ಆ್ಯಪ್ನಗರ

ಎಕ್ಸಿಸ್‌ ಬ್ಯಾಂಕ್‌ ವಿರುದ್ಧ ರೈತ ಸಂಘ ಪ್ರತಿಭಟನೆ

ಹಾಸನ: ಎಕ್ಸಿಸ್‌ ಬ್ಯಾಂಕ್‌ ರೈತರಿಗೆ ಕೋರ್ಟ್‌ ನೋಟಿಸ್‌ ನೀಡಿ ಬಂಧನದ ವಾರೆಂಟ್‌ ಜಾರಿ ಮಾಡಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ‍್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

Vijaya Karnataka 6 Nov 2018, 5:00 am
ಹಾಸನ: ಎಕ್ಸಿಸ್‌ ಬ್ಯಾಂಕ್‌ ರೈತರಿಗೆ ಕೋರ್ಟ್‌ ನೋಟಿಸ್‌ ನೀಡಿ ಬಂಧನದ ವಾರೆಂಟ್‌ ಜಾರಿ ಮಾಡಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ‍್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
Vijaya Karnataka Web hassan axsis bank foremr loan arrest warent issue ritasangha protest
ಎಕ್ಸಿಸ್‌ ಬ್ಯಾಂಕ್‌ ವಿರುದ್ಧ ರೈತ ಸಂಘ ಪ್ರತಿಭಟನೆ


ನಗರದ ಹೇಮಾವತಿ ಪ್ರತಿಮೆಯಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿದ ಕಾರ‍್ಯಕರ್ತರು ಎನ್‌.ಆರ್‌. ವೃತ್ತ, ಬಿ.ಎಂ.ರಸ್ತೆ ಮೂಲಕ ಎಕ್ಸಿಸ್‌ ಬ್ಯಾಂಕ್‌ ಬಳಿ ಆಗಮಿಸಿ ಬ್ಯಾಂಕ್‌ ವಿರುದ್ಧ ಘೋಷಣೆ ಕೂಗಿದರು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸುಮಾರು 180 ಜನ ರೈತರು 2009ರಲ್ಲಿ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದರು. ಬ್ಯಾಂಕ್‌ನವರು ರೈತರೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಅಲ್ಲದೆ ಖಾಲಿ ಚೆಕ್‌ಗೆ ರೈತರಿಂದ ಸಹಿಯನ್ನು ಬ್ಯಾಂಕ್‌ ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಈಗ ಸಾಲ ಕಟ್ಟಲಾಗದೆ ರೈತರ ಮೇಲೆ ಚೆಕ್‌ ಬೌನ್ಸ್‌ ಪ್ರಕರಣವನ್ನು ನ್ಯಾಯಾಲಯದಲ್ಲಿ ದಾಖಲಿಸಿದ್ದಾರೆ. ಚೆಕ್‌ ಬೌನ್ಸ್‌ ಪ್ರಕರಣದ ಪರಿಣಾಮವಾಗಿ 180 ಮಂದಿ ರೈತರ ಮೇಲೆ ಹಲವು ಬಾರಿ ಸಮನ್ಸ್‌ ಜಾರಿ ಮಾಡಿದ್ದಾರೆ. ಆದರೆ ರೈತರು ಸ್ವೀಕರಿಸಿಲ್ಲ. ನಂತರ 5 ಮಂದಿ ರೈತರಿಗೆ ಪೊಲೀಸ್‌ರ ಮೂಲಕ ಬಂಧನದ ವಾರೆಂಟ್‌ ಸಹ ಬ್ಯಾಂಕ್‌ ಜಾರಿ ಮಾಡಿ ಬಂಧಿಸಲು ಆದೇಶ ಹೊರಡಿಸಿದ್ದಾರೆ. ರಾಜ್ಯದಲ್ಲಿ ನಿರಂತರವಾಗಿ 5 ವರ್ಷ ಬರಗಾಲವಿದ್ದರೂ ರೈತರಿಗೆ ಕಿರಿಕುಳ ಕೊಡುತ್ತಿರುವ ಎಲ್ಲ ಬ್ಯಾಂಕ್‌ಗಳಿಗೆ ಕೇಂದ್ರ ಸರಕಾರ, ರಾಜ್ಯ ಸರಕಾರ ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಸಾಲ ಮನ್ನಾ ಎಂದು ಸರಕಾರ ಘೋಷಣೆ ಮಾಡಿದ್ದರೂ ಎಕ್ಸಿಸ್‌ ಬ್ಯಾಂಕ್‌ ರೈತರಿಗೆ ಕೋರ್ಟ್‌ ನೋಟಿಸ್‌ ಮತ್ತು ಬಂಧನದ ವಾರೆಂಟ್‌ ಕೊಟ್ಟಿರುವುದು ಸರಿಯಲ್ಲ. ಕೂಡಲೇ ಬ್ಯಾಂಕ್‌ ಅನ್ನು ಇಡೀ ರಾಜ್ಯದಿಂದ ಖಾಲಿ ಮಾಡಿಸಬೇಕು. ಇಲ್ಲವಾದಲ್ಲಿ ಮುಂದೆ ಇಂತಹ ಘಟನೆ ಮರುಕಳಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಚನ್ನರಾಯಪಟ್ಟಣ ತಾಲೂಕಿನ ರೈತರ ಸಮಸ್ಯೆಗಳ ಬಗ್ಗೆ ತಾಲೂಕು ಆಡಳಿತ ನಿಷ್ಕ್ರಿಯವಾಗಿದ್ದು ಆಡಳಿತ ಸತ್ತು ಹೋಗಿದೆ. ರೈತರ ಹಿತ ಕಾಪಾಡುವ ಯಾವ ಕೆಲಸ ಕಾರ‍್ಯಗಳು ನಡೆಯುತ್ತಿಲ್ಲ. ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ರೈತರ ಬಗ್ಗೆ ಹಿತ ಕಾಯುತ್ತಿಲ್ಲ. ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಹೀಗಾಗಿ ರೈತರ ಹಿತದೃಷ್ಟಿಯಿಂದ ನ.16ರಂದು ಚನ್ನರಾಯಪಟ್ಟಣ ಹೇಮಾವತಿ ಸಹಕಾರ ಸಕ್ಕರೆ ಕರ್ಖಾನೆ ಮುಂಭಾಗ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಆನೆಕೆರೆ ರವಿ, ಪ್ರಧಾನ ಕಾರ್ಯದರ್ಶಿ ಜಯರಾಂ, ಉಪಾಧ್ಯಕ್ಷ ಆಂಗಡಿ ರಾಜಣ್ಣ, ಜಿಲ್ಲಾ ಖಜಾಂಚಿ ಕುಪ್ಪಳ್ಳಿ ಆಣ್ಣಪ್ಪಗೌಡ, ಮೀಸೆ ಮಂಜಣ್ಣ, ವೀಠಲ, ಜಿಲ್ಲಾ ಸಂಚಾರಕ ಕಾರ್ಯದರ್ಶಿ ಸುಧಾ ಗಿರೀಶ್‌ ಹಾಗೂ ಕರವೇ ಅಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ