ಹಾಸನ: ನಗರದ ಕಾಸ್ಮೋಪಾಲಿಟನ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್(ರಿ) ಅಕ್ರಮ ಸಂಬಂಧ ವಿಚಾರಣೆಗಾಗಿ ಸಹಕಾರ ಸಂಘಗಳ ಉಪನಿಬಂಧಕರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಿ ಸರಕಾರ ಆದೇಶ ಹೊರಡಿಸಿದೆ.
ಸಂಸ್ಥೆಯ ಆಡಳಿತ ಮಂಡಳಿ ಅವಧಿ 2017ರ ಸೆ.30ರಂದು ಮುಕ್ತಾಯಗೊಂಡಿದ್ದು, ಆದರೆ ಆಡಳಿತ ಮಂಡಳಿ 2015ರ ಜು.26ರಂದು ಬೈಲಾ ತಿದ್ದುಪಡಿಯಲ್ಲಿ ಐದು ವರ್ಷಕ್ಕೆ ಹೆಚ್ಚಿಸಿಕೊಂಡಿದೆ. ಈ ತಿದ್ದುಪಡಿ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಆದೇಶದ ವರೆಗೆ ತಿದ್ದುಪಡಿ ಅಥವಾ ಅನುಷ್ಠಾನಗೊಳಿಸದಂತೆ 2017ರ ಜು.12ರಂದು ನ್ಯಾಯಾಲಯ ಆದೇಶಿಸಿತ್ತು. ಸಂಸ್ಥೆಯ ಆಡಳಿತ ಮಂಡಳಿ 2017ರ ಜು.11ರಂದು ನಡೆದ ಸಭೆಯಲ್ಲಿ ಚುನಾವಣೆಯನ್ನು 2017ರ ಆ.6ರಂದು ನಡೆಸಲು ತೀರ್ಮಾನಿಸಿತ್ತು. ನಿಗದಿಪಡಿಸಿದಂತೆ ಚುನಾವಣೆ ನಡೆಯದ ಕಾರಣ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಅವಧಿ ಮುಕ್ತಾಯಗೊಂಡಿರುವುದರಿಂದ ಈ ಸಂಘಕ್ಕೆ ಆರು ತಿಂಗಳ ಅವಧಿಗೆ ಹಾಸನದ ಸಹಾಯಕ ಉಪ ನಿಬಂಧಕರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿದೆ.
ಸಂಸ್ಥೆಯಲ್ಲಿನ ಅವ್ಯವಹಾರವನ್ನು ಸರಿಪಡಿಸಿ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಬೇಕೆಂದು ರಾಜ್ಯಪಾಲರ ಆದೇಶಾನುಸಾರ ಸಹಕಾರ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಆರ್.ಸಂತಾಮರೈ ಆದೇಶಿಸಿದ್ದಾರೆ.
ಸಂಸ್ಥೆಯ ಆಡಳಿತ ಮಂಡಳಿ ಅವಧಿ 2017ರ ಸೆ.30ರಂದು ಮುಕ್ತಾಯಗೊಂಡಿದ್ದು, ಆದರೆ ಆಡಳಿತ ಮಂಡಳಿ 2015ರ ಜು.26ರಂದು ಬೈಲಾ ತಿದ್ದುಪಡಿಯಲ್ಲಿ ಐದು ವರ್ಷಕ್ಕೆ ಹೆಚ್ಚಿಸಿಕೊಂಡಿದೆ. ಈ ತಿದ್ದುಪಡಿ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಆದೇಶದ ವರೆಗೆ ತಿದ್ದುಪಡಿ ಅಥವಾ ಅನುಷ್ಠಾನಗೊಳಿಸದಂತೆ 2017ರ ಜು.12ರಂದು ನ್ಯಾಯಾಲಯ ಆದೇಶಿಸಿತ್ತು. ಸಂಸ್ಥೆಯ ಆಡಳಿತ ಮಂಡಳಿ 2017ರ ಜು.11ರಂದು ನಡೆದ ಸಭೆಯಲ್ಲಿ ಚುನಾವಣೆಯನ್ನು 2017ರ ಆ.6ರಂದು ನಡೆಸಲು ತೀರ್ಮಾನಿಸಿತ್ತು. ನಿಗದಿಪಡಿಸಿದಂತೆ ಚುನಾವಣೆ ನಡೆಯದ ಕಾರಣ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಅವಧಿ ಮುಕ್ತಾಯಗೊಂಡಿರುವುದರಿಂದ ಈ ಸಂಘಕ್ಕೆ ಆರು ತಿಂಗಳ ಅವಧಿಗೆ ಹಾಸನದ ಸಹಾಯಕ ಉಪ ನಿಬಂಧಕರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿದೆ.
ಸಂಸ್ಥೆಯಲ್ಲಿನ ಅವ್ಯವಹಾರವನ್ನು ಸರಿಪಡಿಸಿ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಬೇಕೆಂದು ರಾಜ್ಯಪಾಲರ ಆದೇಶಾನುಸಾರ ಸಹಕಾರ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಆರ್.ಸಂತಾಮರೈ ಆದೇಶಿಸಿದ್ದಾರೆ.