ಆ್ಯಪ್ನಗರ

ಅಂಗನವಾಡಿ ಚಾವಣಿ ಅಡಿ ಕಾಣಿಸಿಕೊಂಡ ಹಾವು

ಬೇಲೂರು: ಅಂಗನವಾಡಿ ಕೇಂದ್ರದ ಚಾವಣಿ ಹೆಂಚಿನ ಅಡಿ ಹಾವೊಂದು ಕಾಣಿಸಿಕೊಂಡು, ಮಕ್ಕಳು ಹಾಗೂ ಶಿಕ್ಷಕಿ ಭಯಭೀತರಾಗಿ ಕೂಗುತ್ತಾ ಹೊರ ಓಡಿ ಬಂದ ಘಟನೆ ತಾಲೂಕಿನ ಕೋಗೋಡು ಗ್ರಾಮದಲ್ಲಿ ನಡೆದಿದೆ.

Vijaya Karnataka 23 Nov 2018, 5:00 am
ಬೇಲೂರು: ಅಂಗನವಾಡಿ ಕೇಂದ್ರದ ಚಾವಣಿ ಹೆಂಚಿನ ಅಡಿ ಹಾವೊಂದು ಕಾಣಿಸಿಕೊಂಡು, ಮಕ್ಕಳು ಹಾಗೂ ಶಿಕ್ಷಕಿ ಭಯಭೀತರಾಗಿ ಕೂಗುತ್ತಾ ಹೊರ ಓಡಿ ಬಂದ ಘಟನೆ ತಾಲೂಕಿನ ಕೋಗೋಡು ಗ್ರಾಮದಲ್ಲಿ ನಡೆದಿದೆ.
Vijaya Karnataka Web hassan beluru anganwadi kogodu snake
ಅಂಗನವಾಡಿ ಚಾವಣಿ ಅಡಿ ಕಾಣಿಸಿಕೊಂಡ ಹಾವು


ಚೀಕನಹಳ್ಳಿ ಗ್ರಾಪಂ ವ್ಯಾಪ್ತಿಯ ಕೋಗೋಡು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಮಧ್ಯಾಹ್ನ ಮಕ್ಕಳು ಊಟಕ್ಕೆ ಕುಳಿತ ವೇಳೆ ಹೆಂಚಿನ ಕೆಳಗೆ ಕೇರೆ ಹಾವು ಕಾಣಿಸಿಕೊಂಡಿದೆ. ಇದನ್ನು ಕಂಡು ಭೀತರಾದ ಮಕ್ಕಳು ಹಾಗೂ ಶಿಕ್ಷ ಕಿ ಭಯಭೀತರಾಗಿ ಹೊರಗೋಡಿ ಬಂದರು. ಬಳಿಕ ಅಂಗನವಾಡಿ ಒಳಗೆ ಹಾವು ಸೇರಿಕೊಂಡಿರುವುದನ್ನು ಅರಿತ ಗ್ರಾಮಸ್ಥರಾದ ತುಂಗರಾಜು, ರುದ್ರೇಶ, ಹಾಲಪ್ಪ ಅವರು ಹಾವನ್ನು ಹೊರ ಓಡಿಸಿದರು. ಹಾವು ಹೊರ ಹೋದ ಬಳಿಕವೂ ಮಕ್ಕಳು, ಶಿಕ್ಷ ಕಿ ಮತ್ತು ಸಹಾಯಕಿಯರು ಕಟ್ಟಡದೊಳಕ್ಕೆ ಹೋಗಲು ಕೆಲಕಾಲ ಹಿಂಜರಿಯುತ್ತಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಸಂತೋಷ, ಈಗಿರುವ ಅಂಗನವಾಡಿ ಕಟ್ಟಡ ಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿದೆ. ಆತಂಕದ ನಡುವೆಯೇ ಮಕ್ಕಳು ವಿಹರಿಸಬೇಕಾದೆ. ಅಲ್ಲದೇ, ಕಟ್ಟಡದ ಸುತ್ತಲೂ ಗಿಡ ಗಂಟಿಗಳು ಬೆಳೆದು ನಿಂತಿವೆ. ಹೀಗಾಗಿ ವಿಷ ಜಂತುಗಳು ಕಟ್ಟಡದೊಳಗೆ ಬರಲು ಅನುಕೂಲವಾದಂತಾಘಿದೆ. ಅಲ್ಲದೇ, ಅನೈರ್ಮಲ್ಯತೆ ತಾಂಡವವಾಡುತ್ತಿದೆ. ಹೀಗಾಗಿ ಸಂಬಂಧಿಸಿದವರು ಈ ಬಗ್ಗೆ ಗಮನ ಹರಿಸಿ ಕಟ್ಟಡವನ್ನು ದುರಸ್ತಿಗೊಳಿಸಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ