ಬ್ಯಾಂಕ್ ವಿಲೀನ ವಿರೋಧಿಸಿ ಪ್ರತಿಭಟನೆ
ಹಾಸನ: ಬ್ಯಾಂಕ್ಗಳ ವಿಲೀನಿಕರಣ ವಿರೋಧಿಸಿ ಬ್ಯಾಂಕ್ಗಳ ಸಂಘಟನೆ ಸಂಯುಕ್ತ ವೇದಿಕೆಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
Vijaya Karnataka 27 Dec 2018, 5:00 am
ಹಾಸನ: ಬ್ಯಾಂಕ್ಗಳ ವಿಲೀನಿಕರಣ ವಿರೋಧಿಸಿ ಬ್ಯಾಂಕ್ಗಳ ಸಂಘಟನೆ ಸಂಯುಕ್ತ ವೇದಿಕೆಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಕೇಂದ್ರ ಸರಕಾರದ ಬ್ಯಾಂಕ್ ವಿಲೀನ ಪ್ರಕ್ರಿಯೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕ ಬ್ಯಾಂಕ್ಗಳನ್ನು ಉಳಿಸಿ, ಕಾಯಂ ಕೆಲಸಗಳನ್ನು ಹೊರಗುತ್ತಿಗೆ ನೀಡಬೇಡಿ ಎಂದು ಆಗ್ರಹಿಸಿದರು.
ಸುಸ್ತಿಸಾಲ ಮರುಪಾವತಿಗೆ ಕ್ರಮ ಕೈಗೊಳ್ಳುವ ಬದಲು ವಿಲೀನ ಪ್ರಕ್ರಿಯೆಗೆ ಕೈಹಾಕಿ ಎಸ್ಬಿಐ ಜತೆ ಸಹವರ್ತಿ ಬ್ಯಾಂಕ್ ವಿಲೀನ ಮಾಡಿ ಬಳಿಕ ಬ್ಯಾಲೆನ್ಸ್ ಶೀಟ್ನಲ್ಲಿ ನಷ್ಟ ತೋರಿಸುತ್ತಿದೆ. ಭಾರತಕ್ಕೆ ಬೇಕಿರುವುದು ವಿಲೀನ ಪ್ರಕ್ರಿಯೆಯಲ್ಲ ಬ್ಯಾಂಕ್ಗಳ ವಿಸ್ತರಣೆ. ವಿದೇಶಕ್ಕೆ ಹೋಲಿಸಿದರೆ ದೇಶದಲ್ಲಿ ಬ್ಯಾಂಕ್ಗಳ ವಿಸ್ತರಣೆ ಹೆಚ್ಚಾಗಿಲ್ಲ. ವಿಲೀನ ಎಂದರೆ ಶಾಖೆಗಳು, ಬ್ಯಾಂಕ್ಗಳ ಮುಚ್ಚುವಿಕೆ. ಇದರಿಂದ ಉದ್ಯೋಗ ಅಭದ್ರತೆ ಮತ್ತು ಉದ್ಯೋಗವಕಾಶಗಳೇ ಸೃಷ್ಟಿಯಾಗುವುದಿಲ್ಲ. ಕೂಡಲೇ ಸರಕಾರ ವಿಲೀನ ಪ್ರಕ್ರಿಯೆ ನಿಲ್ಲಿಸಬೇಕು. ಬ್ಯಾಂಕ್ ಅಧಿಕಾರಿಗಳು ಮತ್ತು ಉದ್ಯೋಗಿಗಳ ಬೇಡಿಕೆ ಕೂಡಲೇ ಈಡೇರಿಸದಿದ್ದಲ್ಲಿ ಮುಷ್ಕರ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೇಂದ್ರ ಸರಕಾರದ ಬ್ಯಾಂಕ್ ವಿಲೀನ ಪ್ರಕ್ರಿಯೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕ ಬ್ಯಾಂಕ್ಗಳನ್ನು ಉಳಿಸಿ, ಕಾಯಂ ಕೆಲಸಗಳನ್ನು ಹೊರಗುತ್ತಿಗೆ ನೀಡಬೇಡಿ ಎಂದು ಆಗ್ರಹಿಸಿದರು.
ಸುಸ್ತಿಸಾಲ ಮರುಪಾವತಿಗೆ ಕ್ರಮ ಕೈಗೊಳ್ಳುವ ಬದಲು ವಿಲೀನ ಪ್ರಕ್ರಿಯೆಗೆ ಕೈಹಾಕಿ ಎಸ್ಬಿಐ ಜತೆ ಸಹವರ್ತಿ ಬ್ಯಾಂಕ್ ವಿಲೀನ ಮಾಡಿ ಬಳಿಕ ಬ್ಯಾಲೆನ್ಸ್ ಶೀಟ್ನಲ್ಲಿ ನಷ್ಟ ತೋರಿಸುತ್ತಿದೆ. ಭಾರತಕ್ಕೆ ಬೇಕಿರುವುದು ವಿಲೀನ ಪ್ರಕ್ರಿಯೆಯಲ್ಲ ಬ್ಯಾಂಕ್ಗಳ ವಿಸ್ತರಣೆ. ವಿದೇಶಕ್ಕೆ ಹೋಲಿಸಿದರೆ ದೇಶದಲ್ಲಿ ಬ್ಯಾಂಕ್ಗಳ ವಿಸ್ತರಣೆ ಹೆಚ್ಚಾಗಿಲ್ಲ. ವಿಲೀನ ಎಂದರೆ ಶಾಖೆಗಳು, ಬ್ಯಾಂಕ್ಗಳ ಮುಚ್ಚುವಿಕೆ. ಇದರಿಂದ ಉದ್ಯೋಗ ಅಭದ್ರತೆ ಮತ್ತು ಉದ್ಯೋಗವಕಾಶಗಳೇ ಸೃಷ್ಟಿಯಾಗುವುದಿಲ್ಲ. ಕೂಡಲೇ ಸರಕಾರ ವಿಲೀನ ಪ್ರಕ್ರಿಯೆ ನಿಲ್ಲಿಸಬೇಕು. ಬ್ಯಾಂಕ್ ಅಧಿಕಾರಿಗಳು ಮತ್ತು ಉದ್ಯೋಗಿಗಳ ಬೇಡಿಕೆ ಕೂಡಲೇ ಈಡೇರಿಸದಿದ್ದಲ್ಲಿ ಮುಷ್ಕರ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.