ಆ್ಯಪ್ನಗರ

ಸೆ.14ರಿಂದ ಅರಸೀಕೆರೆ ಪ್ರೀಮಿಯರ್‌ ಲೀಗ್‌

ಸೆ...

Vijaya Karnataka 27 Aug 2018, 5:00 am
ಅರಸೀಕೆರೆ: ರಾಜ್ಯದಲ್ಲೇ ಗಮನ ಸೆಳೆದಿರುವ ಅರಸೀಕೆರೆ ಪ್ರೀಮಿಯರ್‌ ಲೀಗ್‌ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯಾವಳಿಯ ತಂಡಗಳಿಗೆ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಿತು.
Vijaya Karnataka Web hassan arasikere tennis ball cricket arasikere premier league sepetember 14th
ಸೆ.14ರಿಂದ ಅರಸೀಕೆರೆ ಪ್ರೀಮಿಯರ್‌ ಲೀಗ್‌


ತಂಡಕ್ಕೆ ಸೇರ್ಪಡೆಗೊಳ್ಳಲು ಹೆಸರು ನೋಂದಾಯಿಸಿದ್ದ 200ಕ್ಕೂ ಹೆಚ್ಚು ಕ್ರಿಕೆಟ್‌ ಆಟಗಾರರನ್ನು 8 ತಂಡಗಳ ಮಾಲೀಕರು ಬಿಡ್‌ ಮೂಲಕ ತಮ್ಮ ತಂಡಕ್ಕೆ ಆಯ್ಕೆ ಮಾಡಿಕೊಂಡರು. ನಗರದ ಹೊರವಲಯದಲ್ಲಿರುವ ಹಳ್ಳಿಮನೆಯಲ್ಲಿ ನಡೆದ ಬಿಡ್ಡಿಂಗ್‌ ಪ್ರಕ್ರಿಯೆಯಲ್ಲಿ ಶೈರನ್‌ ಕ್ರಿಕೆಟರ್ಸ್‌, ಅರಸೀ ಚಾಲೆಂಜರ್ಸ್‌, ಎಂ3 ವಿವೋ ಸಿಕ್ಸರ್ಸ್‌, ಸ್ನೇಹಪ್ರಿಯ ಲೈಲಾಪುರ, ಅರಸೀಕೆರೆ ರಾಯಲ್ಸ್‌, ಕೋಪ್ರಾ ಕಿಂಗ್ಸ್‌, ಅರಸೀಕೆರೆ ವೆಜೆಂಡ್ಸ್‌, ಹಾಗೂ ಸಿಟಿ ಹಂಟರ್ಸ್‌ ತಂಡದ ಮಾಲೀಕರು ಹಾಗೂ ನಾಯಕರು ನೆಚ್ಚಿನ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದರು.

ಗ್ರಾಮಾಂತರ ಠಾಣೆಯ ಸಬ್‌ಇನ್ಸ್‌ಪೆಕ್ಟ್ರ್‌ ಪುರುಷೋತ್ತಮ್‌ ಮಾತನಾಡಿ, ಕಳೆದ ಬಾರಿ ಎಪಿಎಲ್‌ ಕ್ರಿಕೆಟ್‌ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈಗ ಸೀಸನ್‌ 2 ಕ್ರೀಡಾಕೂಟವನ್ನು ಯಶಸ್ವಿಗೊಳಿಸಿ ಎಂದು ಹಾರೈಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಪಾಧ್ಯಕ್ಷ ಶಶಿಧರ್‌ ಮಾತನಾಡಿ, ಫ್ರೆಂಡ್ಸ್‌ ಕ್ರಿಕೆಟರ್ಸ್‌ ವತಿಯಿಂದ ಆಯೋಜಿಸುತ್ತಿರುವ ಎಪಿಎಲ್‌ ಕ್ರಿಕೆಟ್‌ ಟೂರ್ನಮೆಂಟ್‌ ಸೇರಿದಂತೆ ಇತರೆ ಕ್ರೀಡಾಕೂಟಗಳು ಅತ್ಯಂತ ವ್ಯವಸ್ಥಿತವಾಗಿವೆ. ತಾಲೂಕಿನ ಯುವ ಆಟಗಾರರಿಗೆ ವೇದಿಕೆ ಕಲ್ಪಿಸಿಕೊಡಲಾಗಿದೆ. ಪ್ರತಿಭಾವಂತ ಆಟಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ರೀಡಾಕೂಟ ಆಯೋಜನೆ ಸಮಿತಿಯ ವ್ಯವಸ್ಥಾಪಕ ಸಂದೀಪ್‌ ಥಾಮಸ್‌ ಮಾತನಾಡಿ, ಸೆಪ್ಟೆಂಬರ್‌ 14, 15, ಹಾಗೂ 16 ಮೂರು ದಿನಗಳ ಕಾಲ ನಗರದ ಜೇನುಕಲ್‌ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಯಲಿದೆ. 8 ತಂಡಗಳು ತಮ್ಮ ಆಟಗಾರರನ್ನ ಬಿಡ್‌ ಮೂಲಕ ಆಯ್ಕೆ ಮಾಡಿಕೊಂಡಿದ್ದಾರೆ. ಪ್ರಥಮ ಬಹುಮಾನ ಆಕರ್ಷಕ ಟ್ರೋಫಿ ಸೇರಿದಂತೆ 60 ಸಾವಿರ ರೂ.ನಗದು, ರನ್ನರ್‌ಅಪ್‌ಗೆ ಟ್ರೋಫೀ ಸಮೇತ 40 ಸಾವಿರ ರೂ.ನಗದು, ತೃತಿಯ ಸ್ಥಾನಕ್ಕೆ 30 ಸಾವಿರ ರೂ. ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ಟ್ರೋಫಿ ಸಮೇತ 20 ಸಾವಿರ ರೂ.ನಗದು ಬಹುಮಾನ ಒಳಗೊಂಡಿದೆ. ಅಲ್ಲದೆ, ಪ್ರತಿ ಪಂದ್ಯಕ್ಕೂ ಮ್ಯಾನ್‌ ಆಫ್‌ ದ ಮ್ಯಾಚ್‌ ಪ್ರಶಸ್ತಿ ನೀಡಲಾಗುವುದು. ಬೆಂಗಳೂರಿನಿಂದ ಅನುಭವಿ ಅಂಪೈರ್‌ಗಳನ್ನು ಕರೆಸಲಾಗುತ್ತಿದೆ. ವೀಕ್ಷ ಕ ವಿವರಣೆಯನ್ನು ಮಂಗಳೂರಿನ ಪ್ರಶಾಂತ್‌, ವಿನಯ್‌ ಹಾಗೂ ಬೆಂಗಳೂರಿನ ವಿನಯ್‌ ನೀಡಲಿದ್ದಾರೆ. ಪ್ರತಿ ಪಂದ್ಯವನ್ನು ಎಂ ಸ್ಪೋರ್ಟ್ಸ್ನಲ್ಲಿ ವೀಕ್ಷಿಸಬಹುದು ಎಂದು ಹೇಳಿದರು.

ಫ್ರೆಂಡ್ಸ್‌ ಕ್ರಿಕೆಟರ್ಸ್‌ನ ಶೈಲೇಂದ್ರ, ರಮೇಶ್‌ ನಾಯ್ಡು, ಲೈಲಾಪುರ ಚಂದ್ರೇಗೌಡರು, ಹರೀಶ್‌ ಗವಾ, ಸುರೇಶ್‌ ಟಿ.ಟಿ., ಸಚಿನ್‌, ಡೇವಿಡ್‌, ಕಿರಣ್‌, ಟೋನಿ, ಮಣಿ, ಗಣೇಶ್‌, ಶ್ರೀನಿವಾಸ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ