೆಯ ರೋಗ ಕಾಣಿಸಿಕೊಂಡಿದೆ. ಈ ರೋಗವು ವೈರಸ್‌ ಮೂಲಕ ಹರಡುವ ಸಾಂಕ್ರಾಮಿಕ ರೋಗವಾಗಿದೆ.

ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುವ ಮೂಲಕ ಹೂವುಗಳು ಕಾಯಿ ಕಟ್ಟುವ ಬದಲಿಗೆ ಒಣಗಿ ಬಿದ್ದು ಹೋಗುತ್ತವೆ. ಆದ್ದರಿಂದ ಎಲ್ಲ ಗಿಡಗಳಿಗೂ ರೋಗ ಹರಡುವ ಸಾಧ್ಯತೆಗಳು ಹೆಚ್ಚಿದ್ದು ರೈತರು ಮುನ್ನೆಚ್ಚರಿಕೆ ಕ್ರಮವಾಗಿ ರೋಗಗ್ರಸ್ಥ ಗಿಡಗಳನ್ನು ಬೇರು ಸಮೇತ ಕಿತ್ತು ಸುಟ್ಟು ಹಾಕಬೇಕು. ಉಳಿದ ಗಿಡಗಳಿಗೆ ರೋಗ ವ್ಯಾಪಿಸದಂತೆ ಕೀಟ ನಾಶಕ ಔಷಧಗಳನ್ನು ಸಿಂಪಡಿಸುವ ಮೂಲಕ ಹೆಸರು ಗಿಡಗಳನ್ನು ಸಂರಕ್ಷ ಣೆ ಮಾಡಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಈ ಸಮಸ್ಯೆ ಬಗ್ಗೆ ರೈತರು ಆತಂಕಕ್ಕೆ ಒಳಗಾಗದೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ಮಾಡಿ ಸೂಕ್ತ ಸಲಹೆಗಳನ್ನು ಪಡೆಯಬಹುದು. ನಗರದಲ್ಲಿನ ಸಹಾಯಕ ಕೃಷಿ ಇಲಾಖೆ ಅಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬೇಕು ಎಂದು ಮನವಿ ಮಾಡಿದರು.

ಕೃಷಿ ಅಧಿಕಾರಿ ಹರೀಶ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ