ಆ್ಯಪ್ನಗರ

ನೊಂದವರು ಮತನೀಡಲ್ಲ, ಗೌಡರ ಮೊಮ್ಮಗ ಗೆಲ್ಲಲ್ಲ

ಹಾಸನ: ಜಿಲ್ಲೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷ ಗಳು ನೂರಕ್ಕೆ ನೂರು ಹೊಂದಾಣಿಕೆ ಸಾಧ್ಯವಿಲ್ಲ. ಜೆಡಿಎಸ್‌ ಕಿರುಕುಳದಿಂದ ಠಾಣೆ ಮಟ್ಟಿಲು ಹತ್ತಿದ ಹಳ್ಳಿಯ ನೊಂದ ಮತದಾರರು ಒಂದಾಗಲ್ಲ.

Vijaya Karnataka 24 Mar 2019, 5:00 am
ಹಾಸನ: ಜಿಲ್ಲೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷ ಗಳು ನೂರಕ್ಕೆ ನೂರು ಹೊಂದಾಣಿಕೆ ಸಾಧ್ಯವಿಲ್ಲ. ಜೆಡಿಎಸ್‌ ಕಿರುಕುಳದಿಂದ ಠಾಣೆ ಮಟ್ಟಿಲು ಹತ್ತಿದ ಹಳ್ಳಿಯ ನೊಂದ ಮತದಾರರು ಒಂದಾಗಲ್ಲ. ಮುಖ್ಯಮಂತ್ರಿಯವರು ನಗರದ ಮತದಾರರ ಮತವೇ ಬೇಡ ಎಂದು ಬಹಿರಂಗವಾಗಿ ಹೇಳಿರುವುದರಿಂದ ದೊಡ್ಡಗೌಡರ ಮೊಮ್ಮಗ ಪ್ರಜ್ವಲ್‌ ರೇವಣ್ಣ ಸೋಲು ಖಚಿತ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಚಿವ ಎ.ಮಂಜು ಹೇಳಿದ್ದಾರೆ.
Vijaya Karnataka Web hassan bjp workers meeting a manju
ನೊಂದವರು ಮತನೀಡಲ್ಲ, ಗೌಡರ ಮೊಮ್ಮಗ ಗೆಲ್ಲಲ್ಲ


ನಗರದಲ್ಲಿ ಶನಿವಾರ ನಡೆದ ಬಿಜೆಪಿ ಕಾರ‍್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಬೆವರಿನ ಹಣದಲ್ಲಿ ಪಾವತಿಸಿದ ತೆರಿಗೆ ಹಣದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ ಹೊರತು ದೇವೇಗೌಡರು, ರೇವಣ್ಣ ಅವರ ಮನೆಯ ಸ್ವಂತ ಹಣವನ್ನು ತಂದು ಅಭಿವೃದ್ಧಿ ಮಾಡುತ್ತಿದ್ದಾರೆಯೇ?. ವರ್ತಕರ ಮೇಲಿನ ದ್ವೇಷ ಹಾಗೂ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರ ಆಸ್ತಿಗೆ ಅನುಕೂಲವಾಗಲಿ ಎಂಬ ದುರುದ್ದೇಶದಿಂದ ಬಿಎಂ ರಸ್ತೆ ಅಂಗಡಿ, ಮಳಿಗೆ ಹೊಡೆಸಿ ಹಾಕಿದರು. ಇನ್ನು 5 ವರ್ಷ ಬಾಳಿಕೆ ಬರುವಂತಿದ್ದ ಬಿಎಂ ರಸ್ತೆ ಡಾಂಬರು ಕಿತ್ತು ಕಾಂಕ್ರಿಟ್‌ ರಸ್ತೆ ಮಾಡಿಸುತ್ತಿದ್ದಾರೆ. ಇದೆಲ್ಲ ಅಭಿವೃದ್ಧಿಯೇ ಎಂದು ಪ್ರಶ್ನಿಸಿದರು.

ಗೆಲುವಲ್ಲ, ಕಂಠಕ: 9 ಅನ್ನೋದು ಎಚ್‌.ಡಿ. ದೇವೇಗೌಡರಿಗೆ ಕಂಟಕವಾಗಿದೆ. 1989, 1999 ಅದರಂತೆ 2019 ರಲ್ಲೂ ಅವರಿಗೆ ಸೋಲಾಗಲಿದೆ. ಕಾಕತಾಳಿಯವಾಗಿ ಚುನಾವಣೆ 18ಕ್ಕೆ ಬಂದಿದೆ. ಅದೂ 8 ಮತ್ತು 1 ಸೇರಿ 9 ಆಯ್ತು. 9 ಇವರಿಗೆ ಕಂಟಕ. ಜೆಡಿಎಸ್‌ನವರು ಹಠ ಹಿಡಿದು ಕಾಂಗ್ರೆಸ್‌ನಿಂದ 8 ಸೀಟ್‌ ಪಡೆದಿದ್ದಾರೆ. ಆ ಸ್ಥಾನಕ್ಕೆ ಚುನಾವಣೆಗೆ ನಿಲ್ಲಿಸಲು ಕಾಂಗ್ರೆಸ್‌ನಿಂದಲೇ ನಾಯಕರನ್ನೂ ಪಕ್ಷ ಕ್ಕೆ ಸೇರಿಸಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಸ್ಪರ್ಧಿಸೋಕೆ ಇವರಿಗೆ ಅಭ್ಯರ್ಥಿಗಳೇ ಇಲ್ಲ. ಆದರೂ ಇವರಿಗೆ ಹೆಚ್ಚಿನ ಸ್ಥಾನ ಬಿಟ್ಟುಕೊಡಬೇಕು. ಕಾಂಗ್ರೆಸ್‌ ಹೈಕಮಾಂಡ್‌ ಹಾಗೂ ಕೆಲ ನಾಯಕರಾದ ನೀವು ಒಂದಾಗಬಹುದು. ಆದರೆ ಕಾರ್ಯಕರ್ತರು ಒಂದಾಗುವುದಿಲ್ಲ. ಅವರೆಲ್ಲ ಬಿಜೆಪಿ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರವನ್ನು ನೊಂದು ತೊರೆದ ಗೌಡ್ರು: ದೇವೇಗೌಡರು ಅತ್ತಿದ್ದು ಗೌಡ್ರೆ ನೀವೇ ಹಾಸನದಿಂದಲೇ ನಿಲ್ಲಲಿ ಎಂದು ಹೇಳಲಿ ಅಂತ. ಆದರೆ, ಅವರ ಮಗ, ಮೊಮ್ಮಗ, ಸೊಸೆ ಹೇಳಲಿಲ್ಲ. ಹೋದರೆ ಹೋಗಲಿ ಅಂತ ಅವರೂ ಸೇರಿಕೊಂಡು ಅತ್ತರು. ಇವರು ಅಳೋದ್ರಲ್ಲಿ ನಿಸ್ಸೀಮರು. ನಮಗೆ ಕಾಂಗ್ರೆಸ್‌ ಮತವೇ ಬೇಡಾ ಎಂದಿದ್ದ ಜೆಡಿಎಸ್‌ ನಾಯಕರ ವಿರುದ್ಧ ಸೇಡು ತೀರಿಸಿಕೊಳ್ಳಲು ಮತದಾರರು ಕಾದಿದ್ದಾರೆ. ಈ ಬಾರಿ ದೇವೇಗೌಡರ ಮೊಮ್ಮಗ ಸೋಲುವುದು ನಿಶ್ಚಿತ ಎಂದರು.

ಕೃಷಿ ಖಾತೆ ಬೇಡ: ರೈತರ ಮಕ್ಕಳಾದ ಇವರಿಗೆ ಕೃಷಿ ಖಾತೆ, ತೋಟಗಾರಿಕೆ ಖಾತೆ ಬೇಡ. ಆದರೆ, ಲೋಕೋಪಯೋಗಿ ಖಾತೆ, ಇಂಧನ ಖಾತೆಯೇ ಬೇಕು. ಯಾವ ಖಾತೆಯಲ್ಲಿ ದುಡ್ಡಿದೆಯೋ ಅದೇ ಖಾತೆಬೇಕು ಅಂತಾರೆ ಎಂದು ರೇವಣ್ಣ ಎಂದು ಟೀಕಿಸಿದರು.

ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಐತಿಹಾಸಿಕ ಆಗಬೇಕು, ಮಂಡ್ಯದಲ್ಲಿ ಸುಮಲತಾ ನಾಮಪತ್ರ ಸಲ್ಲಿಸಿದ ದಿನದಂದು ಆದಂತೆ ಆಗಬೇಕು. ಜೆಡಿಎಸ್‌ ನಾಮಪತ್ರ ಸಲ್ಲಿಕೆ ವೇಳೆ ಬಂದದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ. ನಾಮಪತ್ರ ಸಲ್ಲಿಕೆ ದಿನ ಸ್ವಾಭಿಮಾನಿ ಸಮಾವೇಶ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.

ಶಾಸಕ ಪ್ರೀತಂ ಜೆ.ಗೌಡ, ಪಕ್ಷದ ಮುಖಂಡರಾದ ಸುರೇಶ್‌ಕುಮಾರ್‌, ಶೋಭನ್‌ ಬಾಬು, ಕಂದಲಿ ಪ್ರಕಾಶ್‌, ಕಾರ‍್ಯಕರ್ತರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ