ಆ್ಯಪ್ನಗರ

ಗುಂಪು ಗಲಾಟೆ: ಬೆಚ್ಚಿಬಿದ್ದ ಸ್ಥಳೀಯರು

ಬೆಚ್ಚಿಬಿದ್ದ ಸ್ಥಳೀಯರು ವಿಕ ಸುದ್ದಿಲೋಕ ಹಾಸನ ನಗರದ ಬಿಎಂ ರಸ್ತೆಯ ಮಹಾವೀರ ಪೆಟ್ರೋಲ್‌ ಬಂಕ್‌ ಎದುರು ನಡುರಸ್ತೆಯಲ್ಲಿ ಶುಕ್ರವಾರ ರಾತ್ರಿ ನಡೆದ ಗ್ಯಾಂಗ್‌ವಾರ್‌ಗೆ ...

Vijaya Karnataka 20 Oct 2018, 5:00 am
ಗುಂಪು ಗಲಾಟೆ: ಬೆಚ್ಚಿಬಿದ್ದ ಸ್ಥಳೀಯರು
Vijaya Karnataka Web hassan bm road friday night two gang war police arrest
ಗುಂಪು ಗಲಾಟೆ: ಬೆಚ್ಚಿಬಿದ್ದ ಸ್ಥಳೀಯರು


ವಿಕ ಸುದ್ದಿಲೋಕ ಹಾಸನ

ನಗರದ ಬಿಎಂ ರಸ್ತೆಯ ಮಹಾವೀರ ಪೆಟ್ರೋಲ್‌ ಬಂಕ್‌ ಎದುರು ನಡುರಸ್ತೆಯಲ್ಲಿ ಶುಕ್ರವಾರ ರಾತ್ರಿ ನಡೆದ ಗ್ಯಾಂಗ್‌ವಾರ್‌ಗೆ ಸಾರ್ವಜನಿಕರು ಬೆಚ್ಚಿ ಬಿದ್ದರು.

ಕಾರು ಮುಂದೆ ಸಾಗಲು ಜಾಗಬಿಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಹಿಂಬಾಲಿಸಿಕೊಂಡು ಮತ್ತೊಂದು ಕಾರಿನಲ್ಲಿ ಬಂದಿಳಿದ ಐದಾರು ಮಂದಿ ವ್ಯಕ್ತಿಯೊಂದಿಗೆ ವಾಗ್ವಾದಕ್ಕೆ ಇಳಿದರು. ನೋಡ,ನೋಡುತ್ತಿದ್ದಂತೆ ಪರಸ್ಪರ ಅವಾಚ್ಯ ಶಬ್ಧಗಳಿಂದ ಬೈಯುತ್ತಾ ಹೊಡೆದಾಡಲು ಪ್ರಾರಂಭಿಸಿದರು. ಒಂದು ಕಾರಿನಲ್ಲಿದ್ದ ಮೂವರ ಮೇಲೆ ಮತ್ತೊಂದು ಐವರ ತಂಡ ಚೆನ್ನಾಗಿ ಥಳಿಸಿದರು. ವ್ಯಕ್ತಿಯೊಬ್ಬನನ್ನು ನೆಲ್ಲಕ್ಕೆ ಹಾಕಿಕೊಂಡು ತುಣಿದು ಆಕ್ರೋಶ ವ್ಯಕ್ತಪಡಿಸಿದರು. ಘಟನೆಯಿಂದ ಧರ್ಮಸ್ಥಳ, ಮಂಗಳೂರು,ಶೃಂಗೇರಿ ಭಾಗದಿಂದ ಬಂದ ಪ್ರವಾಸಿಗರ ವಾಹನ, ಬಸ್‌ ಮತ್ತಿತರ ವಾಹನ ಸಂಚಾರಕ್ಕೂ ಅಡ್ಡಿಯಾಯಿತು. ಕ್ಷಣಮಾತ್ರದಲ್ಲಿ ಸ್ಥಳಕ್ಕೆ ಆಗಮಿಸಿದ ನಗರಠಾಣೆ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡರು.

ನಗರಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ದಿನದಂದೇ ಬಿಎಂ ರಸ್ತೆಯಲ್ಲಿ ಗುಂಪೊಂದು ವ್ಯಕ್ತಿಯೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆ ನಡೆಸಿತ್ತು. ಇದೇ ರೀತಿ ನಗರದಲ್ಲಿ ರೌಡಿಗಳು ಅಟ್ಟಹಾಸ ಮೆರೆಯಲು ಮುಂದಾಗುತ್ತಿದ್ದು,ನೂತನ ಎಸ್‌ಪಿ ಪ್ರಕಾಶ್‌ಗೌಡರು ಈ ಕೂಡಲೇ ಕ್ರಮ ಕೈಗೊಂಡು ರೌಡಿಗಳಿಗೆ ಮಟ್ಟಹಾಕಬೇಕು ಎಂದು ಸ್ಥಳದಲ್ಲಿದ್ದವರು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ